ಹಿಂದೂ ಸಂಸ್ಕೃತಿಯ ವಿಘಟನೆಗೆ ಕಾರಣ ಏನು?
ಸನಾತನ ವೈದಿಕ ಪರಂಪರೆಯು ಮಧ್ಯಕಾಲದಲ್ಲಿ ಅಜ್ಞಾನದಿಂದ ಅಧರ್ಮದ ಹಾದಿಹಿಡಿದಾಗ ಕ್ರಿ ಪೂ 500 ರ ಸುಮಾರಿಗೆ ಭಾರತದಲ್ಲಿ ಜೈನ ಹಾಗೂ ಬೌದ್ಧ ಎನ್ನುವ ಎರಡು ಅವೈದಿಕ ಮತಗಳ ಉದಯವಾಯಿತು. ಹಾಗೂ ಇವುಗಳು ಭಾರತದ ಬಹುಭಾಗದಲ್ಲಿ ಪ್ರಸಿದ್ಧಿ ಪಡೆದು ರಾಜಾಶ್ರಯದೊಂದಿಗೆ ದೇಶ ವಿದೇಶಗಳಲ್ಲಿಯೂ ತಮ್ಮ ಪ್ರಭಾವವನ್ನು ಪಸರಿಸಿದವು. ನಂತರದಲ್ಲಿ ಇಂದಿಗೆ ಎರಡು ಸಾವಿರ ಸಾವಿರ ವರುಷಗಳ ಹಿಂದೆ ಯುರೋಪಿನಲ್ಲಿ ಕ್ರೈಸ್ತ ವೆಂಬ ಹೊಸ ಮತವೊಂದು ಉದಯಿಸಿತು. ನಂತರದಲ್ಲಿ ಇದು ವಿಸ್ತಾರಶಾಹೀ ಮನಸ್ಥಿತಿಯಿಂದಕೂಡಿದ್ದು, ಧರ್ಮದಿಂದ ವಿಮುಖವಾದ ರಾಜಸ ಗುಣದ ಭೋಗಮತವಾಗಿ ಬೆಳೆಯಿತು. ಇದರ ಬೆಂಬಲಿಗರಿಂದ ಸ್ಥಾಪಿತವಾದ ಮಿಶನರಿಗಳಿಂದ ಉದಯಿಸಿದ ಮತ ಪ್ರಚಾರಕರಿಂದ ಅಜ್ಞಾನದ ಪ್ರಚಾರ ಆರಂಭವಾಗಿ ವಿಶ್ವದೆಲ್ಲೆಡೆ ಈ ದುರ್ಮತವು ಹುಲುಸಾಗಿ ಬೆಳೆಯಿತು. ಕ್ರೈಸ್ತಮತಪ್ರಚಾರಕ್ಕಾಗಿ ಈ ಮತಪ್ರಚಾರಕರ ಪ್ರೇರಣೆಯಿಂದ ಹಲವು ದೇಶಗಳಲ್ಲಿ ಹಲವು ಯುದ್ಧ ಹಾಗೂ ಅಸಂಖ್ಯಾತ ಜನರ ಮಾರಣ ಹೋಮ ಆಯಿತು. ಅನೇಕ ದೇಶಗಳಲ್ಲಿ ಅಲ್ಲಿನ ಪಾರಂಪರಿಕ ಕಲೆ, ಸಂಸ್ಕೃತಿಯ ನಾಶವಾಯಿತು. ಇಂತಹ ವಿಸ್ತಾರವಾದಿ ಮತಗಳು ಬರಡು ಭೂಮಿ ಇದ್ದಂತೆ. ಇದರ ಅಡಿಯಲ್ಲಿ ಯಾವ ಕಲೆಯೂ ಯಾವ ಸಂಸ್ಕೃತಿಯೂ ಬೆಳೆಯಲು ಸಾಧ್ಯವಿಲ್ಲ. ಕೇವಲ ಅಧಿಕಾರ ದಾಹ, ದೈಹಿಕ ವಾಂಛೆ, ಭೋಗ, ಅರ್ಥ, ಕಾಮ, ಮುಂತಾಗಿ ಭೌತಿಕ ಸುಖಗಳೇ ಇವುಗಳಿಗೇ ಮಹತ್ವ. ಭೌತಿಕ ಸುಖ ಸಾಧನೆಗಾಗಿ ಎಂತಹ ನೀಚ ಕಾರ್ಯವನ್ನೂ ಮಾಡಲು ಹೇಸದ ಮತಾಂಧರಾಗಿ ಅಮಾಯಕರನ್ನು ಮತಾಂತರ ಮಾಡುವ ಮತಪ್ರಚಾರಕರುಗಳು ಇಲ್ಲಿ ಅಧಿಕಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಸಾವಿರದ ಐದುನೂರು ವರುಷಗಳ ಹಿಂದೆ ಮಧ್ಯ ಪ್ರಾಚ್ಯದ ಮರಳು ಗಾಡಿನಲ್ಲಿ ಇನ್ನೊಂದು ಭಯೋತ್ಪಾದಕ ಮತದ ಉದಯವಾಯಿತು. ಇವರಲ್ಲಿ ಕತ್ತಿಯೇ ಮಾತಾಡುತ್ತಿತ್ತು ಹಿಂಸೆಯೇ ಸಂಸ್ಕಾರವಾಯಿತು. ಅಲ್ಲಿ ಅನಾದಿಯಿಂದ ಅನುಸರಿಸಿಕೊಂಡು ಬರುತ್ತಿದ್ದ ಹಿಂದೂ ಸಂಸ್ಕೃತಿಯ ವಿರುದ್ಧವಾಗಿ ಜನ್ಮತಾಳಿದ ಹೊಸ ವಿಚಾರಧಾರೆ. ಅಂದರೆ ಹಿಂದುಗಳು ಏನು ಮಾಡುತ್ತಾರೆ ಅದಕ್ಕೆ ವಿರುದ್ಧವಾದುದನ್ನು ಮಾಡುವುದೇ ಈ ಮತದ ಸಿದ್ಧಾಂತ. ಕೆಲವು ಆಚರಣೆಗಳನ್ನು ಹಿಂದೂ ಸಂಸ್ಕೃತಿಯಿಂದ ಎರವಲು ಪಡೆದರೆ, ಹಲವನ್ನು ಇದಕ್ಕೆ ವಿರುದ್ಧವಾಗಿ ಮಾಡುವುದೇ ತಮ್ಮ ಸಂಸ್ಕೃತಿ ಎನ್ನುವ ವಿಚಾರಧಾರೆ ಹುಟ್ಟಿಕೊಂಡಿತು. ಸಾತ್ವಿಕ ವಿಚಾರಧಾರೆಗೆ ವಿರುದ್ಧವಾಗಿ ಹುಟ್ಟಿಕೊಂಡ ತಾಮಸ ವಿಚಾರಧಾರೆಯಾಗಿ ಇದು ಮುಂದೆ ಬೆಳೆದು ಅಸುರ ಮತವಾಗಿ ಭಯೋತ್ಪಾದನೆಯ ಮತವಾಗಿ ಗುರುತಿಸಿ ಕೊಂಡಿತು. ಅಲ್ಲಿದ್ದ ಧರ್ಮಾತ್ಮರನ್ನು ಶಿವಾರಾಧಕರನ್ನು ಕೊಲ್ಲಲಾಯಿತು. ಇಲ್ಲವೆ ಓಡಿಸಲಾಯಿತು. ಅಲ್ಲಿರುವ ಪರಮೇಶ್ವರನ ಆರಾಧನೆಯನ್ನು ನಿಲ್ಲಿಸಲಾಯಿತು. ನಂತರ ಅಸುರ ಮತದ ಭೋಧನೆ ಆರಂಭ ವಾಯಿತು. ಧರ್ಮದ ವಿರುಧ್ಧದ ಆಚರಣೆಯೇ ಇವರ ಧರ್ಮ ವಾಯಿತು ಅಂದರೆ ಅಧರ್ಮವೇ ಧರ್ಮವಾಗಿ . ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುವುದೇ ತಮ್ಮ ಸಂಸ್ಕೃತಿ ಎನ್ನುವಂತೆ ಮತಾಂಧರಿಂದ ಎಲ್ಲದರಲ್ಲೂ ಸನಾತನ ಧರ್ಮಕ್ಕೆ ವಿರಿದ್ಧಆಚರಣೆ ಆರಂಭ ವಾಯಿತು. ಅಂದರೆ ಅಸುರರಿಗೆ ಅನ್ಯಾಯವೇ ಧರ್ಮ ವಾಗಿದೆ. ಹೀಗೆ ವಿದೇಶದಲ್ಲಿ ಉದಯವಾದ ಆರ್ಥಿಕ ದಾರಿದ್ರ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೊಂದಿದ್ದ ಹಾಗೂ ಮಾನವೀಯತೆಯನ್ನು ಕೊಂದಿದ್ದ ಪಾಶವೀ ಅಧರ್ಮ ಮತಪ್ರಚಾರಕರು ಸಮೃದ್ಧ ಹಿಂದೂಸ್ಥಾನದ ಸಂಪತ್ತನ್ನು ದೋಚಲು ಲೂಟಿಮಾಡಲು ಭಾರತದೇಶದತ್ತ ದಂಡೆತ್ತಿ ಬಂದರು. ಪ್ರಾಚೀನ ಭಾರತದಲ್ಲಿ ಸಮೃದ್ಧ ಶ್ರೀಮಂತಿಕೆಯಿಂದ ಶೋಭಾಯಮಾನವಾಗಿದ್ದ ಹಿಂದೂ ವೈದಿಕ ಸಂಸ್ಕೃತಿ ಕಾಲ ಕಳೆದಂತೆ ಶಿಥಿಲ ವಾಗುತ್ತಾ ದುರ್ಬಳಕೆಗೊಳಗಾಗುತ್ತಾ, ಅರ್ಥಗಳು ಅನರ್ಥಗಳಾಗುತ್ತಾ , ಆಚರಣೆಗಳು ಅಂಧಾನುಕರಣೆ ಗೊಳ್ಳುತ್ತಾ, ಅಧೋಮುಖ ಚಲನೆಗೆ ಒಳಗಾಯಿತು. ಇಂತಹ ಸಮಯದಲ್ಲಿ ಧರ್ಮದ ದಾರಿಯಿಂದ ವಿಮುಖರಾದ ಕೆಲವು ಸ್ವಾರ್ಥ ಜನರು ಅಧರ್ಮದ ಹಾದಿ ಹಿಡಿದು ಧರ್ಮಶಾಸ್ತ್ರವನ್ನು ತಿರುಚಿ ತಮ್ಮ ಸ್ವಾರ್ಥಕ್ಕೆ ಬೇಕಾದಂತೆ ಬದಲಿಸಿಕೊಂಡು ಅಸಾಹಾಯಕರನ್ನು ಅಮಾಯಕರನ್ನು ಶೋಷಿಸುವ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿತ್ತು. ಹೀಗೆ ಸುಸಂಸ್ಕಾರಗಳು ಹಿಂಸೆಯ ಹಾದಿ ಹಿಡಿದಾಗ ಕಾಲಕ್ಕೆ ತಕ್ಕಂತೆ ಸುಧಾರಕರು ಹುಟ್ಟಿಕೊಂಡರು ಇವರುಗಳಲ್ಲಿ ಮುಖ್ಯವಾಗಿ ಪ್ರಸಿದ್ಧಿ ಹೊಂದಿದವರು, ಜೈನರು ಹಾಗೂ ಗೌತಮ ಬುದ್ಧ ಇವರುಗಳು ಅಡ್ಡದಾರಿ ಹಿಡಿದ ಅನಿಷ್ಟ ಪದ್ದತಿಗಳನ್ನು ಪ್ರಭಲವಾಗಿ ಖಂಡಿಸಿ ಅಹಿಂಸಾ ಮಾರ್ಗವನ್ನು ಪ್ರಭಲವಾಗಿ ಪ್ರತಿಪಾದಿಸಿದರು. ಇವರ ವಿಚಾರ ಧಾರೆಗಳಿಂದ ವೈದಿಕ ಪರಂಪರೆ ಹಾಗೂ ಭಾರತೀಯ ತತ್ವಜ್ಞಾನ ಎರಡಾಗಿ ವಿಭಾಗವಾಯಿತು. ಹೀಗೆ ಭಿನ್ನ ವಿಚಾರ ಧಾರೆಯನ್ನು ಅನುಸರಿಸಿದವರು ಆಯಾ ಮತಾನುಯಾಯಿಗಳೆನಿಸಿ ಕೊಂಡರು. ಬೌದ್ಧ ಹಾಗೂ ಜೈನ ಮತೋದಯದ ಉದ್ದೇಶ ಸಮಾಜದಲ್ಲಿನ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸೆಯನ್ನು ನಿಲ್ಲಿಸಿ ಮಾನವೀಯ ಧರ್ಮ ಪುನಃ ಪ್ರತಿಷ್ಠಾಪಿಸುವುದೇ ಆಗಿತ್ತು. ಅಜ್ಞಾನ ದಿಂದ ಅಡ್ಡದಾರಿ ಹಿಡದವರನ್ನು ನಿಗ್ರಹಿಸುವುದಾಗಿತ್ತು. ಹಾಗೂ ಸಮಾಜಕ್ಕೆ ಹೊಸ ದಾರಿಯನ್ನು ತೋರಿಸುವುದು ಆಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂದೂ ಸಮಾಜ ಮುಖ್ಯವಾಗಿ ಮೂರು ವಿಭಾಗ ವಾಯಿತು. 1. ಮೂಲ ವೈದಿಕ ಮತ 2.ಉದಯಿಸಿದ ಜೈನ ಮತ 3. ನೂತನವಾದ ಬೌದ್ಧ ಮತ ಹೀಗೆ ಸಾಂಸ್ಕೃತಿಕವಾಗಿಯೂ ವಿಭಿನ್ನ ಆಚರಣೆಗಳು ರೂಢಿಗೆ ಬಂದವು. ಒಂದೇ ಸಮಾಜ ಮೂರು ವಿಭಾಗವಾಯಿತು ಅಹಿಂಸಾಪರಮೋಧರ್ಮಃ ಎನ್ನುವ ಅತಾರ್ಕಿಕ ವಿಚಾರಧಾರೆ. ಇಲ್ಲಿ ಅತಾರ್ಕಿಕ ಎನ್ನಲು ಕಾರಣ ಇವರು ಕ್ಷಾತ್ರವನ್ನು ಮರೆತು ಶಸ್ತ್ರತ್ಯಜಿಸಿದರು. ಇದರಿಂದಾಗಿ ದೇಶ ಪರಕೀಯರ ಆಕ್ರಮಣಕ್ಕೆ ಒಳಗಾಗಿ ದುರ್ಬಲವಾಯಿತು. ಅಹಿಂಸಾವಾದ ಬೌದ್ಧ ಹಾಗೂ ಜೈನರಿಂದ ಉಪದೇಶಿಸಲ್ಲಪಟ್ಟಿತು. ಹೊಸದಾಗಿ ಉದಯಿಸಿದ ಜೈನ ಬೌದ್ಧ ಮತಗಳಿಗೆ ರಾಜಾಶ್ರಯ ದೊರೆತು. ಅವುಗಳು ಪ್ರಚಾರ ಪಡೆದು ದೇಶಾದ್ಯಂತ ವಿಸ್ಥರಿಸಲ್ಪಟ್ಟವು. ಇವುಗಳು ಭೋಗ ಅಥವಾ ಅಸುರ ಗುಣ ಪ್ರಧಾನ ಮತಗಳಾಗಿರದೆ. ವೈರಾಗ್ಯ ತತ್ವ ಸಾರುವ ಸಾತ್ವಿಕ ಮತಗಳೇ ಆಗಿದ್ದವು. ಇವರ ಅತಾರ್ಕಿಕವಾದ ಅತಿಯಾದ ಅಹಿಂಸಾ ಪ್ರಚಾರದ ಪ್ರಭಾವದಿಂದ ಭಾರತೀಯರಲ್ಲಿ ಸಹಜವಾಗಿ ಇರಬೇಕಾದ ಕ್ಷಾತ್ರ ಕ್ಷತ್ರಿಯರಲ್ಲಿ ಕ್ಷೀಣಿಸಿತು. ಶಸ್ತ್ರಾಭ್ಯಾಸ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ದೃಷ್ಟಿಯುದ್ಧ, ಮಲ್ಲಯುದ್ಧ, ಜಲಯುದ್ಧ, ಮುಂತಾದ ಹಿಂಸೆರಹಿತ ಯುದ್ಧಗಳು ಮುನ್ನೆಲೆಗೆ ಬಂದವು. ಹಿಂಸೆ ಹಾಗೂ ಅಹಿಂಸೆಯ ತಪ್ಪು ತಿಳುವಳಿಕೆಯಿಂದಾಗಿ, ಬೌದ್ಧ ಮತವು ಜನರಿಗೆ ಸನ್ಯಾಸ ಹಾಗೂ ವೈರಾಗ್ಯವನ್ನೂ ಹಾಗೂ ಜೈನ ಮತವು ಜನರಿಗೆ ಅಹಿಂಸೆಯನ್ನೂ ಅತಿಯಾಗಿ ಭೋಧಿಸಿದರು. ಇದೇ ಉಪದೇಶವನ್ನು ಜನರು ಆಚರಿಸುತ್ತಾ ಬಂದಿದ್ದರಿಂದ ಹಿಂದೂ ಧರ್ಮದ ಚಾತುರ್ವರ್ಣ ಶಿಥಿಲವಾಯಿತು. ಹಿಂದೂಗಳ ಮೂಲಗುಣ ಕ್ಷಾತ್ರ ಹಾಗೂ ತೇಜ ಕ್ಷೀಣಿಸುತ್ತಾ ಧರ್ಮಕ್ಷಯ ಆರಂಭ ವಾಗಲು ಈ ಮತಗಳ ಅತಿಯಾದ ಅಹಿಂಸಾ ಬೋಧನೆಗಳೇ ಕಾರಣ ವಾದುವು. ವೈರಾಗ್ಯ ಹಾಗೂ ಅಹಿಂಸೆ ಧರ್ಮದ ಒಂದು ಅಂಗಗಳಾಗಿತ್ತು ಆದರೆ ಈ ಮತಗಳು ಈ ಸೀಮಿತಾಚರಣೆಯನ್ನೇ ಸಂಪೂರ್ಣವಾಗಿ ಅಪ್ಪಿಕೊಂಡು ಅದೊಂದೇ ಧರ್ಮ ಎಂಬಂತೆ ಶಸ್ತ್ರತ್ಯಾಗ ಮಾಡಿದವು. ನಮ್ಮ ಪ್ರಾಚೀನ ಸಂಪ್ರದಾಯವಾದ ಹೋಮ, ಹವನ ಗಳನ್ನು ತ್ಯಾಗ ಮಾಡಿದವು. ಇವರಿಂದಾಗಿ ಕ್ಷತ್ರಿಯರು ಶಸ್ತ್ರಾಭ್ಯಾಸವನ್ನೂ ಹಾಗೂ ರಾಜಾಶ್ರಯ ರಹಿತ ಬ್ರಾಹ್ಮಣರು ವೇದಾಧ್ಯಯನ ಮತ್ತು ಹೋಮ ಹವನಾದಿ ಧಾರ್ಮಿಕ ಕಾರ್ಯದಿಂದಲೂ ವಿಮುಖರಾಗ ತೊಡಗಿದರು. ಬೌದ್ಧ ಹಾಗು ಜೈನ ಸನ್ಯಾಸಿಗಳಿಂದ ಪ್ರಭಾವಿತರಾದ ಜನ ಸನ್ಯಾಸಿಗಳೂ, ಭಿಕ್ಷುಗಳೂ ಆಗಿ ಆ ಮೂಲಕ ಸೋಮಾರಿಗಳಾಗಿ ಧರ್ಮರಕ್ಷಣೆಗೆ ಬೇಕಾದ ಪ್ರಮುಖ ಬಲವಾದ ಶಸ್ತ್ರ ಹಾಗೂ ವೈದಿಕ ಕ್ಷಾತ್ರ ಜ್ಞಾನದಿಂದ ವಿಮುಖರಾಗಿದ್ದರಿಂದ ಭಾರತ ದೇಶದ ಸೈನಿಕಬಲ ದುರ್ಬಲವಾಯಿತು. ಶ್ರೀಮಂತ ಸಂಪದ್ಭರಿತ ಭಲಿಷ್ಟ ಭಾರತ ದುರ್ಭಲವಾಗಲು ಸತ್ಯ ಅಹಿಂಸೆ ಎಂಬ ಬೌದ್ಧ ಹಾಗೂ ಜೈನ ಮತಗಳ ಪ್ರಭಾವಕ್ಕೆ ಅತಿಯಾಗಿ ಜೋತುಬಿದ್ದು ಕ್ಷಾತ್ರ ತೇಜವನ್ನು ಕಡೆಗಣಿಸಿದ್ದರಿಂದಾಗಿ ದೇಶ ದುರ್ಬಲವಾಯಿತು. ಇದರಿಂದಾಗಿ ಸಾವಿರ ವರುಷದ ದಾಸ್ಯ ಹಾಗೂ ಛಿದ್ರಗೊಂಡ ಅಖಂಡ ಭಾರತ ನಮ್ಮ ಮುಂದಿದೆ. ಇಂದಿಗೂ ನಮಗೆ ಹೇಡಿತನದ ಗಾಂಧಿವಾದವನ್ನು ಬೋಧಿಸಲಾಗುತ್ತಿದೆ. ನಾವು ನಮ್ಮ ರಕ್ತದ ಮೂಲಗುಣವನ್ನು ನೆನಪಿಸಿಕೊಳ್ಳಬೇಕಿದೆ. ಇಂತಹುದೇ ಸ್ಥಿತಿಯಲ್ಲಿ ಅರ್ಜುನನಿಗೆ ಕೃಷ್ಣ ಗೀತೆಯನ್ನು ಬೋಧಿಸಿದ್ದಾನೆ. ಹಿಂದುಗಳೆಲ್ಲರೂ ಭಗವದ್ಗೀತೆಯನ್ನು ಅದರ ಉದ್ದೇಶವನ್ನು ಅರಿತು ಅಧ್ಯಯನ ಮಾಡಿ ಪ್ರತಿಯೊಬ್ಬರೂ ಅರ್ಜುನರಾಗಬೇಕು. ನಾವು ಇತಿಹಾಸದ ತಪ್ಪನ್ನು ಪುನಃ ಮಾಡಬಾರದು. ಧರ್ಮದ ದೇಶದ ರಕ್ಷಣೆಗೆ ಪ್ರತಿಯೊಬ್ಬನೂ ಧರ್ಮವೀರನಾಗಬೇಕು. ದೇಶ ಒಡೆದವರನ್ನು ಧರ್ಮ ಒಡೆಯುವವರನ್ನು ಅಧಿಕಾರ ಭ್ರಷ್ಟರನ್ನಾಗಿ ಮಾಡಬೇಕು. ಸಾಮಾಜಿಕ ಬಹಿಷ್ಕಾರ ಹಾಕಬೇಕು. ಪ್ರತಿಯೊಬ್ಬ ಭಾರತೀಯನೂ ಕ್ಷತ್ರಿಯನಾಗಬೇಕು. ಸವಕಲು ಗಾಂಧಿವಾದದಿಂದ ಹೊರಬರಬೇಕು. ನಕಲಿ ಗಾಂಧಿಗಳಿಗೆ ಬುದ್ದಿಕಲಿಸಬೇಕು. ಹೀಗೆ ಭಿನ್ನ ಮತಸಿದ್ಧಾಂತಗಳಿಂದ ಸಾಂಸ್ಕೃತಿಕವಾಗಿ ವಿಭಜನೆಗೊಂಡ ಭಾರತದ ತತ್ವಶಾಸ್ತ್ರ ಮುಂದಿನ ದಿನಗಳಲ್ಲಿ ಯಾವಹಾದಿಯಲ್ಲಿ ಸಾಗಬೇಕೆಂಬ ಗೊಂದಲದಿಂದಾಗಿ ಬಹಳ ಹಾನಿಯನ್ನು ಅನುಭವಿಸಿತು. ವಿಶಾಲ ಸಮುದ್ರದಂತಿದ್ದ ವೈದಿಕ ಪರಂಪರೆಯನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗಿಯೂ, ಸೀಮಿತ ವಿಚಾರಧಾರೆಯ ಇತರ ಮತಬೋಧನೆಗಳಿಂದ ಪೂರ್ಣ ತೃಪ್ತಿ ದೊರೆಯದೆಯೂ ಗೊಂದಲ ಗೊಂಡ ಸಮಾಜವು ಸುಮಾರು ಆರೇಳು ಶತಮಾನಗಳ ಕಾಲ ಅಂಧಕಾರದ ಅನುಭವವನ್ನು ಅನುಭವಿಸಿತು. ಈ ಅವಧಿಯನ್ನು ಇತಿಹಾಸಕಾರರು ಕತ್ತಲೆಯುಗ ಎಂದೇ ಕರೆದಿದ್ದಾರೆ ಮುಂದೆ ಶಂಕರಾಚಾರ್ಯರು ಏಳನೇ ಶತಮಾನದಲ್ಲಿ ಸನಾತನ ಧರ್ಮವನ್ನು ಪುನರುದ್ಧರಿಸಿದರು. ಇವರು ಯೋಗ್ಯ ಹಾಗೂ ಸ್ಪಷ್ಟವಾದ ಧರ್ಮಾಚರಣೆಯ ದಾರಿಯನ್ನು ಸಮಾಜಕ್ಕೆ ಗುರುಗಳಾಗಿ ಮಾರ್ಗದರ್ಶನ ನೀಡಿದ್ದರಿಂದ ಪುನಃ ವೈದಿಕ ಚಿಂತನೆಗಳಿಗೆ ಜೀವ ಬಂದು ಹಿಂದೂ ಸಂಸ್ಕೃತಿಯ ಹಾಗೂ ವೈದಿಕ ಪರಂಪರೆಯ ಪುನರುಧ್ಧಾರವಾಯಿತು, ಹೀಗೆ ಬಹುಧೀರ್ಘ ಕಾಲ ಗೊಂದಲ ಹಾಗೂ ಕ್ಷಾತ್ರ ತೇಜ ಮರೆತು ಅಹಿಂಸೆಯ ಹಾದಿಹಿಡಿದ ಕ್ಷಾತ್ರ ಕಳೆದುಕೊಂಡ ಅರಸರುಗಳಿಂದ ದುರ್ಬಲಗೊಂಡ ಸೇನಾಶಕ್ತಿಯನ್ನು ಅರಿತು ಸಂಪದ್ಭರಿತ ಭಾರತದೇಶದಮೇಲೆ ದುಷ್ಟರೂ ಅಧರ್ಮಿಗಳೂ ಕ್ರೂರರೂ ಆದ ಮೊಘಲರು, ತುರ್ಕರು ಯವನರು, ಮುಂತಾದ ಅಸುರ ಮತಾಂಧ ಕಾಮುಕರು ಶ್ರೀಮಂತ ಭಾರತದ ಸಂಪತ್ತು ಲೂಟಿಮಾಡಲು ದಾಳಿಮಾಡಿದರು. ಶಸ್ತ್ರಹಿಡಿಯಬೇಕಾದ ಕೈ ಜಪಸರ ಹಾಗೂ ಅಹಿಂಸೆ ಎಂಬ ಭಜನೆ ಮಾಡಲು ಶುರುಮಾಡಿದಾಗ ತಮ್ಮ ಅವಿವೇಕದಿಂದ ಉಂಟಾದ ವಿಪತ್ತಿನಲ್ಲಿ ಸನ್ಯಾಸಿಗಳ ಅಹಿಂಸಾ ಬೋಧನೆಯೇ ಹಿಂದೂಗಳ ಆತ್ಮರಕ್ಷಣೆಗೆ ತೊಡಕಾಯಿತು. ಇಸ್ಲಾಮಿನ ದುಷ್ಟ ದುರಾಕ್ರಮಣ ಕಾರರು ಎಲ್ಲಾ ಬೌದ್ಧ, ಜೈನ ಸನ್ಯಾಸಿಗಳ ಹಾಗೂ ಬ್ರಾಹ್ಮಣರ ತಲೆ ಕಡಿದು ಕೊಲ್ಲುತ್ತಾ, ದೇವಾಲಯ ಹಾಗೂ ಬೌಧ್ಧವಿಹಾರಗಳನ್ನು ನಾಶಮಾಡುತ್ತಾ ದೇಶದ ಸಂಪತ್ತನ್ನು ಲೂಟುತ್ತಾ ಅತ್ಯಾಚಾರ, ಕೊಲೆ, ಮತಾಂತರ ಗಳನ್ನು ಮಾಡುತ್ತಾ ಈ ದೇಶವನ್ನು, ಸಂಸ್ಕೃತಿಯನ್ನು ನಾಶಮಾಡಿದರು. ಅಂದು ನಮ್ಮ ದೇಶದ ಭಿನ್ನಮತವಾದಿಗಳು ಮಾಡಿದ ಅಹಿಂಸಾ ಭೋದನೆಯ ಅಚಾತುರ್ಯಕ್ಕೆ ಭಾರತ ಒಂದು ಸಾವಿರ ವರುಷ ಪರಕೀಯ ಆಳ್ವಿಕೆಯಡಿಯಲ್ಲಿ ಬದುಕುವಂತಾಯಿತು. ಈಗ ಸ್ವಾತಂತ್ರ ಬಂದು 75 ವರುಷ ಕಳೆದರೂ ನಾವಿನ್ನೂ ಆ ದಾಸ್ಯದ ಗುಂಗಿನಿಂದ ಹೊರಬಂದಿಲ್ಲ. ಕ್ರೈಸ್ತ ಮತಾರಾಧಕ ಬ್ರಿಟಿಷರು ದೇಶಬಿಟ್ಟು ಹೋದನಂತರ, ಗುಲಾಮೀ ಮನಸ್ಥಿತಿಯ ಹಿಂದೂವಿರೋಧಿ, ಇಸ್ಲಾಮ್ ಪ್ರೇಮಿ ನೆಹರೂ ಈ ದೇಶವನ್ನು ಸಂಕಟಕ್ಕೆ ದೂಡದರು. ವಂಶಪಾರಂಪರ್ಯವಾಗಿ ಬೆಳೆದುಬಂದ ಈ ಧರ್ಮ ಭ್ರಷ್ಟ ನಕಲಿ ಗಾಂಧಿಯ ಕುಟುಂಬದ ಗುಲಾಮರು ಇಂದೂ ಈ ಗುಲಾಮೀ ಸಂತತಿ ಹಾಗೂ ಮನಸ್ಥಿತಿಯನ್ನು ಜೀವಂತ ವಾಗಿಟ್ಟುಕೊಂಡಿದ್ದಾರೆ. ಈಗಲೂ ಹಿಂದಿನಂತೆಯೇ ಈ ಅವಿವೇಕವನ್ನೇ ಬೋಧಿಸುವ ಅಜ್ಞಾನಿ ಸನ್ಯಾಸಿಗಳು ಅವಿವೇಕಿ ಮಾಧ್ಯಮ ಹಾಗೂ ಸ್ವಾರ್ಥರಾಜಕೀಯನಾಯಕರು ಹಿಂದೂ ಸಮಾಜಕ್ಕೆ ವಕ್ರ ಮಾರ್ಗದರ್ಶನ ಕೊಡುತ್ತಿದ್ದಾರೆ. ಒಂದು ಸಮಯದಲ್ಲಿ ಯಾವ ಮತಾಧಾರಿತ ಅತಿಸಾತ್ವಿಕ ಸನ್ಯಾಸಿಗಳ ಅತಾರ್ಕಿಕ ಉಪದೇಶದಿಂದ ಈ ದೇಶ ಪರರ ವಶವಾಯಿತೋ ಈ ಮೂಲಕ ಧರ್ಮ, ಸಂಸ್ಕೃತಿ, ಹಾಗೂ ಸಂಪತ್ತಿನ ನಾಶವಾಯಿತೋ. ಹಿಂದೂ ಧರ್ಮ ಅವನತಿ ಹೊಂದಿತೋ ಅಂತಹುದೇ ಸಮಯ ಇಂದೂ ಇದೆ. ಇಂದು ಕೂಡಾ ಹಿಂದು ಸಮಾಜದಲ್ಲಿ ವಿವಿಧ ಮತ ಪಂಗಡಗಳು, ಜಾತಿ ಸಂಘಗಳು ಸ್ವಾರ್ಥಹಿತಾಸಕ್ತಿಗಾಗಿ ಅಧಿಕಾರ ಹಾಗೂ ಅನುದಾನಕ್ಕಾಗಿ ಸಂಕುಚಿತ ಮನೋಭಾವದವುಗಳಾಗಿ ಹಲವು ಹುಟ್ಟಿಕೊಂಡಿವೆ. ಈ ಮೂಲಕ ದೇಶ ಹಾಗೂ ಧರ್ಮನಾಶಕ್ಕೆ ಇವುಗಳು ಕಾರಣ ವಾಗುತ್ತಿವೆ. ದೇಶದ್ರೋಹಿ, ಧರ್ಮದ್ರೋಹಿ ಜಾತ್ಯಾತೀತರೆನ್ನುವ ಡೋಂಗಿ ರಾಜಕೀಯ ನೇತಾರರುಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುತ್ತಿದ್ದಾರೆ.
ಹಿಂದೆ ಯಾವಾಗ ಹಿಂದೂ ಸಂಸ್ಕೃತಿ ವಿಘಟಿತವಾಗಿ ಗುಂಪುಗಾರಿಕೆ ಆರಂಭ ವಾಯಿತೋ ಆವಾಗ ಬೌಧ್ಧ ಹಾಗೂ ಜೈನ ಮತಗಳು ರಾಜಾಶ್ರಯದಿಂದ ಬೇಳೆಯುತ್ತಾ ಹಿಂದೂ ವೇದಾಧಾರಿತ ಸಂಸ್ಕೃತಿ ಅವಸಾನದ ಹಾದಿಹಿಡಿಯಿತೋ ಆ ಸಮಯದಲ್ಲಿ ವೈದಿಕ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ದೇವರ ಜನ್ಮ ಶಂಕರಾಚಾರ್ಯರ ರೂಪದಲ್ಲಿ ಆಯಿತು. ಅವರು ತಮ್ಮ ಮೂವತ್ತೆರಡು ವರುಷದ ಅಲ್ಪಾಯುಷ್ಯದಲ್ಲಿ. ನಾಲ್ಕು ಬಾರಿ ಅಖಂಡ ಭಾರತದ ಭೂಪ್ರದಕ್ಷಿಣೆ ಮಾಡಿ, ತಮ್ಮ ಪ್ರಕಾಂಡ ಪಾಂಡಿತ್ಯದಿಂದ ವೇದ ಉಪನಿಷತ್ತು ಹಾಗೂ ಭಗವದ್ ಗೀತೆಗೆ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಭಾಷ್ಯ ಬರೆದು, ಸನಾತನ ಹಿಂದೂ ಧರ್ಮ ಪ್ರಚಾರಮಾಡಿ, ಸಮಾಜದಜನರಲ್ಲಿದ್ದ ತಾತ್ವಿಕ ಗೊಂದಲನಿವಾರಿಸಿ, ಬೌಧ್ಧ ಹಾಗೂ ಜೈನ ಮತಗಳ ದೋಷವನ್ನು ತೋರಿಸಿ ಅವರ ವಿಧ್ವಾಂಸರುಗಳನ್ನು ವಾದದಲ್ಲಿ ಸೋಲಿಸುತ್ತಾ ಸಾರಸ್ವತ ಲೋಕದಲ್ಲಿ ದಿಗ್ವಿಜಯ ಸಾಧಿಸಿದರು. ಅಖಂಡ ಭಾರತದಲ್ಲಿ ಹೆಚ್ಚಿನ ಎಲ್ಲಾ ಮತಪಂಡಿತರೂ ಇವರ ಶಿಷ್ಯತ್ವವನ್ನು ಸ್ವೀಕರಿಸಿದರು ಇದರಿಂದ ಪುನಃ ಹಿಂದೂ ವೈದಿಕ ಧರ್ಮಾಚರಣೆಗಳು ಮತ್ತೆ ಆರಂಭ ಗೊಂಡು ಹಿಂದೂ ಧರ್ಮದ ವೈದಿಕ ಸಂಸ್ಕೃತಿಯು ಪುನರುದ್ಧಾರಗೊಂಡು ಉದಯಿಸಲು ಕಾರಣ ವಾಯಿತು. ಮುಂದೆಂದೂ ವೈದಿಕ ಧರ್ಮ ಅಪಾರ್ಥ ಗೊಳ್ಳದಂತೆ ಮಾರ್ಗದರ್ಶನ ನೀಡಲು ಹಾಗೂ ಪರಂಪರೆಯ ರಕ್ಷಣೆಗಾಗಿ ಭಾರತದ ನಾಲ್ಕುಮೂಲೆಗಳಲ್ಲಿ ಶೃಂಗೇರಿ, ದ್ವಾರಕೆ, ಪುರಿ, ಹಾಗೂ ಬದರಿ ಗಳಲ್ಲಿ ನಾಲ್ಕು ಜೋತಿರ್ಪೀಠಗಳನ್ನು ಸ್ಥಾಪಿಸಿ ಅದರಲ್ಲಿ ತಮ್ಮ ಶಿಷ್ಯರನ್ನು ನೇಮಿಸಿ ನಾಲ್ಕು ವೇದಗಳ ರಕ್ಷಣೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿದರು, ಧರ್ಮರಕ್ಷಣೆಗಾಗಿ ಆಧ್ಯಾತ್ಮಿಕ ಭದ್ರತೆಯನ್ನು ಮಾಡಿದರು. ಇಂದು ದೇಶ ಸಾಕಷ್ಟು ನಾಶವಾಗಿದ್ದರೂ ಈ ನಾಲ್ಕು ಪೀಠಗಳು ಇಂದು ನಮ್ಮದೇಶವನ್ನು ರಕ್ಷಸುತ್ತಿರುವ ಧರ್ಮದ ನಾಲ್ಕು ಹೆಬ್ಬಾಗಿಲುಗಳಾಗಿವೆ. ಇವುಗಳನ್ನು ವಿಭಜಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಎನ್ನುವುದೇ ಶಂಕರಾಚಾರ್ಯರ ತಪಃ ಶಕ್ತಿ ಹಾಗೂ ದೂರಾಲೋಚನೆಯನ್ನು ತೋರಿಸುತ್ತದೆ. ಶೃಂಗೇರಿ ಸಂಸ್ಥಾನದ ಗುರುಗಳಾದ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ ಬುಕ್ಕರು ವಿಜಯ ನಗರ ಸಾಮ್ರಾಜ್ಯ ಸ್ಥಾಪಿಸಿ ಮುಸ್ಲಿಮರ ಆಕ್ರಮಣದಿಂದ ಹಿಂದೂ ಸಂಸ್ಕೃತಿಯನ್ನು ಹಲವು ಶತಮಾನಗಳ ಕಾಲ ರಕ್ಷಿಸಿ ನಮ್ಮ ದೇಶದ ಹಿರಿಮೆಯನ್ನು ವಿಶ್ವದಗಲ ಪಸರಿಸಿದ್ದಾರೆ. ಆದರೆ ಹಿಂದೂ ವಿರೋಧಿ ಕಾಂಗ್ರೇಸ್ ಸರಕಾರ ಇತಿಹಾಸ ಪಠ್ಯದಲ್ಲಿ ಇವರ ವಿಷಯಕ್ಕೆ ಮಹತ್ವಕೊಡದೆ ಲೂಟಿಕೋರರಾದ ಮೊಘಲರನ್ನು ವೈಭವೀಕರಿಸಿದೆ. ಶಂಕರಾಚಾರ್ಯರ ನಂತರದಲ್ಲಿ ಹಲವು ಕಾಲಾನಂತರ ಪುನಃ ಸಮಾಜ ವೈದಿಕ ಪರಂಪರೆಯಲ್ಲಿ ವರ್ಣಾಶ್ರಮದ ಅಪಾರ್ಥದಿಂದ ಶೋಷಣೆಯ ಹಾದಿ ಹಿಡಿದಾಗ, ಬಸವಣ್ಣನವರು ಕರ್ನಾಟಕದಲ್ಲಿ ವೀರಶೈವ ಪರಂಪರೆಗೆ ನಾಂದಿಹಾಡಿದರು, ಪುನಃ ಸಮಾಜವನ್ನು ಒಂದುಗೂಡಿಸಲು ಪ್ರಯತ್ನಿಸಿದರು, ಇಂದಿನ ಸಿದ್ದರಾಮಯ್ಯನೇತೃತ್ವದ ಕಾಂಗ್ರೇಸ್ ಸರಕಾರ ಇವರಮಧ್ಯದಲ್ಲಿ ಬೆಂಕಿಹಚ್ಚಿ ವೀರಶೈವ ಲಿಂಗಾಯತ ಎಂಬುದಾಗಿ ಹಿಂದೂಸಮಾಜವನ್ನು ಒಡೆಯಲು ಸಿದ್ದವಾಗಿದೆ. ನಮ್ಮ ದೇಶದ ದುರಂತ ಎಂಬಂತೆ ಬಸವಣ್ಣರ ನಂತರದಲ್ಲಿಯೂ ಕೆಲವು ಮತಾಚಾರ್ಯರು ಸಮಾಜದ ಮೇಲೆ ಪ್ರಭಾವ ಬೀರಿ ವಿಭಜನಾ ಸಿದ್ಧಾಂತವನ್ನು ಭೋಧನೆಮಾಡಿ ಪುನಃ ಧರ್ಮ ಹಾಗೂ ದೇಶದ ಸಾಮಾಜಿಕ ನೆಲೆಗಟ್ಟನ್ನು ದುರ್ಬಲ ಗೊಳಿಸಿದರು. ಧರ್ಮ ದೇಶ ಉಳಿಯಬೇಕಿದ್ದರೆ ನಮಗೆ ಐಕ್ಯತೆಯೇ ಮಂತ್ರವಾಗಬೇಕು. ಸಮಾಜದಲ್ಲಿ ತಾರತಮ್ಯ ಇರಬಾರದು. ತಾರತಮ್ಯವು ಅಸಮಾಧಾನವನ್ನು ಹುಟ್ಟುಹಾಕುವುದರಿಂದ. ಇದು ಸಮಾಜದಲ್ಲಿ ವಿಘಟನೆಯನ್ನು ಹೆಚ್ಚಿಸುವುದು. ತಾರತಮ್ಯ ಹಾಗೂ ಅಸ್ಪೃಷ್ಯತೆಯು ರಾಷ್ಟ್ರದ ಅಖಂಡತೆಗೆ ಮಾರಕವಾಗಿದೆ. ತಾರತಮ್ಯದ ದುರ್ಭೋಧನೆಯಿಂದ ಜನರಲ್ಲಿನ ಸಾಮರಸ್ಯ ಹಾಳಾಗಿ ಪರಸ್ಪರ ದ್ವೇಷ ಹಾಗೂ ಮೇಲುಕೀಳೆಂಬ ಸಂಕುಚಿತ ಭಾವ ಉಂಟಾಗುವುದು. ಇದರಿಂದ ಒಳಗೊಳಗೇ ಮತದ್ವೇಷಗಳು ಬೆಳೆಯಲಾರಂಭಿಸಿದವು ಹೀಗೆ ಭಾರತದಲ್ಲಿಯೇ ವಿವಿಧ ಮತಾಚಾರ್ಯರ ಭಿನ್ನ ತಾತ್ವಿಕ ನೆಲೆಗಟ್ಟಿನಲ್ಲಿ ಧರ್ಮದಿಂದ ಕವಲೊಡೆದ ಹಲವು ಮತಗಳು ಉದಯವಾದುವು. ಒಂದೊಂದುಕ್ಕೂ ಒಂದೊಂದು ಉದ್ದೇಶವಿದೆ. ಆದರೆ ಯಾವುದೂ ಪರಿಪೂರ್ಣವಲ್ಲ ಇವೆಲ್ಲಮತಗಳ ಉತ್ತಮಗುಣದ ಪೂರ್ಣರೂಪವೇ ಹಿಂದೂ ಧರ್ಮ. ಸೀಮಿತ ವಿಚಾರದ ಹಲವು ಮತಗಳು, ಬೌದ್ಧ, ಜೈನ, ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ವೀರಶೈವ, ಸಿಖ್, ಮುಂತಾದುವೇ ಆಗಿವೆ, ಹೀಗೆ ಇವುಗಳ ಮೇಲಾಟದಲ್ಲಿ ದೇಶ ಹಾಗೂ ಧರ್ಮಗಳು ದುರ್ಬಲ ವಾಯಿತು. ಅಸ್ಪೃಷ್ಯತೆ ಪಿಡುಗೂ ಸಮಾಜದಲ್ಲಿ ಬಾಧಿಸ ತೊಡಗಿತು.
ಇಂತಹ ಸಮಯದಲ್ಲಿ ವಿದೇಶಿ ಆಕ್ರಮಣಕಾರೀ ಭಯೋತ್ಪಾದಕರಾದ ಇಸ್ಲಾಮ್ ಮತಾರಾಧಕರಿಂದ ಹಿಂದೂ ಧರ್ಮದ ಮೇಲೆ ಪ್ರಹಾರವಾಯಿತು. ವೈದಿಕ ಧರ್ಮ ಘಾಸಿಗೊಂಡು ಬಲಾತ್ಕಾರದ ಮತಾಂತರದಿಂದ ಭಾರತ ದೇಶದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರಿಸತೊಡಗಿದರು. ಮತಾಂತರ ವಾಗದವರನ್ನು ಕೊಲ್ಲಲಾಗುತ್ತಿತ್ತು. ಹೀಗೆ ಜೀವಭಯದಿಂದ ಮತಾಂತರಗೊಂಡ ಹಿಂದುಗಳು ಮುಸ್ಲಿಮರಾಗಿ ಇವರ ಸಂಖ್ಯೆ ಏರತೊಡಗಿತು. ಅವರನ್ನು ಧರ್ಮ ಭ್ರಷ್ಟರನ್ನಾಗಿ ದೂರವಿಟ್ಟುದರಿಂದ ಹಾಗೂ ಆಂತರಿಕ ಮತಾರಾಧಕರ ಪರಸ್ಪರ ಅಂತರದಿಂದ ಹಿಂದೂ ಧರ್ಮ ಮತ್ತೆ ದುರ್ಬಲಗೊಂಡಿತು. ಹಾಗೆಯೇ ಒಂದೊಂದು ವೃತ್ತಿಯವರೂ ಒಂದೊಂದು ಜಾತಿಗಳೆಂದು ಗುರುತಿಸಿಕೊಳ್ಳತೊಡಗದರು. ಇದರಿಂದಾಗಿ ಹತ್ತೆಂಟು ಮತಗಳಲ್ಲಿ ವಿಘಟಿತರಾಗಿದ್ದವರು ಮುಂದೆ ಸಾವಿರಾರು ಜಾತಿಗಳಲ್ಲಿ ವಿಘಟಿತರಾಗಲು ಕಾರಣ ವಾಯಿತು. ಹಿಂದುಗಳ ಸಹಿಷ್ಣುತೆಯ ದುರ್ಲಾಭ ಪಡೆದ ಕ್ರೈಸ್ತಮತಾನುಯಾಯಿಗಳು ಬ್ರಿಟಿಷರ ಕಾಲದಲ್ಲಿ ಹಿಂದೂ ಗಳ ಇತಿಹಾಸವನ್ನು ತಿರುಚಿ ಸಮಾಜ ಒಡೆದರು ಆರ್ಯ ದ್ರಾವಿಡ ವೆಂಬ ಹುರುಳಿಲ್ಲದ ವಾದ ಮಂಡಿಸಿ ಕೆಳವರ್ಗ, ಮೇಲ್ವರ್ಗ, ಎಂಬುದಾಗಿ ಜನರ ಮನಸ್ಸಿನಲ್ಲಿ ಅಸಹಿಷ್ಣುತೆಯನ್ನು ಬಿತ್ತಿ ಒಬ್ಬರಿಗೊಬ್ಬರು ದ್ವೇಶಿಸುವಂತೆ ಮಾಡಿದರು. ಸಮಾಜದ ಸಾಮರಸ್ಯವನ್ನು ಒಡೆದರು. ಇದು ದುರುಳ ವಿದೇಶೀ ಮತಾರಾಧಕರ ಕುತಂತ್ರದಿಂದಾಗಿ ಹಾಗೆಯೇ ಬೆಳೆಯಿತು ಹೀಗೆ ಆಂತರಿಕ ಕಲಹ ಸೃಷ್ಟಿಸಿ ಹಿಂದೂಧರ್ಮದ ಮೇಲೆ ಇಸ್ಲಾಮ್ ಹಾಗೂ ಕ್ರೈಸ್ತಮತದವರು ಮತಾಂತರದಂತಹ ದುಷ್ಕೃತ್ಯಮಾಡಿದರು. ಸ್ವಾತಂತ್ರೋತ್ತರದಲ್ಲಿ ದೇಶವಾಳಿದ ಕಾಂಗ್ರೇಸಿನ ಸ್ವಾರ್ಥ ರಾಜಕಾರಣಿಗಳು ಪುನಃ ಸಮಾಜ ಒಡೆಯುವ ಕೆಲಸ ಮಾಡಿ ಜಾತಿ ಧರ್ಮ ಗಳ ಕಲಹವನ್ನು ಸದಾ ಜೀವಂತವಾಗಿಟ್ಟು ನಮ್ಮ ದೇಶವನ್ನು ಹಿಂದೂ ಸಂಸ್ಕೃತಿಯನ್ನು ದ್ವಿತೀಯ ದರ್ಜೆಯಂತೆ ಕಂಡರು. ಇದು ಹಿಂದುಗಳ ಸ್ವಾಭಿಮಾನಕ್ಕೆ ಹಿನ್ನೆಡೆಯಾಯಿತು. ಇದೇದೇಶದ ಅನ್ನತಿನ್ನುವ ಧರ್ಮದ್ರೋಹಿ ದೇಶದ್ರೋಹಿ ಜಾತ್ಯಾತೀತ (ಸೆಕ್ಯುಲರ್) ಎಂಬ ಮಾಧ್ಯಮ ಹಾಗೂ ವಿಕೃತ ಮನಸ್ಸಿನ ಕುಸಾಹಿತಿಗಳಿಂದ ಅಧರ್ಮವೇ ದೇಶದ ಕಾನೂನಾಗುವಂತೆ ಮಾಡಿದರು. ಆದರೆ ಇಂದು ಸಮಾಜಕ್ಕೆ ಸತ್ಯದ ಅರಿವಾಗ ತೊಡಗಿದೆ ಪುನಃ ಹಿಂದುಸಮಾಜ ಹಿಂದು ಎಂಬ ಏಕ ನೆಲೆಗಟ್ಟಿನಲ್ಲಿ ತಾರತಮ್ಯ ಮರೆತು ಒಂದಾಗುತ್ತಿರುವುದು ಈದೇಶದ ಹಾಗೂ ಹಿಂದು ಸಂಸ್ಕೃತಿಯ ಪುನರ್ವೈಭವದ ಶುಭಸೂಚನೆಯಾಗಿದೆ. ಹಾಗೂ ನಾವುಗಳು ಈ ಹಾದಿಯಲ್ಲಿ ಮೆಟ್ಟಿಲಾಗುವ ಭಾಗ್ಯವನ್ನು ಬಳಸಿಕೊಳ್ಳ ಬೇಕಿದೆ. ಇಂದು ನಾವು ಪುನಃ ಎಚ್ಚರವಾಗಿ ಕೇವಲ ಆಧ್ಯಾತ್ಮದ ಹೆಸರಿನಲ್ಲಿ ವ್ಯಾಪಾರ ಮಾಡುವ ಮತಾಚಾರ್ಯರಿಂದ ಎಚ್ಚರಿಕೆಯಿಂದಿದ್ದು ಕಾಲದ ಅಗತ್ಯಕ್ಕೆ ಅನುಗುಣವಾಗಿ ಸ್ಪಂದಿಸುವ ಕ್ಷಾತ್ರ ಪ್ರಧಾನ ಸಮಾಜವನ್ನು ನಿರ್ಮಿಸುವ ಕಾಲಸನ್ನಿಹಿತವಾಗಿದೆ. ಎಲ್ಲರೂ ಮತ ಜಾತಿಗಳಲ್ಲಿ ವಿಘಟಿತರಾಗದೆ ನಮ್ಮೆಲ್ಲಾವೈಯುಕ್ತಿಕ ಆಚರಣೆ ಹಾಗೂ ನಂಬಿಕೆಗಳನ್ನು ಮನೆಯೊಳಗೆ ಸೀಮಿತಗೊಳಿಸಿಕೊಂಡು ಸಾರ್ವಜನಿಕವಾಗಿ ಬೇರೆಯವರಿಗೆ ಮುಜುಗರ ವಾಗುವಂತೆ ಪ್ರದರ್ಶಿಸದೆ ಹಿಂದೂ ಎನ್ನುವ ಏಕನೆಲೆಯಲ್ಲಿ ಸರ್ವಸಮ್ಮತವಾದ ಗೊಂದಲರಹಿತ ಆಚರಣೆಗಳನ್ನು ಸಾರ್ವತ್ರಿಕವಾಗಿ ಸಾಮೂಹಿಗವಾಗಿ ಒಟ್ಟಾಗಿ ಪ್ರಚಾರ ಮಾಡಬೇಕಾಗಿದೆ. ಹಾಗೂ ಇದಕ್ಕಾಗಿ ನಾವು ಸಂಕುಚಿತ ಮನೋಭಾವಬಿಟ್ಟು ಹಿಂದೂ ಎಂಬ ಏಕ ನೆಲೆಗಟ್ಟಿನಲ್ಲಿ ಸಂಘಟಿತರಾಗಬೇಕಿದೆ. ಶ್ರೀ ಕೃಷ್ಣನ ಉಪದೇಶ ಹಾಗೂ ನೀತಿ ನಮಗೆ ಸ್ಪೂರ್ತಿಕೊಡಲೆಂದು ಪ್ರಾರ್ಥಿಸುತ್ತಾ ಸಮಾಜ ಒಗ್ಗೂಡಿಸುವತ್ತ ಹೆಜ್ಜೆ ಇಡೋಣ ಜೈ ಹಿಂದ್.
- ಶ್ರೀಜಿ