ಹಿಂದು/ ಸನಾತನಿ ಎಂದರೆ ಯಾರು? ಹಿಂದೂಧರ್ಮ ಏಕೆ ವಿಶ್ವಶ್ರೇಷ್ಠ?
ಹಿಂದು ಎನ್ನುವುದು ಭಾರತೀಯ ಅಸ್ಮಿತೆ, ಹಿಂದು ಎಂದರೆ ಅವಿನಾಶಿ, ಹಿಂದು ಎಂದರೆ ಸನಾತನಿ, ಹಿಂದು ಎಂದರೆ ಹೆಮ್ಮೆ, ಹಿಂದು ಎಂದರೆ ಕ್ಷಾತ್ರ, ಹಿಂದುವೆಂದರೆ ಪರಂಪರೆ, ಹಿಂದುವೆಂದರೆ ಪ್ರಾಚೀನ ಇತಿಹಾಸ, ಹಿಂದುವೆಂದರೆ ಜ್ಞಾನ, ಹಿಂದುವೆಂದರೆ ವಿದ್ಯೆ, ಹಿಂದುವೆಂದರೆ ವಿಜ್ಞಾನ, ಹಿಂದುವೆಂದರೆ ವೇದ, ಹಿಂದುವೆಂದರೆ ಆಧ್ಯಾತ್ಮ, ಹಿಂದುವೆಂದರೆ ಯೋಗ, ಹಿಂದುವೆಂದರೆ ಸಾಮ್ರಾಟ, ಹಿಂದುವೆಂದರೆ ಸನ್ಯಾಸಿ, ಹಿಂದುವೆಂದರೆ ಸಂಸ್ಕೃತಿ, ಹಿಂದುವೆಂದರೆ ಸಂಸ್ಕಾರ, ಹಿಂದುವೆಂದರೆ, ಕಲೆ, ಹಿಂದುವೆಂದರೆ ಸಂಗೀತ, ಹಿಂದುವೆಂದರೆ ಜ್ಯೋತಿಷ್ಯ, ಹಿಂದುವೆಂದರೆ ವಾಸ್ತುಶಾಸ್ತ್ರ, ಹಿಂದುವೆಂದರೆ ಆಯುರ್ವೇದ, ಹಿಂದುವೆಂದರೆ ಧ್ಯಾನ, ಹಿಂದುವೆಂದರೆ ಶಕ್ತಿ, ಹಿಂದುವೆಂದರೆ ಯುಕ್ತಿ, ಹಿಂದುವೆಂದರೆ ಪ್ರೀತಿ, ಹಿಂದುವೆಂದರೆ ಕರುಣೆ, ಹಿಂದುವೆಂದರೆ ಸ್ನೇಹ, ಹಿಂದುವೆಂದರೆ ಸತ್ಕಾರ, ಹಿಂದುವೆಂದರೆ ಗೌರವ, ಹಿಂದುವೆಂದರೆ ತ್ಯಾಗ, ಹಿಂದುವೆಂದರೆ ಶೌರ್ಯ, ಹಿಂದುವೆಂದರೆ ರಾಮ, ಹಿಂದುವೆಂದರೆ ಕೃಷ್ಣ, ಹಿಂದುವೆಂದರೆ ವಾಲ್ಮೀಕಿ, ಹಿಂದುವೆಂದರೆ ವ್ಯಾಸ, ಹಿಂದುವೆಂದರೆ ಕಾಳಿದಾಸ, ಹಿಂದುವೆಂದರೆ ಪಾಣಿನಿ, ಹಿಂದುವೆಂದರೆ ಪತಂಜಲಿ, ಹಿಂದುವೆಂದರೆ ವಿವೇಕಾನಂದ, ಹಿಂದುವೆಂದರೆ ಹರಿಶ್ಚಂದ್ರ, ಹಿಂದುವೆಂದರೆ ಚಾಣಕ್ಯ, ಹಿಂದುವೆಂದರೆ ಶೀವಾಜಿ, ಹಿಂದುವೆಂದರೆ ರಾಣಾಪ್ರತಾಪ, ಹಿಂದುವೆಂದರೆ ನೇತಾಜಿ, ಹಿಂದುವೆಂದರೆ ಭಗತ್ಸಿಂಗ್, ಹಿಂದುವೆಂದರೆ ವೀರಸಾವರ್ಕರ್, ಹಿಂದುವೆಂದರೆ ರಾಣಿ ಲಕ್ಷ್ಮೀಬಾಯಿ, ಹಿಂದುವೆಂದರೆ ಕಿತ್ತೂರು ಚೆನ್ನಮ್ಮ, ಹಿಂದುವೆಂದರೆ ಬಸವಣ್ಣ, ಹಿಂದುವನ್ನು ವರ್ಣಿಸಲು ಶಬ್ಧಗಳೇ ಇಲ್ಲ. ಇಷ್ಟು ಶ್ರೀಮಂತ ಪರಂಪರೆ ಹಿಂದುಗಳದ್ದಾಗಿದೆ.
ಭಾರತ ದೇಶವು ಉತ್ತರಕ್ಕೆ ಹಿಮಾಲಯದಿಂದ ಆರಂಭಿಸಿ ದಕ್ಷಿಣತುದಿ ಹಿಂದೂಮಹಾಸಾಗರ (ಇಂದುಸಾಗರ) ದವರೆಗೂವಿಸ್ಥರಿಸಿದೆ. ಹಿಂದೂ ಮಹಾ ಸಾಗರವನ್ನು ಹಿಂದೆ ಇಂದು ಸಾಗರವೆಂದು ಕರೆಯುತ್ತಿದ್ದರು. ಹಿಮಾಲಯದಿಂದ ಆರಂಭಿಸಿ ಇಂದು ಸಾಗರದವರೆಗಿನ ಪುಣ್ಯ ಭೂಮಿಯನ್ನು ಹಿಂದುಸ್ಥಾನ ಎಂದು ಕರೆಯಲಾಗಿದೆ. ಹಿಂದು ಶಬ್ಧದಲ್ಲಿ ಹಿಮಾಲಯದ ಮೊದಲ ಅಕ್ಷರವೂ ಇಂದುಸಾಗರದ ಕೊನೆಯ ಅಕ್ಷರವೂ ಸೇರಿ ಹಿಂದು ವಾಗಿದೆ ಈ ಮಧ್ಯದ ಭೂಭಾಗವೇ ಹಿಂದುಸ್ಥಾನ. ನಮಗೆ ಎಡಪಂಥೀಯ ಎಡಬಿಡಂಗಿ ಇತಿಹಾಸಕಾರರು ತಿರುಚಿಬರೆದ ಇತಿಹಾಸದಿಂದ ಬೇರೆಯದೇ ಕಥೆಗಳನ್ನು ಶಾಲೆಗಳಲ್ಲಿ ಕಲಿಸಲಾಗಿದೆ. ಹಿಮಾಲಯದಿಂದ ಇಂದುಸಾಗರದ ವರೆಗಿನ ಪೂಣ್ಯತಮವಾದ ಭೂಭಾಗದಲ್ಲಿ ವಾಸಿಸುತ್ತಿರುವ ಜನಗಳೇ ಹಿಂದುಗಳಾಗಿದ್ದಾರೆ. ಈ ಪ್ರದೇಶವನ್ನೇ ಹಿಂದೂಸ್ಥಾನ ಎಂಬುದಾಗಿ ಹೇಳಲಾಗಿದೆ. ಹೇಳಲಾಗುತ್ತಿದೆ. ಆರ್ಯ-ದ್ರಾವಿಡ ವಾದ, ಸಿಂಧುಪದದ ಅಪಭ್ರಂಶ ರೂಪವು ಸಕಾರ ಉಚ್ಚಾರವಾಗದೆ ವಿದೇಶಿಯರು ಸಿಂಧುವನ್ನು ಹಿಂದುವೆಂದು ಕರೆದರು ಎನ್ನುವ ಮಾತೆಲ್ಲಾ ವಿಮರ್ಶಕರು ವಿಮರ್ಶಿಸುತ್ತಾರೆ. ವಾಸ್ತವವಾಗಿ “ಸ” ಕಾರವನ್ನು “ಹ” ಕಾರವಾಗಿ ಉಚ್ಛರಿಸುವುದು ವಿದೇಶೀ ಪದ್ದತಿಯಲ್ಲ ಅದು ಭಾರತದಲ್ಲಿಯೂ ಪ್ರಚಲಿತವಿರುವ ಪದ್ದತಿಯೇ ಆದುದರಿಂದ ವಿದೇಶೀಯರಿಂದ ಸಿಂಧು ಹಿಂದುವಾಯಿತೆನ್ನುವುದು ನಿರರ್ಥಕ. ಬ್ರಿಟೀಷರು, ಕಮ್ಯುನಿಸ್ಟರು, ಹಾಗೂ ಕಾಂಗ್ರೇಸಿಗರು ಇವರೆಲ್ಲರೂ ಹಿಂದೂಗಳನ್ನು ನಿರಭಿಮಾನಿ ಗಳನ್ನಾಗಿಸಲು ಇತಿಹಾಸವನ್ನು ತಿರುಚಿದ್ದಾರೆ. ತಮಗೆ ಬೇಕಾದಂತೆ ಡೋಂಗಿ ಇತಿಹಾಸ ಬರೆದು ಡಂಗುರ ಹೊಡೆದಿದ್ದಾರೆ. ಹಿಂದುಗಳ ನಂಬಿಕೆಗಳನ್ನು ಮೌಢ್ಯವೆಂದು ಕಥೆಕಟ್ಟಿದ್ದಾರೆ. ಹೀಗೆ ಅವಿವೇಕಿಗಳಿಂದ ತಿರುಚಲ್ಪಟ್ಟ ಇತಿಹಾಸದ ಪಳೆಯುಳಿಕೆಗಳನ್ನೇ ಕಾಂಗ್ರೇಸಿಗರು ನಮಗೆ ಪಠ್ಯವಾಗಿ ಬೋಧಿಸಿದ್ದಾರೆ. ಇಂತಹ ತಿರುಚಿದ ಇತಿಹಾಸವನ್ನು ನಾವು ನಂಬಬೇಕಿಲ್ಲ, ಇವೆಲ್ಲವೂ ವಿಕೃತವಾದಿ ಬುದ್ದಿಜೀವಿಗಳ ಹಾಗೂ ಸೆಕ್ಯುಲರ್ ದೇಶದ್ರೋಹಿಗಳ ಇತಿಹಾಸ ಪಠ್ಯವಾಗಿವೆ. ಹಿಂದುಗಳು ದೇಶದ ಹೆಮ್ಮೆ ಪಡುವಂತಹ ಸ್ವಾಭಿಮಾನೀ ಇತಿಹಾಸವನ್ನು ಓದಬೇಕು. ಅದನ್ನೇ ಮುಂದಿನ ತಲೆಮಾರಿಗೆ ತಿಳಿಸಬೇಕು. ಭಾರತವನ್ನು ವಿಶ್ವಗುರುವಾಗಿಸಬೇಕು. ಹೀನಗುಣಗಳಿಂದ ದೂರವಿರುವವನೇ ಹಿಂದುವಾಗಿದ್ದಾನೆ. ಹಿಂದೂ ಶಬ್ಧ ವಿದೇಶೀ ದಾಳಿಕೋರರು ನಮಗೆ ಕಲಿಸಿದ್ದಲ್ಲ. ಅದು ನಮ್ಮ ಭೂಭಾಗದ ಪರಿಮಿತಿಯ ಸಂಕೇತವಾಗಿದೆ.
- ಹಿಂದುಗಳ ಸಂಸ್ಕೃತಿಯ ಸರಳ ಲಕ್ಷಣಗಳೇನು? ಇದು ಏಕೆ ವಿಶ್ವಶ್ರೇಷ್ಟ ?
ಹಿಂದುಗಳ ಸಂಸ್ಕೃತಿ ಪ್ರಕೃತಿಯೊಂದಿಗೆ ಮೇಳೈಸಿದೆ. ಹಿಂದೂಗಳು ಪ್ರಕೃತಿಪ್ರಿಯರು ಹಾಗೂ ಪ್ರಕೃತಿ ಆರಾಧಕರು. ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಲು ಭಗವಂತನ ಸೃಷ್ಟಿಯ ಪ್ರತಿಯೊಂದು ವಸ್ತುವನ್ನೂ ಕೃತಜ್ಞತಾ ಭಾವದಿಂದ ಗೌರವಿಸುವ ಗುಣವನ್ನು ಹೊಂದಿದ ಮನೋಭಾವ ಜಗತ್ತಿನಲ್ಲಿ ಹಿಂದೂಗಳದ್ದು ಮಾತ್ರವೇ ಆಗಿದೆ. ಸೃಷ್ಟಿಕರ್ತನನ್ನು ಸೃಷ್ಟಿಯಲ್ಲಿ ಕಾಣುತ್ತಿರುವ ಏಕೈಕ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಇದನ್ನು ವಿಶ್ವಕ್ಕೆ ಕಲಿಸಿದ್ದು ಹಿಂದೂ ಧರ್ಮ ಮಾತ್ರ. ಹಿಂದುಗಳು ಭಗವಂತ ಸರ್ವವ್ಯಾಪಕತ್ವವನ್ನು ಒಪ್ಪಿದವರಾಗಿದ್ದಾರೆ. ದೇವರು ಎಲ್ಲಾಕಡೆಯೂ ಇದ್ದಾನೆ ಅಣುಅಣುವಿನಲ್ಲೂ ಇದ್ದಾನೆ, ಕಣಕಣದಲ್ಲೂ ಇದ್ದಾನೆ ಎಂದು ಸಾರಿದ ವಿಶಾಲ ಚಿಂತನೆಯ ಮಾನವ ಧರ್ಮ ಸನಾತನ ಧರ್ಮವಾಗಿದೆ ಅದುವೇ ಹಿಂದೂ ಧರ್ಮವಾಗಿದೆ. ಭಗವಂತನ ಸರ್ವವ್ಯಾಪಕತ್ವವನ್ನು ತಿಳಿಸಲೋಸುಗವೇ ಪ್ರಹಲ್ಲಾದನ ಕಥೆ ಇದೆ. ಕಲ್ಲು ಕಂಬದಿಂದ ನರಸಿಂಹ ಹೊರಬಂದು ರಾಕ್ಷಸ ಹಿರಣ್ಯಕಶಿಪುವನ್ನು ಕೊಲ್ಲುತ್ತಾನೆ. ಭಗವಂತನನ್ನು ನಿರಾಕಾರ, ನಿರ್ಗುಣ, ಸಚ್ಚಿದಾನಂದ ಸ್ವರೂಪ ಎಂದು ಹೇಳಿದ ವಿಶ್ವದ ಪ್ರಾಚೀನ ಧರ್ಮ ಹಿಂದೂ ಧರ್ಮ. ಭಗವಂತನ ಸೃಷ್ಟಿಯು ಕೇವಲ ಮಾನವನ ಭೋಗಕ್ಕಾಗಿ ನಿರ್ಮಿತವಾಗಿದ್ದಲ್ಲ. ಜಗತ್ತು ಸೃಷ್ಟಿಯ ಪ್ರತಿಯೊಂದು ಜೀವರಾಶಿಗಳಿಗೂ, ಜಡ ವಸ್ತುಗಳಿಗೂ ಅಗತ್ಯವಾಗಿದೆ. ಪ್ರಕೃತಿಯನ್ನು ಹಾಳುಮಾಡದೆ ಅದನ್ನು ದೇವರ ವರಪ್ರಸಾದ ಎಂದು ಭಾವಿಸಿ ಕೃತಜ್ಞತೆಯಿಂದ ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಪ್ರಕೃತಿಯನ್ನು ಶುದ್ಧರೂಪದಲ್ಲಿ ಉಳಿಸಿಕೊಳ್ಳಬೇಕೆಂಬ ಪ್ರಜ್ಞೆಯನ್ನು ವಿಶ್ವಕ್ಕೆ ಸಾರಿದ, ಮಾದರಿಯ ಜೀವನಾದರ್ಶವನ್ನು ವಿಶ್ವಕ್ಕೆ ನೀಡಿದ ತ್ಯಾಗದ ಧರ್ಮ ಹಿಂದೂ ಧರ್ಮ ಮಾತ್ರವೇ ಆಗಿದೆ. ವಿಶ್ವದ ಎಲ್ಲಾ ಮತಗಳಲ್ಲಿಯೂ ಭೋಗಿಗಳು (ಅಧಿಕ ಹಣಗಳಿಸಿದವರು) ಆದರ್ಶವಾಗಿದ್ದರೆ. ಹಿಂದೂಧರ್ಮದಲ್ಲಿ ತ್ಯಾಗಿಗಳು ಮಹಾತ್ಮರಾಗಿದ್ದಾರೆ. ಪಾಶ್ಚಾತ್ಯರ ಭೋಗ ಹಾಗೂ ಮರುಭೂಮಿಯ ಕ್ರೌರ್ಯದ ಅಸುರ ಮತಗಳು ಪ್ರಕೃತಿಯಭೋಗದ ಜೀವನವನ್ನು ಸಾರಿದೆ. ಈ ದುರ್ಮತಗಳು ಜಗತ್ತನ್ನು ವಿನಾಶದೆಡೆಗೆ ದೂಡುತ್ತಿವೆ. ಆದರೆ ಹಿಂದೂ ಧರ್ಮ ಮಾತ್ರ ಮಾನವನಿಗೆ ತ್ಯಾಗ ಜೀವನವನ್ನು ಶ್ರೇಷ್ಠ ಎಂದು ಬೋಧಿಸಿದೆ. ಭೋಗದಿಂದ ಜೀವಿ ಅದಃಪತನವನ್ನು ಹೊಂದುತ್ತಾನೆ. ತ್ಯಾಗ ಮಾರ್ಗದಿಂದ ಮುಕ್ತಿಯನ್ನು ಹೊಂದುತ್ತಾನೆ ಎಂದು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಬಾಹ್ಯ ಸುಖಗಳಿಗೆ, ಭೌತಿಕ ವಾದಕ್ಕೆ ಹಿಂದೂಗಳು ಮಹತ್ವ ಕೊಟ್ಟಿಲ್ಲ. ನಮ್ಮ ಋಷಿಮುನಿಗಳು ಭೌತಿಕ ಸಂಪತ್ತನ್ನು ಬಯಸದೆ, ಭೋಗಿಸದೆ, ಅಂತ್ಯಕಾಲವನ್ನು ವನಗಳಲ್ಲಿ ಆಶ್ರಮಗಳಲ್ಲಿ ಬದುಕಿ ಮಾದರಿಯಾಗಿದ್ದರು. ನಮ್ಮ ಹಿರಿಯರು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ ನಾಲ್ಕು ಆಶ್ರಮಧರ್ಮವನ್ನು ನಮಗೆ ಕಲಿಸಿದ್ದಾರೆ. ಜ್ಞಾನದ ಉನ್ನತಿಯನ್ನು ಸಾಧಿಸುತ್ತಾಬಂದಂತೆ ಮನುಷ್ಯ ತ್ಯಾಗಮಾರ್ಗವನ್ನನುಸರಿಸಿ ಮಹಾತ್ಮನಾಗ ತೊಡಗುತ್ತಾನೆ. ಹಾಗೆಯೇ ಹಿಂಸೆಯನ್ನು ತ್ಯಜಿಸಿ ಸಾತ್ವಿಕ ವ್ಯಕ್ತಿಯಾಗ ತೊಡಗುತ್ತಾನೆ. ಸ್ವ ಇಚ್ಛೆಯಿಂದ ಸಸ್ಯಾಹಾರಿ ಯಾಗತೊಡಗುತ್ತಾನೆ. ನಮ್ಮ ಹಿರಿಯರು ತಿನ್ನುವ ಆಹಾರ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಶೋಧಿಸಿ ಸಾತ್ವಿಕ ಜೀವನಕ್ಕೆ ಸಾತ್ವಿಕ ಆಹಾರವನ್ನೇ ಸೂಚಿಸಿದ್ದಾರೆ. ಜಿಹ್ವಾಚಾಪಲ್ಯವನ್ನು ನಿಗ್ರಹಿಸಿಕೊಂಡು ಸಾತ್ವಿಕ ಬದುಕನ್ನು ಬದುಕಲು ಮಾರ್ಗದರ್ಶನ ಮಾಡಿದ್ದಾರೆ. ಭೌತಿಕ ಭೋಗಗಳನ್ನು ತ್ಯಜಿಸಿ ಮನೋನಿಗ್ರಹ ಮಾಡಲು ಮಾರ್ಗದರ್ಶನ ಮಾಡಿದ್ದು ಅದಕ್ಕೆ ಯೋಗಮಾರ್ಗವನ್ನು ಜಗತ್ತಿಗೆ ನೀಡಿದ್ದಾರೆ. ಹಿಂದೂ ಯೋಗಿಗಳ ಈ ಯೋಗ ಮಾರ್ಗ ಇಂದು ಎಷ್ಟು ಯೋಗ್ಯ ಹಾಗೂ ಆಧುನಿಕ ಜಗತ್ತಿನಲ್ಲಿ ಎಷ್ಟು ಅವಶ್ಯ ಎನ್ನುವುದು ಇಂದು ಜಗತ್ತಿನ ಅರಿವಿಗೆ ಬರುತ್ತಿದ್ದು ನರೇಂದ್ರ ಮೋದಿಯವರ ಪ್ರಯತ್ನದಿಂದ ವಿಶ್ವಸಂಸ್ಥೆ ಈಗ ಜೂನ್ 21 ನ್ನು ಅಂತಾರಾಷ್ಟ್ರಿಯ ಯೋಗ ದಿನವೆಂದು ಘೋಷಿಸಿದೆ ಹಾಗೂ 180 ಕ್ಕೂ ಹೆಚ್ಚು ದೇಶಗಳು ಇದನ್ನು ಅನುಮೋದಿಸಿವೆ. ಮನಸ್ಸು ಬುದ್ದಿ ಹಾಗೂ ದೇಹದ ಮೇಲಿನ ಸಮತೋಲಿತ ನಿಯಂತ್ರಣ ಹಾಗೂ ನಿಗ್ರಹವೇ ಯೋಗದ ತಾಕತ್ತು.
ತಾನು ಬದುಕಲು ಉಪಯುಕ್ತವಾದ ಪ್ರತಿಯೊಂದು ವಸ್ತುವನ್ನೂ ಕೃತಜ್ಞತೆಯಿಂದ ನೋಡುವುದು, ದೈವ ಭಾವದಿಂದ ಪೂಜಿಸುವುದು ಗೌರವಿಸುವುದು ಹಾಗೂ ಜೀವನ ಪರ್ಯಂತ ಉಪಕಾರಮಾಡಿದವರಿಗೆ ಕೃತಜ್ಞರಾಗಿರುವುದು ಹಿಂದೂಗಳ ಶ್ರೇಷ್ಠ ಗುಣವಾಗಿದೆ, ಊಟಮಾಡುವ ಮೊದಲು ಅಡಿಗೆಯನ್ನು ದೇವರಿಗೆ ಅರ್ಪಿಸುತ್ತೇವೆ. ಇದನ್ನು ನೈವೇದ್ಯ ಎನ್ನುತ್ತೇವೆ. ಅನ್ನವನ್ನು ಪೂಜಿಸುತ್ತೇವೆ, ಅನ್ನ ಬೇಯಿಸಲು ನೆರವಾಗುವ ಅಗ್ನಿಯನ್ನು ಪೂಜಿಸುತ್ತೇವೆ. ಜೀವನಾವಶ್ಯಕವಾದ ಗಾಳಿ ನೀರು ಭೂಮಿ ಎಲ್ಲವನ್ನೂ ಪೂಜಿಸುತ್ತೇವೆ, ಬೆಳೆದ ಧಾನ್ಯಗಳನ್ನು ಪೂಜಿಸುತ್ತೇವೆ. ಜ್ಞಾನ ನೀಡುವ ಪುಸ್ತಕವನ್ನು ಪೂಜಿಸುತ್ತೇವೆ, ರಕ್ಷಣೆಮಾಡುವ ಆಯುಧಗಳನ್ನು ಪೂಜಿಸುತ್ತೇವೆ. ಪ್ರಯಾಣಿಸುವ ವಾಹನವನ್ನೂ ಪೂಜೆಮಾಡುತ್ತೇವೆ. ಉಪಕಾರ ಮಾಡುವ ಪ್ರಾಣಿಗಳನ್ನು ಪೂಜಿಸುತ್ತೇವೆ. ಹಾಗೂ ಕೃತಜ್ಞತೆಯಿಂದ ನೋಡುತ್ತೇವೆ. ಹಾಲೆರೆದು ಸಾಕುವ ಹಸುವನ್ನು ತಾಯಿಯಂತೆ ಗೌರವಿಸುತ್ತೇವೆ. ಬದುಕಲು ಅಗತ್ಯವಿರುವ ಭೂಮಿ, ಮರಗಿಡ, ವನಸ್ಪತಿ, ಎಲ್ಲದರಲ್ಲಿಯೂ ಭಗವಂತನ ಅಸ್ತಿತ್ವವನ್ನು ಸನ್ನಿಧಾನವನ್ನು ಕಾಣುವ, ಕೃತಜ್ಞತಾಭಾವದಿಂದ ಸ್ವೀಕರಿಸುವ ಆರಾಧಿಸುವ ಗೌರವಿಸುವ ಮಹಾನ್ ಧರ್ಮ ಹಿಂದೂ ಧರ್ಮವಾಗಿದೆ. ಹಾಗೂ ಹಿಂದೂ ಜೀವನ ಪದ್ದತಿಯಾಗಿದೆ. ಮಾತೃದೇವೋ ಭವ, ಪಿತೃದೇವೋ ಭವ, ಅಥಿತಿ ದೇವೋ ಭವ, ಆಚಾರ್ಯದೇವೋ ಭವ, ಎಂದು ಜಗತ್ತಿಗೆ ಕಲಿಸಿದ ಧರ್ಮ ಹಿಂದೂ ಧರ್ಮವಾಗಿದೆ. ವೈದ್ಯೋ ನಾರಾಯಣೋ ಹರಿಃ ಎಂಬುದಾಗಿ ವೈದ್ಯರನ್ನು ನಾರಾಯಣ ನೆಂದು ಕರೆದಿದ್ದೇವೆ. ಕಲೆ, ಸಂಸ್ಕೃತಿ, ಜ್ಞಾನ, ವಿಜ್ಞಾನ, ,ವಿದ್ಯೆ, ವೈದ್ಯ , ಅಸ್ತ್ರ , ಶಸ್ತ್ರ ,ಖಗೋಳ, ಭೂಗೋಳ, ಜ್ಯೋತಿಷ್ಯ, ಸಾಹಿತ್ಯ, ಇತಿಹಾಸ, ಸತ್ಯ, ಶಾಂತಿ, ಶೌರ್ಯ ,ತ್ಯಾಗ , ಸಂಯಮ, ಶುಚಿತ್ವ, ಸಭ್ಯತೆ, ಶೀಲ, ಶಿಲ್ಪ, ಸಂಗೀತ, ಸಂಪತ್ತು, ಶಿಸ್ತು, ಶಿಕ್ಷಣ, ಶಿಶ್ಟಾಚಾರ, ಎಲ್ಲದರಲ್ಲಿಯೂ ಅತ್ಯುನ್ನತ ಸ್ಥಿತಿಯಲ್ಲಿ ಹತ್ತಾರು ಸಾವಿರ ವರುಷಗಳ ಹಿಂದೆಯೇ ಬದುಕಿ ಜಗತ್ತಿಗೆ ಬದುಕಲು ಕಲಿಸಿದ ಜನ ಹಿಂದೂಗಳಾಗಿದ್ದಾರೆ. ಹಾಗೂ ನಮ್ಮ ಋಷಿಮುನಿಗಳಾಗಿದ್ದಾರೆ, ದೇಶ ವಿದೇಶಗಳಿಂದ ಬದುಕಲು, ಕಲಿಯಲು ವಿದ್ಯೆ ಕಲಿಯಲು ಆಧ್ಯಾತ್ಮವನ್ನು ಅರಿಯಲು ಸಾವಿರಾರು ವರುಷಗಳಿಂದ ಇಲ್ಲಿಗೆ ಭಾರತಕ್ಕೆ ವಿದೇಶೀ ಜನರು ಬರುತ್ತಿದ್ದಾರೆ. ಇವರೊಂದಿಗೆ ದುಷ್ಟ ಲೂಟಿಕೋರ ಅಸುರರೂ ಸಾತ್ವಿಕ ಸಂಸ್ಕೃತಿಯ ಹಂತಕರೂ ಈ ದೇಶಕ್ಕೆ ಬಂದು ಭಾರತ ದೇಶದ ಸತ್ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ.
ಭಗವಂತನ ಸೃಷ್ಠಿಯನ್ನು ಅಂದರೆ ಪ್ರಕೃತಿಯನ್ನು ಯಾರು ಪ್ರೀತಿಸುತ್ತಾನೋ, ಯಾರು ಗೌರವಿಸುತ್ತಾನೋ, ಯಾರು ಪೂಜ್ಯಭಾವದಿಂದ ಆರಾಧಿಸುತ್ತಾನೋ, ಯಾರು ತ್ಯಾಗಕ್ಕೆ ಮಹತ್ವ ಕೊಡುತ್ತಾನೋ, ಯಾರು ಉಪಕಾರಕ್ಕೆ ಕೃತಜ್ಞತೆ ತೋರಿಸುತ್ತಾನೋ, ಯಾರು ಸರ್ವ ಚರಾಚರಗಳ ಬದುಕಿಗೂ ಅವಕಾಶ ಕಲ್ಪಿಸಿಕೊಡುತ್ತಾನೋ, ಯಾರು ಮನೋನಿಗ್ರಹ, ಇಂದ್ರಿಯ ನಿಗ್ರಹದ ಸಾಧನೆಯಲ್ಲಿ ಕಾರ್ಯಪ್ರವೃತ್ತರಾಗುತ್ತಾರೋ, ಯಾರು ದೇವರನ್ನು ನಂಬುತ್ತಾನೋ, ಹಿರಿಯರನ್ನು ಗೌರವಿಸುತ್ತಾನೋ, ಸ್ವಾಭಿಮಾನಿಯೂ, ಶೌರ್ಯವಂತನೂ, ಸತ್ಯವಂತನೂ, ಶೀಲವಂತನೂ, ಕ್ಷಮಾಶೀಲನೂ, ಆಗಿರುತ್ತಾನೋ ಯಾರು ಭಾರತದ ನೆಲದ ಸಂಸ್ಕೃತಿಯನ್ನು ಗೌರವಿಸುತ್ತಾನೋ ಅಂತಹವನನ್ನು ನಿಸ್ಸಂಶಯವಾಗಿ ಹಿಂದು ಅಥವಾ ಸನಾತನ ಧರ್ಮಾನುಯಾಯಿ ಎನ್ನಬಹುದು. ಪರಿಪೂರ್ಣನಾದ ಹಿಂದುವು ಕಾಯಾ ಮನಸಾ ವಾಚಾ ಪರಿಶುದ್ಧನೂ ಶೂರನೂ ಆಗಿರುತ್ತಾನೆ.
ಜಡದಲ್ಲಿಯೂ ದೈವತ್ವವನ್ನು ಕಂಡು ಪೂಜಿಸುವವನು, ಗೌರವಿಸುವವನು! ಪ್ರಾಣಿಗಳನ್ನು ಅದಕ್ಕಿಂತಲೂಹೆಚ್ಚು ಪ್ರೀತಿಸುತ್ತಾನೆ. ಜೀವಿಗಳನ್ನೇ ಪ್ರೀತಿಸಿ ಪೂಜಿಸುವವನು ಮನುಷ್ಯನನ್ನು ಎಂದೂ ದ್ವೇಷಿಸಲಾರನು. ಹಿಂದುಗಳ ಈ ವಿಶಾಲ ಮನಸ್ತಿತಿಯ ದುರುಪಯೋಗಪಡೆದು ವಿದೇಶೀಮೂಲದ ಅನಿಷ್ಠಮತಗಳು ಅಪ್ರಾಮಾಣಿಕ ವಿಕೃತ ಬುದ್ದಿಜೀವಿಗಳೊಂದಿಗೆ ಸೇರಿಕೊಂಡು ಭಾರತದ ಈ ನೆಲದಲ್ಲಿ ಅನಾಚಾರ ಮಾಡುತ್ತಿವೆ. ಅಜ್ಞಾನಬಿತ್ತುತ್ತಿವೆ. ಭಾರತೀಯರನ್ನು ಅಜ್ಞಾನದಿಂದ ಮೇಲೆತ್ತಲು ಈದೇಶದ ಇತಿಹಾಸದಲ್ಲಿ ಅನೇಕ ಪುಣ್ಯಪುರುಷರ ಅವತಾರವಾಗಿದೆ. ಉದಾ ಭಗವಾನ್ ಶ್ರೀಕೃಷ್ಣ, ಶ್ರೀರಾಮ ಮುಂತಾದ ಅವತಾರವಾಗಿದೆ. ದುಷ್ಟಚಿಂತನೆಯನ್ನು ನಾಶಮಾಡುವ ಸುಜ್ಞಾನವನ್ನು ಜಗತ್ತಿಗೆ ಹೇಳುವ ಕಾಲ ಈಗ ಸನ್ನಿಹಿತವಾಗಿದೆ. ಹಿಂದೂಗಳೇ ಸಿದ್ಧರಾಗಿ. ದುಷ್ಟರು ದಾಯಾದಿಗಳಾಗಿದ್ದರೂ ಅವರನ್ನು ನಾಶಮಾಡಬೇಕೆಂಬುದು ಕೃಷ್ಣನ ಉಪದೇಶವಾಗಿದೆ. ಈ ಮಾತೇ ಮಹಾಭಾರತ ಯುದ್ಧದ ಮುನ್ನುಡಿಯೂ, ಭಗವದ್ಗೀತೆಯ ಪ್ರೇರಣೆಯೂ ಆಗಿದೆ. ಇದು ಹಿಂದುಗಳಿಗೆ ಸರಿಯಾಗಿ ಆರ್ಥವಾಗಬೇಕಿದೆ. ದುರ್ಜನರ ವಿರುದ್ಧ ಹೋರಾಡಲು ಶ್ರೀ ಕೃಷ್ಣ ನಮಗೆ ಪ್ರೇರಣೆಯಾಗಲಿ. ಶಿಷ್ಟರಕ್ಷಣ ಹಾಗೂ ದುಷ್ಟಶಿಕ್ಷಣ ಪ್ರತಿಯೊಬ್ಬ ಹಿಂದೂವಿನ ಅಂತಃಕರಣದ ಧ್ವನಿಯಾಗಲಿ. ಪ್ರತಿಜ್ಞೆಯಾಗಲಿ ಹೇಡಿ ಎಂದೂ ಹಿಂದುವಾಗಲಾರ. ನಮ್ಮ ಸನಾತನ ವೈದಿಕ ಪರಂಪರೆ ಕ್ಷಾತ್ರ ಪರಂಪರೆ. ನಮ್ಮ ದೇವಾನುದೇವತೆಗಳೆಲ್ಲರೂ ದುರ್ಜನರ ಸಂಹಾರಕ್ಕಾಗಿ ಸದಾ ಶಸ್ತ್ರಧಾರಿಗಲಾಗಿರುತ್ತಿದ್ದರೆನ್ನುವುದನ್ನು ನೆನಪಿನಲ್ಲಿಡಿ. ಹಿಂದುಗಳನ್ನು ಮಾನಸಿಕವಾಗಿ ದುರ್ಬಲ ಗೊಳಿಸಲಾಗಿದೆ. ಆ ಅಜ್ಞಾನದಿಂದ ಹೊರಬರೋಣ ಭಗವದ್ಗೀತೆಯನ್ನು ಓದುವ ಮೂಲಕ ಆಧುನಿಕ ಅರ್ಜುನರಾಗಿ ದುಷ್ಟ ವಿಚಾರಗಳ ವಿರುದ್ಧ ಮಹಾಯುದ್ಧವನ್ನು ಸಾರೋಣ. ಹಿಂದೂ ಸಂಸ್ಕೃತಿಯನ್ನು ವಿಶ್ವವ್ಯಾಪಿಯಾಗಿಸಿ ವಿಶ್ವಶಾಂತಿಯನ್ನು ಸ್ಥಾಪಿಸೋಣ ಹಾಗೂ ಭಾರತವನ್ನು ವಿಶ್ವಗುರುವಾಗಿಸೋಣ.
ಶ್ರೀಜಿ
ಹೈ ಹಿಂದ್ ಜೈ ಭಾರತಮಾತಾ