ಹಿಂದೂ ಸಂಸ್ಕೃತಿಯ ಮೂಲ ಸಾಹಿತ್ಯ ಅಥವಾ ಆಧಾರ ಗ್ರಂಥಗಳು ಯಾವುವು? ವೇದ ಎಂದರೆ ಏನು? ವೇದಗಳಲ್ಲಿ ಏನಿದೆ? ಎಷ್ಟು ವೇದಗಳಿವೆ ಅದರ ಸ್ವರೂಪ ಏನು?ಇತಿಹಾಸ ಎಂದರೆ ಏನು? ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಇವುಗಳನ್ನು ಯಾರು ರಚಿಸಿದ್ದಾರೆ?

ಹಿಂದೂ ಸಂಸ್ಕೃತಿಯ ಮೂಲ ಸಾಹಿತ್ಯಗಳೆಂದರೆ! ವೇದಗಳು, ಉಪನಿಷತ್ತುಗಳು, ಬ್ರಾಹ್ಮಣಗಳು, ಸ್ಮೃತಿಗಳು, ಭ್ರಹ್ಮಸೂತ್ರಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಮಹಾಕಾವ್ಯಗಳು, ಹದಿನೆಂಟು ಪುರಾಣಗಳು, ಭಾಷ್ಯಗಳು ಇವೇ ಮುಂತಾದುವಾಗಿವೆ. ಇವೆಲ್ಲಾ ಸಂಸ್ಕೃತ ಭಾಷಾ ಸಾಹಿತ್ಯಗಳಾಗಿವೆ. ಸನಾತನ ಧರ್ಮದ ಮೂಲ ಆಧಾರಗ್ರಂಥ ವೇದಗಳಾಗಿವೆ.

ವೇದ ಎಂದರೆ ಏನು? ವೇದಗಳಲ್ಲಿ ಏನಿದೆ? ಎಷ್ಟು ವೇದಗಳಿವೆ ಅದರ ಸ್ವರೂಪ ಏನು?

ವೇದ ಎಂದರೆ ಜ್ಞಾನ ಎಂದು ಅರ್ಥ. ವೇದಗಳಲ್ಲಿ ಅಪಾರವಾದ ಜ್ಞಾನ ಬೀಜರೂಪದಲ್ಲಿ ಮಂತ್ರಗಳಲ್ಲಿ ಹುದುಗಿದೆ. ಇದು ಅನೇಕ ಋಷಿಮುನಿಗಳ ಸಾಧನೆಯ ತಪಸ್ಸಿನ ಫಲ. ಹಲವು ಸಾವಿರ ವರುಷಗಳ ಹಿಂದೆಯೇ ವೇದಗಳು ರಚಿತವಾಗಿವೆ. ಆದರೆ ಇತಿಹಾಸಕಾರರು ತಮಗೆ ತಿಳಿದಂತೆ ಐದು ರಿಂದ ಏಳು ಸಾವಿರ ವರುಷಗಳ ಹಿಂದೆಯೇ ವೇದಗಳು ರಚಿತವಾಗಿದ್ದವು ಎನ್ನುವುದಾಗಿ ಒಪ್ಪುತ್ತಾರೆ. ಮೊದಲು ಶೃತಿ ಸ್ಮೃತಿ ಗಳಿಂದ ಇವು ಗುರುಗಳಿಂದ ಶಿಷ್ಯರಿಗೆ ಹರಿದು ಬಂದ ಈ ಜ್ಞಾನಸುಧೆ ನಂತರದಲ್ಲಿ ಸಂಸ್ಕೃತ ಸಹಿತ್ಯವಾಗಿ ದೇವನಾಗರಿ ಲಿಪಿಯಲ್ಲಿ ಸಂಪನ್ನಗೊಂಡಿತು. ಹಿಂದುಸ್ಥಾನದ ಭೂಗೋಳಿಕ ಲಕ್ಷಣಗಳನ್ನು ವೇದಗಳಲ್ಲಿ ತಿಳಿಯಬಹುದು. ಅಸ್ತವ್ಯಸ್ತವಾಗಿ ಹಂಚಿಹೋಗಿದ್ದ ಅಖಂಡ ವೇದವನ್ನು ಒಗ್ಗೂಡಿಸಿ ಅದನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿ ವ್ಯವಸ್ಥಿತವಾಗಿ ಸಂರಕ್ಷಿಸಿದ ಕೀರ್ತಿ ವೇದವ್ಯಾಸಮುನಿಗಳಿಗೆ ಸಲ್ಲುತ್ತದೆ. ಮುಖ್ಯವಾಗಿ ವೇದಗಳು ನಾಲ್ಕು ಭಾಗವಾಗಿ ವೇದವ್ಯಾಸರಿಂದ ವಿಭಾಗಿಸಿ ಕೊಡಲ್ಪಟ್ಟಿದೆ.  ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣವೇದ ಇವು ಮುಖ್ಯ ವೇದಗಳಾಗಿವೆ. ಇನ್ನು ನಾಲ್ಕು ಉಪವೇದಗಳು ಇವೆ ಇವುಗಳನ್ನು ಅರ್ಥವೇದ, ಧನುರ್ವೇದ, ಗಾಂಧರ್ವವೇದ, ಆಯುರ್ವೇದ,  ಎಂದು ಗುರುತಿಸಲಾಗಿದೆ ಮಹಾಭಾರತವನ್ನು ಪಂಚಮವೇದ ಎನ್ನುತ್ತಾರೆ. ವೇದಗಳ ಸಾರ ರೂಪವಾದ ಉಪನಿಷತ್ತುಗಳು ಹಾಗೂ ವೇದಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವ ಬ್ರಹ್ಮಸೂತ್ರಗಳೂ ರಚಿಸಲ್ಪಟ್ಟಿವೆ. ವೇದಗಳು ಮಂತ್ರಗಳೆಂದು ಪದ್ಯರೂಪವಾಗಿಯೂ ಆರಣ್ಯಕ ಗಳೆಂದು ಗದ್ಯರೂಪದಲ್ಲಿಯೂ ರಚಿತವಾಗಿವೆ. ಹಿಂದೂಗಳನ್ನು ನಿರಭಿಮಾನಿ ಗಳನ್ನಾಗಿಸಲು ಹಾಗೂ ಸಮಾಜವನ್ನು ಒಡೆಯುವ ಕುತಂತ್ರದಿಂದ ಕ್ರಿಶ್ಚಿಯನ್ನರಾದ ಬ್ರಿಟಿಷರು ತಮ್ಮ ಮತ ಪ್ರಚಾರಕ್ಕಾಗಿ ಹಾಗೂ ಹಿಂದೂ ಸಮಾಜವನ್ನು ದುರ್ಬಲ ಗೊಳಿಸಲು ಆರ್ಯ-ದ್ರಾವಿಡ ವಾದವನ್ನು ಹುಟ್ಟುಹಾಕಿದರು. ಆರ್ಯರು ಹೊರಗಿನಿಂದ ಬಂದವರು  ಇಲ್ಲಿನ ಮೂಲ ನಿವಾಸಿಗಳ ಮೇಲೆ ದೌರ್ಜನ್ಯಮಾಡಿದರು ಎಂದು ಸಾಮಾನ್ಯರ ಮನಸ್ಸು ಕೆಡಿಸಿ ಕೆಳವರ್ಗದವರು ಮೇಲ್ವರ್ಗದವರನ್ನು ದ್ವೇಶಿಸುವಂತೆ ವಿಘಟನೆ ಮಾಡಿದರು. ಹೀಗೆ ಸಮಾಜವನ್ನು ಒಡೆದಾಳುನ ನೀತಿಯಿಂದ ಬ್ರಿಟಿಷರು ಭಾರತವನ್ನು ಆಳಿದರು. ಇದು ಪೊಳ್ಳುವಾದವೆಂದು ಇಂದು ಸಿದ್ಧವಾಗಿದೆ. ಆದುದರಿಂದ ಆರ್ಯದ್ರಾವಿಡ ವಾದ ಅರ್ಥಹೀನವಾಗಿದ್ದು. ವೇದೋಕ್ತ ನಾಗರೀಕತೆಯ ಮೂಲ ಭಾರತವೇ ಆಗಿದೆ ಎನ್ನುವುದು ಇಂದಿನ ಐತಿಹಾಸಿಕವಾದ ಸತ್ಯವಾಗಿದೆ. ವೇದಗಳು ಈ ಭೂಮಿಯಲ್ಲಿಯೇ ಜನ್ಮತಾಳಿವೆ ಹಾಗೂ ಇಲ್ಲಿಂದ ವಿಶ್ವಾದ್ಯಂತ ನಮ್ಮ ಸಂಸ್ಕೃತಿಯ ಕಂಪನ್ನು ಪಸರಿಸಿದೆ. ಇದು ಈ ನೆಲದ ಋಷಿಮುನಿಗಳ ತಪಸ್ಸಿನ ಫಲವಾಗಿದೆ. ಆದರೂ ಕೆಲವು ಆತ್ಯಾತೀತರೆಂಬ ಎಡಬಿಡಂಗಿಗಳು ಇಂದು ಹಳೇ ತುತ್ತೂರಿಯನ್ನೇ ಊದುತ್ತಾ ಸಮಾಜ ಒಡೆಯಲು ಶ್ರಮ ಪಡುತ್ತಿದ್ದಾರೆ. ಇವರ ಕುತಂತ್ರವನ್ನು ಹಿಂದುಗಳು ಅರಿತುಕೊಳ್ಳಬೇಕಿದೆ.

ಇತಿಹಾಸಎಂದರೆಏನು?

ನಡೆದಘಟನೆಯನ್ನು ಆಧರಿಸಿ ರಚಿತವಾದ ಸಾಹಿತ್ಯಾತ್ಮಕ ದಾಖಲೆಗಳನ್ನು ಇತಿಹಾಸ ಎನ್ನುತ್ತಾರೆ. ಗತಿಸಿದ ಘಟನೆಗಳೇ ಇತಿಹಾಸ ವಾಗಿದೆ. ಈ ದೆಸೆಯಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಪ್ರಾಚೀನ ಐತಿಹಾಸಿಕ ಮಾಹಾಕಾವ್ಯಗಳೆಂದು ಪರಿಗಣಿಸಲ್ಪಟ್ಟಿವೆ. ಇತಿಹಾಸ ರಚಿಸುವಾಗಲೂ ಸಾಕಷ್ಟು ವಾಸ್ತವಿಕ ಅಂಶಗಳೊಂದಿಗೆ ಕೆಲವೊಮ್ಮೆ ಕಾವ್ಯದ ಸೊಗಸು ಹಾಗೂ ರೋಚಕತೆಗಾಗಿ ಕೆಲವೊಂದು ಘಟನೆ ಹಾಗೂ ಸನ್ನಿವೇಶಗಳನ್ನು ಉಪ್ರೇಕ್ಷೆಯೊಂದಿಗೆ ರಂಜನೀಯವಾಗಿ ವರ್ಣಿಸುವುದೂ ಇರುತ್ತದೆ. ಆದರೂ ಇತಿಹಾಸವು ಸತ್ಯಘಟನೆಯ ಆಧಾರದಿಂದ ರಚಿತವಾದ ಕೃತಿ ಆಗಿರುತ್ತದೆ. ಇಂತಹ ರಾಮಾಯಣ ಮಹಾಭಾರತಗಳೇ ನಮ್ಮ ಸಂಸ್ಕೃತಿಯ ವಿಶ್ವಕೋಶವಾಗಿವೆ ಮುಂದಿನ ಎಲ್ಲಾಕೃತಿಗಳಿಗೆ ಪ್ರೇರಣೆಯಾಗಿವೆ ಹಾಗೂ ಇವುಗಳ ಪ್ರಭಾವ ಹಿಂದೂ ಜೀವನ ಪದ್ದತಿಯಲ್ಲಿ ಗಾಢವಾಗಿ ಪರಿಣಾಮ ಬೀರಿದೆ. ಶಾಸ್ತ್ರಕಾರರು ರಾಮಾಯಣ ಮಹಾಭಾರತವನ್ನು ಪುರಾಣ ಎಂದು ಕರೆದಿಲ್ಲ ಇತಿಹಾಸ ಕಾವ್ಯ ಎಂದು ಕರೆದಿದ್ದಾರೆ. ಏಕೆಂದರೆ ಇದು ನಡೆದಘಟನೆ ಆಧರಿಸಿಯೇ ರಚಿತ ವಾಗಿದೆ ಎನ್ನುವುದು ವಾಸ್ತವ.

ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಯಾರು ರಚಿಸಿದ್ದಾರೆ?

ಹೆಸರೇ ಹೇಳುವಂತೆ ಪುರಾಣಗಳು ಪುರಾಣಗಳೇ ಆಗಿವೆ ಇವುಗಳನ್ನು ಇತಿಹಾಸ ಎಂದು ಕರೆದಿಲ್ಲ. ಪುರಾಣಗಳು ಒಟ್ಟು ಹದಿನೆಂಟು ಇವೆ. ಹಾಗೆಯೇ ಹದಿನೆಂಟು ಉಪ ಪುರಾಣಗಳೂ ಇವೆಎನ್ನಲಾಗಿದೆ. ಒಂದೊಂದು ಪುರಾಣಗಳು ಒಂದೊಂದು ದೇವರನ್ನು ವೈಭವೀಕರಿಸಿ ರಚಿಸಲಾಗಿದೆ ಒಂದಕ್ಕೊಂದು ವಿರೋಧಾಭಾಸ ಇದೆ. ಪುರಾಣಗಳಲ್ಲಿ ಎಲ್ಲಾಗುಣಗಳ ಮಿಶ್ರಣ ಇದೆ.  ಪುರಾಣಗಳಲ್ಲಿನ ಉತ್ತಮ ಅಂಶವನ್ನು ಮಾತ್ರ ನಾವುಗ್ರಹಿಸುವ ಅಗತ್ಯವಿದೆ. ಹಲವು ದೇವರುಗಳಾದಮೇಲೆ ದೇವರಲ್ಲಿ ಹೆಚ್ಚುಕಡಿಮೆ ಉತ್ತಮ ಕನಿಷ್ಟ ಮುಂತಾಗಿ ತಾರತಮ್ಯ ಮಾಡಿಕೊಂಡು ಒಂದೊಂದು ದೇವರನ್ನು ಬೆಂಬಲಿಸಿ ಒಂದೊಂದು ಗುಂಪುಗಳು ಹುಟ್ಟಿಕೊಂಡವು ಹೀಗೆ ವಿಷ್ಣು ಆರಾಧಕರು, ಶಿವನ ಆರಾಧಕರು,ಶಕ್ತಿ ಆರಾಧಕರು , ಗಣಪತಿ ಆರಾಧಕರು, ಷಣ್ಮುಕನ ಆರಾಧಕರು ಮುಂತಾಗಿ ಹಲವು ಗುಂಪುಗಳಾಗಿ ಅವರುಗಳು ತಮ್ಮ ದೇವರೇ ಶ್ರೇಷ್ಟ ಎಂದು ಬಿಂಬಿಸುವ ಪುರಾಣಗಳನ್ನು ರಚಿಸಿಕೊಂಡರು. ಇವುಗಳೆಲ್ಲವನ್ನೂ ವ್ಯಾಸರೇ ಬರೆದಿದ್ದಾರೆ ಎಂದು ಪ್ರಚಾರ ಮಾಡಿಕೊಂಡಿದ್ದಾರೆ, ಯಾರು ಬರೆದಿದ್ದಾರೆ? ವ್ಯಾಸರಾದರೆ ಯಾವ ವ್ಯಾಸರು? ಮಹಾಭಾರತ ಬರೆದ ವೇದವ್ಯಾಸರೋ ಅಥವಾ ಅಧುನಿಕ ವ್ಯಾಸರೋ ಇವೆಲ್ಲಕ್ಕೂ ಉತ್ತರ ಕೊಡುವುದು ಕಷ್ಟ, ವಿರೋಧಾಭಾಸದ ಕೃತಿಯನ್ನು ಮಹಾಭಾರತ ಬರೆದ ವೇದವ್ಯಾಸರು ಬರೆದಿಲ್ಲ ಎಂದು ನಾವು ನಂಬಬಹುದು. (ಆದರೆ ಕೆಲವು ಸಂಪ್ರದಾಯವಾದಿಗಳು ವಿಮರ್ಶೆಯನ್ನು ಒಪ್ಪುವುದಿಲ್ಲ.) ಈ ಪುರಾಣಗಳ ರಚನೆ ನಂತರದ ಕಾಲಘಟ್ಟದಲ್ಲಿ ದೇವರಬೆಂಬಲಿಗರು ತಮ್ಮ ತಮ್ಮ ಇಷ್ಟದೈವದ ಕುರಿತಾಗಿ ರಚಿಸಿಕೊಂಡ ಕೃತಿಗಳೇ ಪುರಾಣಗಳೆನ್ನುವುದು ನಿಜವಾಗಿದೆ ಎನ್ನಬಹುದು. ಅನೇಕ ತೀರ್ಥ ಕ್ಷೇತ್ರಗಳಲ್ಲಿ ಸ್ಥಳಪುರಾಣ ರಚಿತವಾಗಿದೆ. ಪುರಾಣಗಳು ಪುರಾಣಿಕರಿಂದ ಪ್ರಚಾರಪಡೆಯಿತು.

ವೇದಗಳ ಕಾಲದಲ್ಲಿ ಪ್ರಕೃತಿಯ ರೂಪವಾದ  ಅಥವಾ ಅದರ ಪ್ರತಿನಿಧಿಗಳಾದ ಇಂದ್ರ, ಅಗ್ನಿ, ವಾಯು, ವರುಣ, ಯಮ, ಮುಂತಾಗಿ ದೇವತೆಗಳಿದ್ದರು. ವೇದಾರ್ಥದಲ್ಲಿ ಈ ಎಲ್ಲಾಹೆಸರುಗಳೂ ಒಬ್ಬನೇ ಭಗವಂತನದ್ದಾಗಿದೆ. ಆದರೆ ಪುರಾಣಗಳಲ್ಲಿ ಇವುಗಳಿಗೆಲ್ಲಾ ವಿವಿಧ ರೂಪ ಪಾತ್ರ ಕೊಡಲಾಗಿದೆ.  ನಂತರದಲ್ಲಿ ಶ್ರೀ ರಾಮ, ಶ್ರೀ ಕೃಷ್ಣ ಇವರುಗಳು ತಮ್ಮ ಮಾದರೀ ಆದರ್ಶ ಬದುಕಿನಿಂದಾಗಿ ದೈವತ್ವಕ್ಕೆ ಏರಿ ಅವತಾರಪುರುಷರೆನಿಸಿಕೊಂಡರು. ಪುರಾಣಗಳಿಂದಾಗಿ ಹಲವು ದೇವದೇವತೆಗಳು ಬೆಳಕಿಗೆ ಬಂದರು. ಇವುಗಳಲ್ಲಿ ವಿಷ್ಣು . ವಿಷ್ಣುವಿನ ಹೆಸರಿನಲ್ಲಿ ದಶಾವತಾರ,  ನಂತರ ದೇವಿ ಅಕೆಯಹೆಸರಿನಲ್ಲಿ ಹಲವು ಅವತಾರರೂಪಗಳು ನವದುರ್ಗೆಯರು, ಶಿವ ಆತನ ಮಕ್ಕಳಾದ ಷಣ್ಮುಖ ಗಣಪತಿ ಮುಂತಾದವರು ದೇವರೆಂದು ಪೂಜೆಗೊಂಡರು ನಂತರದಲ್ಲಿ ದೇವರ ವಾಹನ ರೂಪಗಳಾದ ನಂದಿ ಶಿವನ ಆಭರಣವಾದ ನಾಗ, ರಾಮಭಕ್ತ ಹನುಮ ಎಲ್ಲರೂ ಪೂಜಿಸಲ್ಪಡತೊಡಗಿದರು. ಮುಂದುವರಿದು ಶೀವಗಳಣಗಳು, ಶನಿದೇವರು, ಮಾರಮ್ಮ, ಚೌಡಮ್ಮರೂ ಅಣ್ಣಮ್ಮ ಮುಂತಾಗಿ ದೇವರಾದರು, ಹಾಗೆಯೇ ನಂತರದಲ್ಲಿ ಚೌಡಿ ಭೂತಗಳಿಗೂ ಪೂಜೆಶುರುವಾಯಿತು ಹೀಗೆ ಸಂಸ್ಕೃತಿಯ ಉದಯ ಹಾಗೂ ವಿಕಸನವಾಯಿತು.

  • ಶ್ರೀಜಿ