ಆರ್ಯ, ಅನಾರ್ಯ ಎಂದರೇನು ? ಇವರು ಬೇರೆ ಬೇರೆಯೇ? ಆರ್ಯರು ಹೊರಗಿನವರೇ ?
ಆರ್ಯ-ದ್ರಾವಿಡ ವಾದ ಇದೊಂದು ಹಿಂದೂ ವಿರೋಧಿಗಳು ಹೆಣೆದ ವಿಭಜಕ ಸಿದ್ದಾಂತ. ಹಿಂದುಸಮಾಜವನ್ನು ಒಡೆದು ಹಿಂದೂಸ್ಥಾನವನ್ನು ದುರ್ಬಲಗೊಳಿಸಲು ಆ ಮೂಲಕ ತಮ್ಮ ಸಾಮ್ರಾಜ್ಯ ವಿಸ್ತರಿಸಲು ವಿದೇಶಿಯರು ಮುಖ್ಯವಾಗಿ ಬ್ರಿಟಿಷರು ಹಾಗೂ ಎಡಪಂಥೀಯರು ಹೂಡಿದ ಸಂಚು ಇದಾಗಿದೆ. ಬ್ರಿಟಿಷರು ಹಿಂದೂಗಳ ಒಗ್ಗಟ್ಟನ್ನುನ್ನು ಒಡೆಯಲು ಹೂಡಿದ ಕುತಂತ್ರ ಕಥೆಯೇ ಆರ್ಯ-ದ್ರಾವಿಡ ವಾದವಾಗಿದೆ. ಆರ್ಯರು ಹೊರಗಿನಿಂದ ಬಂದವರೆಂದೂ ಅವರು ಉತ್ತರ ಭಾರತದಲ್ಲಿ ನೆಲೆನಿಂತರೆಂದೂ. ದಕ್ಷಿಣ ಭಾರತೀಯರು ಅನಾರ್ಯರು ಇವರು ದ್ರಾವಿಡರು. ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ. ಹೊರಗಿನೀಂದ ಬಂದ ಅರ್ಯರು ಇಲ್ಲಿನ ಮೂಲನಿವಾಸಿಗಳ ಮೇಲೆ ದಬ್ಬಾಳಿಕೆ ಮಾಡಿದರೆಂದು ಕಥೆಕಟ್ಟಿ. ಆರ್ಯರೆಂದರೆ ಮೇಲ್ವರ್ಗದವರು ಅವರು ನಿಮ್ಮನ್ನು ಶೋಷಣೆ ಮಾಡಿದವರೆಂದು ಬಡಜನರ ಮನಸ್ಸಿನಲ್ಲಿ ದ್ವೇಷಬಿತ್ತಿ, ದೇಶದೊಳಗೇ ಸಮಾಜವನ್ನು ಎರಡುಪಂಗಡ ಮಾಡಿ ಪರಸ್ಪರ ಮೇಲ್ವರ್ಗವನ್ನು ಕೆಳವರ್ಗದವರು ದ್ವೇಶಿಸುವಂತೆ ಮಾಡಿದರು. ಹೀಗೆ ಹಿಂದೂ ಸಮಾಜವನ್ನು ಒಡೆದು ಇದರ ಪ್ರಯೋಜನ ಪಡೆದು ಬ್ರಿಟಿಷರು ಈದೇಶವನ್ನು ಲೂಟಿಮಾಡಿದ್ದಾರೆ. ಹಾಗೂ ಇನ್ನೂರು ವರುಷ ದೇಶವನ್ನು ದಬ್ಬಾಳಿಕೆ ಮಾಡಿದ್ದಾರೆ. ಬ್ರಿಟಿಷರ ಈ ವಾದಕ್ಕೆ ಯಾವುದೇ ಐತಿಹಾಸಿಕ ಪುರಾವೆ ಇಲ್ಲ. ಜನರ ಡಿ ಎನ್ ಎ ಕೂಡಾ ಇದನ್ನು ಪುಷ್ಟೀ ಕರಿಸುತ್ತಿಲ್ಲ. ಆರ್ಯ ಎನ್ನುವುದು ಶ್ರೇಷ್ಠ ಅಥವಾ ಜ್ಯೇಷ್ಠ ಎಂದರೆ ಹಿರಿಯ ಎನ್ನುವ ಅರ್ಥ ಕೊಡುತ್ತದೆ. ವಿದ್ಯಾವಂತರಾದ ರಾಜ ಮಹಾರಾಜರನ್ನೂ ಪಂಡಿತರನ್ನೂ ಆರ್ಯ ಎಂದು ಸಂಬೋಧಿಸಲಾಗುತ್ತಿತ್ತು. ಪತ್ನಿ ಪತಿಯನ್ನು ಆರ್ಯ ಎಂದು ಸಂಬೋಧಿಸಿದರೆ ಪತಿ ಪತ್ನಿಯನ್ನು ಆರ್ಯೇ ಎಂದು ಕರೆಯುವ ರೂಢಿಇತ್ತು. ವಿದ್ಯಾಭ್ಯಾಸದಿಂದಲೂ ಸಭ್ಯತೆಯಿಂದಲೂ ಶಿಷ್ಟಾಚಾರದಿಂದಲೂ ದೂರ ಇದ್ದವರನ್ನು ಅನಾರ್ಯ ಎನ್ನಲಾಗಿದೆ. ಅಂದಿನ ಕಾಲದ ಶಿಕ್ಷಿತ ಹಾಗೂ ಅಶಿಕ್ಷತ ಎನ್ನಬಹುದು. ಮಂಡೋದರಿಯು ರಾವಣನನ್ನೂ ಆರ್ಯಪುತ್ರ ಎಂದೇ ಸಂಬೋಧಿಸುತ್ತಿದ್ದಳು ಎಂದ ಮೇಲೆ ಉತ್ತರ ದಕ್ಷಿಣ ಆರ್ಯ ದ್ರಾವಿಡ ವಾದಕ್ಕೆ ಅರ್ಥ ಇಲ್ಲ ಎನ್ನುವುದು ಅರಿವಾಗುತ್ತದೆ. ಅಖಂಡ ಭಾರತ ಒಂದೇ ಮನೋಭಾವ ಹಾಗೂ ಸಂಸ್ಕೃತಿಯ ಭಾಗವಾಗಿತ್ತು. ಹಾಗೂ ಇಡೀದೇಶದ ಜನ ಅರಿತಿರುವ ಸಾಮಾನ್ಯ ಭಾಷೆ ಸಂಸ್ಕೃತ ವಾಗಿತ್ತು. ವಿದ್ವಜ್ಜನರುಕೂಡಾ ಈ ಭಾಷೆಯಲ್ಲಿಯೇ ಕೃತಿಗಳನ್ನು ರಚಿಸುತ್ತಿದ್ದರು. ಸಂಸ್ಕೃತ ಕಾವ್ಯ ಪುರಾಣಗಳು ಇಡೀ ದೇಶಕ್ಕೆ ಅನುಕರಣ ಯೋಗ್ಯವಾಗಿದ್ದು. ಈ ವಿಭಜಕರು ಶಿವ ಅನಾರ್ಯರ ದೇವರು, ದ್ರಾವಿಡ ದೇವರು, ದಕ್ಷಿಣದ ಜನರ ದೇವರು. ವಿಷ್ಣು ಆರ್ಯರ ದೇವರು ಅಂದರೆ ಉತ್ತರ ಭಾರತೀಯರ ದೇವರು ಎಂಬುದಾಗಿ ಪ್ರಚಾರ ಮಾಡುದರು. ಇಂತಹ ವಿಕೃತವಾದಗಳೆಲ್ಲಾ ಇಂದು ಬಿದ್ದು ಹೋಗಿದೆ. ಇದು ಹಿಂದು ಸಮಾಜವನ್ನು ಒಡೆಯಲು ದುರ್ಮತಿಗಳು ಮಾಡಿದ ಕಪಟ ನಾಟಕವಾಗಿದೆ. ಕುತಂತ್ರ ಇತಿಹಾಸದ ಭಾಗವಾಗಿದೆ. ಶಿವನ ಸ್ಥಾನ ಕೈಲಾಸವೂ, ವಿಷ್ಣುವಿನ ಸ್ಥಾನ ವೈಕುಂಟವೂ ಉತ್ತರದಲ್ಲಿಯೇ ಇದೆ. ಕಾಶಿ ಮಥುರಾಗಳೂ ಉತ್ತರದಲ್ಲಿಯೇ ಇವೆ. ಇಲ್ಲಿಂದಲೇ ಭಾರತೀಯ ಸಂಸ್ಕೃತಿ ವಿಶ್ವಾದ್ಯಂತ ಹರಡಿದೆ. ಹಿಮಾಲಯವೇ ಹಿಂದೂ ಸಂಸ್ಕೃತಿಯ ಮೂಲವೂ ಆಧ್ಯಾತ್ಮ ಜಗತ್ತಿನ ಜೀವಾಳವೂ ಆಗಿದೆ. ಆರ್ಯರು ಶ್ವೇತ ವರ್ಣದವರು ಅವರು ಬ್ರಾಹ್ಮಣರು, ದ್ರಾವಿಡರು ಕಪ್ಪು ವರ್ಣದವರು ಅವರು ಶೂದ್ರರು . ಇದೆಲ್ಲಾ ಜನರನ್ನು ದಾರಿತಪ್ಪಿಸುವ ವಾದವಾಗಿದೆ. ಆರ್ಯರು ದ್ರಾವಿಡರನ್ನು ಶೋಷಣೆ ಮಾಡಿದರು ಎನ್ನುವುದೂ ರಾಜಕೀಯ ಲಾಭಕ್ಕಾಗಿ ಸಮಾಜದ ಒಗ್ಗಟ್ಟನ್ನು ಒಡೆಯಲು ಹೆಣೆದ ಕಟ್ಟು ಕಥೆ. ಮೊದಲು ಬ್ರಿಟಿಷರು ಸಮಾಜ ಒಡೆದ ಮಾದರಿಯಲ್ಲಿಯೇ ಮುಂದೆ ಜಾತ್ಯಾತೀತ ಹೆರಿನಲ್ಲಿ ಹುಟ್ಟಿಕೊಂಡ ಕುಟುಂಬ ಪೋಷಿತ ರಾಜಕೀಯ ಪಕ್ಷಗಳು ಜಾತ್ಯಾತೀತದ ಹೆಸರಿನಲ್ಲಿ ಹೇಸಿಗೆ ಹುಟ್ಟಿಸುವಷ್ಟು ಜಾತಿವಾದಗಳನ್ನು ಬೆಳೆಸಿವೆ. ಇವು ಸ್ವ ಹಿತಾಸಕ್ತಿಯಿಂದ ಒಂದು ಕುಟುಂಬದ ಸೇವೆಯೇ ಧ್ಯೇಯವಾಗುಳ್ಳ ಕಾಂಗ್ರೇಸ್ ಪಕ್ಷ ಈ ಒಡೆದಾಳುವ ನೀತಿಯನ್ನು ಮುಂದುವರೆಸಿತು. ಸಮಾಜವನ್ನು ಜೋಡಿಸಬೇಕಾದವರು ಸಮಾಜವನ್ನು ಒಡೆಯಲು ತಮ್ಮ ದುರ್ಬುದ್ದಿಯನ್ನು ಉಪಯೋಗಿಸಿದರು. ನಾವು ದೇವರೆಂದು ಪೂಜಿಸುವ ಶ್ರೀರಾಮ, ಶ್ರೀ ಕೃಷ್ಣರು ಶ್ವೇತವರ್ಣದವರಾಗಿರಲಿಲ್ಲ ಕೃಷ್ಣ ಹೆಸರೇ ಕಪ್ಪನ್ನು ಸೂಚಿಸುತ್ತದೆ. ನೀಲ ಮೇಘ ಶ್ಯಾಮ ಎಂದು ಮೋಡದ ಬಣ್ಣದಲ್ಲಿ ಕೃಷ್ಣನನ್ನು ವರ್ಣಿಸಿದ್ದಾರೆ. ಹಾಗೆಯೇ ಆರ್ಯರ ದೇವರು ವಿಷ್ಣು ವೆಂಬುದಾಗಿಯೂ, ದ್ರಾವಿಡ ದೇವರು ಶಿವ ಎನ್ನುವವರಿಗೂ ತಿಳಿಯಬೇಕಾದುದು ವಿಷ್ಣುವೂ ಶ್ವೇತವರ್ಣದವನಾಗಿರಲಿಲ್ಲ ಎನ್ನುವುದು. ಹಾಗೆಯೇ ಮಹಾಭಾರತದಲ್ಲಿ ದ್ರೌಪತಿ ಸ್ವಯಂವರದ ವರ್ಣನೆಯಲ್ಲಿ ದ್ರೌಪದಿಯೂ ಕಪ್ಪುವರ್ಣದ ಸುಂದರಿಯಾಗಿದ್ದಳು ಎಂಬುದಾಗಿಯೇ ವರ್ಣಿಸಲ್ಪಟ್ಟಿದ್ದನ್ನು ಗಮನಿಸಬೇಕು. ಭಾರತೀಯರಿಗೆ ಬಣ್ಣ ಹಾಗೂ ಜಾತಿ ಎಂದೂ ಮುಖ್ಯವಾಗಿರಲಿಲ್ಲ ಎಲ್ಲಕಾಲದಲ್ಲಿಯೂ ಗುಣಶ್ರೇಷ್ಠರಾದವರನ್ನು ಗೌರವಿಸಿಕೊಂಡು ಪೂಜಿಸಿಕೊಂಡು ಬಂದುದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ವಾಗಿದೆ. ವ್ಯಾಸರ ತಾಯಿ ಸತ್ಯವತಿ ಬೆಸ್ತನ ಮಗಳು. ವಾಲ್ಮೀಕಿ ಮಹರ್ಷಿಗಳು ಬೇಡನಾಗಿದ್ದವರು. ಕೃಷ್ಣ ಗೊಲ್ಲರವನು, ರಾಮ ಕ್ಷತಿಯ,ಇವರಾರೂ ಬ್ರಾಹ್ಮಣರಾಗಿರಲ್ಲಿ. ಇವರ ಸಾಧನೆಯಿಂದ ಇವರು ಮಹಾತ್ಮರಾದರು. ಅವರ ಶ್ರೇಷ್ಠತೆಯನ್ನು ತಾವು ಅಳವಡಿಸಿಕೊಳ್ಳುತ್ತಾ ಅವರನ್ನ ದೇವರೆಂದು ಪೂಜಿಸಿಕೊಂಡು ಅವರ ಗ್ರಂಥಗಳನ್ನು ಸಂರಕ್ಷಿಸಿಕೊಂಡು ಬಂದವರು ಬ್ರಾಹ್ಮಣರಾಗಿದ್ದಾರೆ. ಆದರೆ ಇಂದು ಹಿಂದೂ ವಿರೋಧಿಗಳು ಹಿಂದೂ ಧರ್ಮ ನಾಶಕ್ಕೆ ಅದನ್ನು ಆಚರಿಸಿಕೊಂಡು ಶಾಸ್ತ್ರಗಳನ್ನು ಸಂಸ್ಕೃತವನ್ನು ರಕ್ಷಿಸಿಕೊಂಡು ಬಂದ ಬ್ರಾಹ್ಮಣರನ್ನು ಗುರಿಯಾಗಿಸಿ ರಾಜಕೀಯ ಸಾಮಾಜಿಕ ಹಾಗೂ ಬೌದ್ಧಿಕ ವಾಗಿ ದಾಳಿನಡೆಸುತ್ತಿದ್ದಾರೆ. ಇಂದು ಸಮಾಜ ಒಡೆಯುವ ಗಂಜಗಿರಾಕಿಗಳು ಬ್ರಾಹ್ಮಣದ್ವೇಷದಿಂದ ಇವರನ್ನು ದೂಷಿಸಲು ಹೀಗೆ ಕಥೆ ಕಟ್ಟಿ ಬಳಸಿಕೊಂಡಿದ್ದಾರೆ. ಬ್ರಾಹ್ಮಣರನ್ನು ನಾಶಮಾಡಿದರೆ ಹಿಂದೂ ಸಂಸ್ಕೃತಿಯನ್ನು ನಾಶಮಾಡುವುದು ಸುಲಭ ನ್ನುವುದು ಈ ಹಿಂದೂ ದ್ವೇಷಿಗಳ ಕುತಂತ್ರ ವಾಗಿದೆ. ದೋಷಹುಡುಕುವವರಿಗೆ ಎಂದೂ ಉತ್ತಮವಾದುದು ಕಾಣುವುದಿಲ್ಲ. ಲೋಕದಲ್ಲಿ ಒಳಿತು ಕೆಡುಕು ಎರಡೂ ಸಾಮಾನ್ಯವಾಗಿರುತ್ತದೆ. ಆದರೆ ನಾವು ಒಳಿತನ್ನು ಅನುಸರಿಸಬೇಕೇ ಹೊರತು ಕೆಡುಕನ್ನಲ್ಲ. ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಜಾತಿ ಜಾತಿ ಗಳಲ್ಲಿ ವರ್ಗ ವರ್ಗ ಗಳಲ್ಲಿ ಒಡೆಯುವುದಲ್ಲ. ಹಿಂದೂ ಸಂಸ್ಕೃತಿಯನ್ನು ಶಾಸ್ತ್ರಗಳನ್ನು ಅವಹೇಳನ ಮಾಡುವ ಇವರು ಎಂದಿಗೂ ಇದರ ಅಧ್ಯಯನ ಮಾಡಿಲ್ಲ. ಉಗ್ರಗಾಮಿಗಳ ಇತಿಹಾಸ ಕಲಿತ ಇವರಿಗೆ ಹಿಂದೂಗಳ ಧರ್ಮಶಾಸ್ತ್ರ ಹಿಡಿಸುವುದಿಲ್ಲ. ಒಬ್ಬ ಸ್ತ್ರೀಲೋಲ ಲಂಪಟನಾದ ಪ್ರಧಾನಮಂತ್ರಿಯ ಕೈಯಲ್ಲಿ ಸ್ವತಂತ್ರೋತ್ತರ ದೇಶ ಸಾಕಷ್ಟು ಅನಾಹುತವನ್ನು ನೋಡಬೇಕಾದುದು ಈ ದೇಶದ ದುರಂತ. ಹಿಂದೂಗಳ ಒಗ್ಗಟ್ಟನ್ನು ಒಡೆಯುವವರು ಮುಸಲ್ಮಾನರಿಂದಾದ ದೇವಾಲಯಗಳ ನಾಶ, ಅಮಾಯಕರ ಬಲಾತ್ಕಾರದ ಮತಾಂತರ, ಹತ್ಯೆ, ಕ್ರೌರ್ಯಗಳನ್ನು ಮುಚ್ಚಿಡುತ್ತಾರೆ. ಕ್ರಿಶ್ಚಿಯನ್ನರಿಂದಾದ ಮತಾಂತರ ದಬ್ಬಾಳಿಕೆ, ಸೇವೆಯ ಹೆಸರಿನಲ್ಲಿ ಮಾಡುವ ಸಮಾಜ ಘಾತಕತನವನ್ನು ಮುಚ್ಚುಟ್ಟು ಆರ್ಯ, ಅನಾರ್ಯ ಎಂಬುದಾಗಿ ಸುಳ್ಳುಕಥೆ ಹುಟ್ಟಿಸಿ ಸಮಾಜವನ್ನು ಒಡೆಯಲು ವಿದೇಶೀ ರಾಜಕೀಯ ಶಕ್ತಿಗಳನ್ನು ಬಳಸಿಕೊಂಡು. ದೇಶವನ್ನು ದುರ್ಬಲ ಗೊಳಿಸುತ್ತಿದ್ದಾರೆ. ಹಿಂದೂ ವಿರೋಧಿ ಕರಾಳ ಹಸ್ತದ ಕೊಳಕು ಕೈಗಳು. ಹಿಂದೂ ವಿರೋಧಿ ಜಾತ್ಯಾತೀತ ಎನ್ನುವ ಕೊಳಕು ಜನ ಹಾಗೂ ರಾಜಕೀಯ ಪಕ್ಷಗಳು ಇವರೊಂದಿಗೆ ಕಳೆದ ಎಪ್ಪತ್ತು ವರ್ಷದಿಂದ ಕೈಜೋಡಿಸಿವೆ. ಇವರನ್ನು ಸಮಾಜ ತಿರಸ್ಕರಿಸಬೇಕಿದೆ. ಗಾಂಧಿಜಿಯನ್ನು ಕೊಂದವನು ಗೋಡ್ಸೆ ಎಂದು ಪಠ್ಯಪುಸ್ತಕದಲ್ಲಿ ಸೇರಿಸಿದ ಕಾಂಗ್ರೇಸಿಗರು, ಗಾಂಧಿಯನ್ನು ಗೋಡ್ಸೆ ಯಾಕೆ ಕೊಂದ ಎಂಬುದನ್ನು ಹೇಳುವುದಿಲ್ಲ. ಅಲ್ಲದೆ ಗುರುಗೋವಿಂದ ಸಿಂಗರನ್ನು ಕೊಂದವರು ಯಾರೆಂಬುದನ್ನು ಮುಚ್ಚಿಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದವರಾರು. ಸುಭಾಷ್ಚಂದ್ರ ಭೋಸರನ್ನು ಕೊಂದವರಾರೆಂಬುದನ್ನು ಮುಚ್ಚಿಡುತ್ತಾರೆ. ಇದು ಇವರ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇಂದು ಹಿಂದುಗಳು ತಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕಾದರೆ ಅಭಿಮಾನ ಪಡಬೇಕಾದರೆ ಶುದ್ಧ ಇತಿಹಾಸವನ್ನು ತಿಳಿಯಬೇಕಿದೆ. ಕಾಂಗ್ರೇಸ್ ಕಲಿಸುವ ಲೂಟಿಕೋರರನ್ನು ವೈಭವೀಕರಣದ ತಿರುಚಿದ ಇತಿಹಾಸ ನಮಗೆ ಬೇಕಿಲ್ಲ. ಈ ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸುವದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಅದಕ್ಕಾಗಿ ಜೀವನವನ್ನು ಮುಡಿಪಾಗಿಡೋಣ ಜೈ ಹಿಂದ್ ಜೈ ಶ್ರೀ ರಾಮ್
- ಶ್ರೀಜಿ