ಹಿಂದೂ ಸಮಾಜದ ದೋಷಗಳೇನು? ಹಿಂದು ಸಮಾಜ ಅಸಂಘಟಿತ ವಾಗಲು ಕಾರಣವೇನು? ಹಿಂದು ಸಮಾಜವನ್ನು ಒಗ್ಗೂಡಿಸಲು ನಾವೇನು ಮಾಡಬಹುದು?
- ಧಾರ್ಮಿಕ ದೋಷಗಳು .
ಅ) ಧರ್ಮ ಶಿಕ್ಷಣದ ಕೊರತೆ
ಆ) ಬಹುದೇವತಾರಧನೆಯ ಗೊಂದಲ
ಇ) ಭಾರತದಲ್ಲಿನ ವಿವಿಧ ಮತಗಳು.
ಧರ್ಮಶಿಕ್ಷಣದ ಕೊರತೆ ಹಾಗೂ ಬಹುದೇವತಾರಧನೆಯ ಗೊಂದಲ >
ಭಾರತದಲ್ಲಿ ಕಾಲಕ್ರಮೇಣ ಹುಟ್ಟಿಕೊಂಡ ವಿವಿಧ ಮತಾಚಾರ್ಯರ ವಿಭಿನ್ನ ಸಿದ್ಧಾಂತಗಳು, ಧಾರ್ಮಿಕ ಆಚಾರ ವಿಚಾರಗಳಲ್ಲಿನ ಗೊಂದಲ, ಹಲವು ದೇವರುಗಳು, ಧಾರ್ಮಿಕ ಪುಸ್ತಕಗಳ ಅಲಭ್ಯತೆ ಹಾಗೂ ವಿಭಿನ್ನ ಮತಾಚಾರ್ಯರ ಮತಾಂಧ ಶಿಷ್ಯರಿಂದ ತಮ್ಮ ಮತಪ್ರಚಾರಕ್ಕಾಗಿ ವೇದಾರ್ಥ ಹಾಗೂ ಪುರಾಣ ಕಥೆಗಳನ್ನು ತಿರುಚಿದ ದೋಷಪೂರಿತ ಪುಸ್ತಕಗಳು, ಶುದ್ಧ ರೂಪದ ಧಾರ್ಮಿಕ ಸಾಹಿತ್ಯದ ಗ್ರಂಥ ಹಾಗೂ ಗ್ರಂಥಾಲಯಗಳ ಕೊರತೆ, ಜ್ಞಾನವನ್ನು ಕಡೆಗಣಿಸಿ ಭಕ್ತಿ ಪ್ರಚಾರಮಾಡುವ ಧಾರ್ಮಿಕ ಶ್ರಧ್ದಾ ಕೇಂದ್ರಗಳು, ವ್ಯಾಪಾರಸ್ಥರಾಗಿರುವ ಧಾರ್ಮಿಕ ಮುಖಂಡರು, ಮೌಢ್ಯ ಮಾರುವ ಧನಾಕಾಂಕ್ಷಿ ಕಪಟ ಜ್ಯೋತಿಷಿಗಳು. ವೇದ ಓದದೆ ಅರ್ಥ ಅರಿಯದೆ ಪೂಜೆ ನಡೆಸುವ ನಕಲಿ ಪುರೋಹಿತರುಗಳು. ಶಾಸ್ತ್ರ ಜ್ಞಾನವಿಲ್ಲದ ಅಜ್ಞಾನೀ ಭಕ್ತ ಸಮೂಹ. ಇವರೆಲ್ಲರೂ ತಮ್ಮ ಬೇಜವಾಬ್ದಾರಿಯಿಂದ ಹಿಂದೂ ಧರ್ಮದ ಶಿಥಿಲತೆಗೆ ಕಾರಣರಾಗಿದ್ದಾರೆ. ಸರಿಯಾದ ಮಾರ್ಗದರ್ಶಕರ ಕೊರತೆಯಿಂದಾಗಿ ಹಿಂದೂ ಸಮಾಜ ಧರ್ಮಶಿಕ್ಷಣದ ಕೊರತೆ ಅನುಭವಿಸಿತು. ಇದರಿಂದಾಗಿ ಬಹುದೇವತಾರಾಧನೆಯ ಗೊಂದಲ, ಶಾಸ್ತ್ರದ ಅಜ್ಞಾನ, ಸಂಪ್ರದಾಯದಿಂದ ಬಂದ ಆಚಾರವಿಚಾರಗಳ ಬಗ್ಗೆ ಧಾರ್ಮಿಕ ಜ್ಞಾನದ ಕೊರತೆ ಇರುವುದು ಹಾಗೂ ಸ್ಪಷ್ಟ ಹಾಗೂ ನಿಖರ ಧಾರ್ಮಿಕ ದೃಷ್ಟಿಕೋನ ಇಲ್ಲದಿರುವುದು ಇವೆಲ್ಲಾ ಹಿಂದೂ ಧರ್ಮದಮೇಲೆ ದುಷ್ಪರಿಣಾಮ ಬೀರಿದುವು. ಅಲ್ಲದೆ ಜನಸಾಮಾನ್ಯರಿಗೆ ಪಂಡಿತರುಗಳು ಸತ್ಯವನ್ನು ಮರೆಮಾಚಿ ಅಂಧವಿಶ್ವಾಸವನ್ನು ಬಿತ್ತುತ್ತಿರುವುದು. ಮಾಧ್ಯಮಗಳಲ್ಲಿ ಜ್ಯೋತಿಷವೆಂದು ಕಪಟಿಗಳನ್ನು ವೈಭವೀಕರಿಸುವುದು. ನಮ್ಮ ಸಮಾಜದ ದೋಷವಾಗಿದೆ.
ಭಾರತದಲ್ಲಿನ ವಿವಿಧ ಮತಗಳು > ಭಾರತೀಯ ಸಮಾಜದಲ್ಲಿ ಚಾರ್ವಾಕರಿಂದ ನಾಸ್ತಿಕ ವಾದವು ಆರಂಭವಾಗಿ, ಜೈನ ತೀರ್ಥಂಕರರಿಂದ ಜೈನ ಮತವೂ, ಗೌತಮ ಬುದ್ಧನಿಂದ ಬೌದ್ಧಮತವೂ, ಶಂಕರಾಚಾರ್ಯರಿಂದ ಅದ್ವೈತ ಮತವೂ, ಬಸವಣ್ಣನಿಂದ ವೀರಶೈವ ಮತವೂ, ಮಧ್ವಾಚಾರ್ಯರಿಂದ, ದ್ವೈತ ಮತವೂ, ರಾಮಾನುಜರಿಂದ ವಿಶಿಷ್ಟಾದ್ವೈತ ಮತವೂ, ಗುರುನಾನಕರಿಂದ ಸಿಖ್ ಮತವೂ ಹೀಗೆ ಹಿಂದೂ ಧರ್ಮದ ಸಾತ್ವಿಕ ಚಿಂತನೆ ಅನೇಕ ಕವಲುಗಳನ್ನು ಪಡೆದು ಜನಸಾಮಾನ್ಯರಿಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಉಂಟಾಗಿ ಒಂದೊಂದು ಮತದ್ದೂ ಒಂದೊಂದು ಪಂಗಡವಾಗಿ. ಕೆಲವು ಅಜ್ಞಾನೀ ಮತ ಪಂಡಿತರುಗಳು ತಮ್ಮ ಮತವೇ ಶ್ರೇಷ್ಠ ವೆಂದು ನಿರೂಪಿಸಲು ಅನ್ಯ ಮತವನ್ನು ನಿಂದಿಸುವ ಕೀಳುಮಟ್ಟಕ್ಕಿಳಿದಿದ್ದರಿಂದಾಗಿ ಪರಸ್ಪರ ಮತ ದ್ವೇಷ ಉಂಟಾಗಿ ಹಿಂದೂ ಸಮಾಜ ವಿಘಟನೆ ಆಯಿತು. ಮುಂದೆ ಬ್ರಿಟಿಷರು ಹಾಗೂ ಕಾಂಗ್ರೇಸಿಗರ ಕುಟಿಲ ರಾಜನೀತಿಯಿಂದಾಗಿ ಜಾತಿ ಒಡೆಯುವ ಕೆಲಸ ಮಾಡಲಾಗಿ ಇಂದು ಜಾತಿ ಜಾತಿಗಳ ಮಠಗಳು ಹುಟ್ಟಿಕೊಂಡುವು. ಪುನಃ ಕೆಳವರ್ಗ ಮೇಲ್ವರ್ಗ ಎಂದು ಹಿಂದೂ ಸಮಾಜವನ್ನು ಜಾತ್ಯಾತೀತರೆಂಬ ನೀಚರು ಒಡೆಯುತ್ತಿದ್ದಾರೆ. ಇದೆಲ್ಲಾ ನಮ್ಮ ಹಿಂದೂ ಧರ್ಮದ ದುರ್ಬಲತೆಗೆ ಪೂರಕವಾದ ವಿಚಾರಗಳಾಗಿವೆ.
ಈ ದೋಷಗಳನ್ನು ಸರಿಪಡಿಸಲು ಸ್ಪಷ್ಟವಾದ ಹಾಗೂ ನಿಖರವಾದ ದೃಷ್ಟಿಕೋನದಲ್ಲಿ ಸಮಾಜದ ಮುಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣ ಕೊಡಬೇಕು. ಧರ್ಮ, ದೇವರು, ಬಹುದೇವತಾರಾಧನೆ, ಸಂಸ್ಕೃತಿ, ಸಂಸ್ಕಾರಗಳಬಗ್ಗೆ ತಿಳುವಳಿಕೆ ನೀಡಬೇಕು. ಯಾವುದು ಶ್ರದ್ಧೆ, ಯಾವುದು ಅಂಧ ಶ್ರದ್ಧೆ, ಎಂಬುದರಲ್ಲಿ ಗೊಂದಲ ಇಲ್ಲದಂತೆ ಸ್ಪಷ್ಟತೆ ಇರಬೇಕು. ಅತಾರ್ಕಿಕ ವಾದಗಳನ್ನು ಖಂಡಿಸಿ ಅಂಧವಿಶ್ವಾಸ ಬಿತ್ತುವವರನ್ನು ತಿರಸ್ಕರಿಸಬೇಕು. ಸಂಸ್ಕೃತದ ಶಿಕ್ಷಣ ನೀಡಿ ಪ್ರಾಚೀನ ಸಾಹಿತ್ಯಗಳನ್ನು ವೈಚಾರಿಕ ದೃಷ್ಟಿಕೋನದಿಂದ ನೋಡುವಂತೆ ಪ್ರೋತ್ಸಾಹಿಸಬೇಕು. ಆಚರಣೆಗಳಲ್ಲಿ ಶಾಸ್ತ್ರಗಳಲ್ಲಿ ದೋಷಗಳಿದ್ದರೆ, ಅದು ಯಾಕೆ ಆಗಿದೆ? ಆ ಸಮಯದಲ್ಲಿ ಅದು ಯಾಕೆ ಅನಿವಾರ್ಯವಾಗಿತ್ತು? ಹಾಗೂ ಇಂದಿನಕಾಲಕ್ಕೆ ಅದು ಪ್ರಸ್ತುತವೇ? ವಿಮರ್ಶಿಸಿ ಯೋಗ್ಯವಾದುದನ್ನು ಅಂಗೀಕರಿಸಿ ದೋಷಪೂರಿತವಾದುದನ್ನು ತಿರಸ್ಕರಿಸಬೇಕು. ಯಾವುದೇ ಶಾಸ್ತ್ರ ಅಥವಾ ಮತಾಚಾರ್ಯರ ಬಗ್ಗೆ ಪೂರ್ವಾಗ್ರಹ ಇರಬಾರದು ಸಮಾಜಕ್ಕೆ ಒಳಿತುಂಟುಂಮಾಡುವ ವಾಸ್ತವವನ್ನು ನಿರ್ಭೀತವಾಗಿ ಪ್ರತಿಪಾದಿಸಬೇಕು ಹಾಗೂ ಒಪ್ಪ ಬೇಕು. ಮೌಢ್ಯವನ್ನು ತೊರೆಯಬೇಕು ಆದರೆ ಇವುಗಳ ಮಧ್ಯೆ ನಡೆದುಬಂದ ಸಂಸ್ಕೃತಿಯ ನಾಶಕ್ಕೆ ಅವಕಾಶಕೊಡಬಾರದು. ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಸಂತೋಷದ ಸಂಗತಿ ಎಂದರೆ ಇಂದಿನ ಯುವಜನತೆ ಇವೆಲ್ಲ ನ್ಯೂನ್ಯತೆಗಳ ಬಗ್ಗೆ ಎಚ್ಚರಗೊಂಡಿದ್ದು ದೇಶ ಹಾಗೂ ಧರ್ಮದ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನದಿಂದ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಘೋಷವಾಕ್ಯದೊಂದಿಗೆ ಒಂದಾಗುತ್ತಿದ್ದಾರೆ ಮತ್ತು ಹೆಚ್ಚಿನ ಧರ್ಮಗುರುಗಳು ಇತ್ತೀಚೆಗೆ ತಮ್ಮ ಮತಬೇಧ ಬಿಟ್ಟು ಪರಸ್ಪರ ಗೌರವಿಸುತ್ತಾ ಸಮಾಜ ಕಟ್ಟುವಲ್ಲಿ ಮುಂದಾಗುತ್ತಿರುವುದು ಹಿಂದೂ ಧರ್ಮದ ದೃಷ್ಟಿಯಿಂದ ಶುಭ ಸೂಚನೆಯಾಗಿದೆ. ಯಾವುದೇ ಬದಲಾವಣೆ ಜ್ಞಾನದಿಂದಾಗಬೇಕೇ ಹೊರತು ಮೌಢ್ಯದಿಂದ ಅಲ್ಲ ಎನ್ನುವುದು ಬಹಳ ಮುಖ್ಯವಾಗಿದೆ. ವಿಭಿನ್ನ ದೇವರ ಕುರಿತು ಹಲವು ಗೊಂದಲಗಳನ್ನು ಆರಂಭದಲ್ಲಿ ಬೇರೊಂದು ಲೇಖನದಲ್ಲಿ ಚರ್ಚಿಸಿದ್ದೇವೆ ಆ ದೃಷ್ಟಿಕೋನ ಸಾಮಾನ್ಯ ಜನರ ಗೊಂದಲಗಳ ನಿವಾರಣೆಗೆ ಸಹಾಯ ವಾಗಬಹುದು.
- ಸಾಮಾಜಿಕ ದೋಷಗಳು.
ಅ) ಅಸ್ಪೃಷ್ಯತೆ
ಆ) ಜಾತಿ ತಾರತಮ್ಯ
ಇ) ಅನಕ್ಷರತೆ, ಬಡತನ
ಈ) ನಿರುದ್ಯೋಗ
ಉ) ಮೂಢನಂಬಿಕೆಗಳು
ಊ) ಭಾಷಾ ಅಸಹಿಷ್ಣುತೆ
ಋ) ದುಶ್ಚಟಗಳು.
ಎ) ಕ್ಷೀಣಿಸುತ್ತಿರುವ ಹಿಂದು ಜನಸಂಖ್ಯೆ.
ಏ) ಸಂಕುಚಿತ ಮನೋಭಾವದ ಸಾಮಾಜಿಕ ಅಸಮಾನತೆ,
ಅಸ್ಪೃಶ್ಯತೆ > ಅಸ್ಪೃಶ್ಯತೆ ಇದೊಂದು ಕೆಟ್ಟ ಸಾಮಾಜಿಕ ಪಿಡುಗು ಇದು ತೊಲಗಬೇಕು. ಅಸ್ಪೃಶ್ಯತೆಗೆ ಕಾರಣವಾದ ಕೀಳು ಮನೋಭಾವವನ್ನು ಜನರಲ್ಲಿ ತೊಲಗಿಸಬೇಕು ಅಶಿಕ್ಷಿತ, ಶೋಷಿತ, ದಮನಿತ ಜನರಿಗೆ ಸುಶಿಕ್ಷಣ ಹಾಗೂ ಶಿಸ್ತು, ಶುದ್ಧತೆ ಬಗ್ಗೆ ಜಾಗ್ರತೆ ಮೂಡಿಸಿ ಅವರಲ್ಲಿ ಸ್ವಾಭಿಮಾನ ಮೂಡಿಸುವ ಕೆಲಸ ನಡೆಯಬೇಕು. ಹಿಂದುಳಿದವರಿಗೂ ಧಾರ್ಮಿಕ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿ ಯೊಂದಿಗೆ ಸೇರಿಸಿಕೊಂಡು ಮೇಲೆತ್ತುವ ಕಾರ್ಯನಡೆಯಬೇಕು.
ಜಾತಿ ತಾರತಮ್ಯ> ಜಾತಿಎನ್ನುವುದು ಒಂದು ಅಜ್ಞಾನದ ಅತಿರೇಕವಾಗಿದೆ. ಇದು ಅರ್ಥ ಇಲ್ಲದ ಆಚರಣೆಯಾಗಿದೆ. ಒಂದೊಂದು ಜಾತಿ ಒಂದೊಂದು ಆಚರಣೆಯನ್ನು ಅನುಸರಿಸಿವೆ. ರಾಜಕೀಯ ಉದ್ದೇಶಗಳಿಗಾಗಿ ಈ ದೇಶದ ಅನಿಷ್ಟ ಜಾತ್ಯಾತೀತ ಸರಕಾರಗಳು ಸಮಾಜದ ಈ ದೋಷವನ್ನು ಜೀವಂತವಾಗಿಟ್ಟಿವೆ. ಯಾವುದೇಜಾತಿಗೆ ಏನು ಮಾನದಂಡ ಎಂದು ಕೇಳಿದರೆ ಯಾರಿಗೂ ಅದರ ಅರಿವಿಲ್ಲ. ಎಲ್ಲಾ ಜಾತಿಯಲ್ಲೂ ಎಲ್ಲಾ ಬಗೆಯ ಕೆಲಸಗಳನ್ನು ಮಾಡುವ ಜನರಿರುವಾಗ ಜಾತಿಯು ಅರ್ಥ ಕಳೆದುಕೊಂಡಿದೆ. ವೃತ್ತಿ ಆಧಾರಿತ ವರ್ಣಗಳಿಗೂ ಈ ಜನ್ಮಾಧಾರಿತ ಜಾತಿಗಳಿಗೂ ಬಹಳ ವ್ಯತ್ಯಾಸ ಇದೆ. ಇದನ್ನು ಸರಿಯಾಗಿ ಅರಿಯಬೇಕು. ಒಂದು ಮನೆಯಲ್ಲಿ ಒಂದು ತಂದೆ ತಾಯಿಯ ನಾಲ್ಕು ಮಕ್ಕಳು ನಾಲ್ಕುವರ್ಣದವರು ಆಗಬಹುದು. ಆದರೆ ಅವರೆಲ್ಲರೂ ಜಾತಿಯಲ್ಲಿ ಒಂದೇ ಆಗಿರುತ್ತಾರೆ ಇದುವೆ ಜಾತಿಯ ಪದ್ದತಿ ಹಾಗೂ ವರ್ಣಕ್ಕಿರುವ ವ್ಯತ್ಯಾಸ. ಈ ಜಾತಿ ಪ್ರದರ್ಶನ ಅಳಿಯಬೇಕು. ಅಭಿಮಾನ ಅಂಧಾಭಿಮಾನವಾಗಬಾರದು. ಜಾತಿ ಪದ್ದತಿ ಹಿಂದೂ ಧರ್ಮವನ್ನು ಹಿಂದೂ ಸಮಾಜವನ್ನು ಒಡೆಯುತ್ತಿದೆ ಹಾಗೂ ದೇಶವನ್ನು ದುರ್ಬಲಗೊಳಿಸಿದೆ. ಹಿಂದೂ ಸಮಾಜವನ್ನು ಒಂದುಗೂಡಿಸಲು ನಾವು ಮುಂದಿನ ಪೀಳಿಗೆಗೆ ಜಾತಿಯ ವಿಷಕುಡಿಸಬಾರದು. ಜಾತಿ ಹೊರತಾದ ಧರ್ಮ ಸಂಸ್ಕಾರ ನೀಡಬೇಕು, ಸಮಾಜದಲ್ಲಿ ಜಾತಿಪ್ರದರ್ಶನಗಳು ನಿಲ್ಲಬೇಕು. ಜಾತಿ ಸಂಘಟನೆಗಳು ಧಾರ್ಮಿಕ ಸಂಘಟನೆಗಳಾಗಿ ಬದಲಾಗಿ ಸಮಾಜದ ಎಲ್ಲಾವರ್ಗದವರಹಿತವನ್ನು ನೋಡಬೇಕು. ಜಾತಿಯಿಂದ ಗುರುತಿಸಿಕೊಳ್ಳುವ ಅಲ್ಪಮತಿಗಳನ್ನು ದೂರ ಇಡಬೇಕು. ಜಾತಿ ಹೇಳಿಕೊಳ್ಳುವುದು ಇಂದು ಅಭಿಮಾನವಾಗಿದೆ ಅದು ನಾಚಿಕೆಯವಿಷಯವಾಗಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಹೆಸರಿನೊಂದಿಗೆ ಜಾತಿ ಸೇರಿಸುವ ಪದ್ದತಿಯನ್ನು ಬಿಡಬೇಕು. ಜಾತಿ ಕಾಲಂಗಳನ್ನು ತೆಗೆಯುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು. ಆಹ್ವಾನ ಪತ್ರಿಕೆಗಳಲ್ಲಿ, ವ್ಯಾಪಾರದಲ್ಲಿ ಜಾತಿಯನ್ನು ಉಪನಾಮವಾಗಿ ಪ್ರದರ್ಶಿಸಬಾರದು. ಸ್ವಾಭಿಮಾನ ಹಾಗೂ ಅನುಕೂಲ ಇದ್ದವರು ಜಾತಿ ಆಧಾರದಲ್ಲಿ ಸಿಗುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರಾಜಕೀಯದಲ್ಲಿ ಉದ್ಯೋಗದಲ್ಲಿ ಜಾತಿ ಆಧಾರದಲ್ಲಿ ಲಾಭಿ ಅಥವಾ ತಾರತಮ್ಯ ಮಾಡಬಾರದು. ಅರ್ಹರಿಗೆ ಮುಕ್ತವಾಗಿ ಪ್ರೋತ್ಸಾಹಿಸಬೇಕು. ಆರ್ಥಿಕ, ದೈಹಿಕ ಹಾಗೂ ಸಾಮಾಜಿಕವಾಗಿ ದುರ್ಬಲರಾದವರಿಗೆ ಹೆಚ್ಚಿನ ಮನ್ನಣೆ ನೀಡಬೇಕು.
ಅನಕ್ಷರತೆ > ಶಿಕ್ಷಣ ವಂಚಿತರಾದವರಿಗೆ ದೇಶದ ಅಥವಾ ಧರ್ಮದ ಮೇಲಿನ ಅಪಾಯದ ಅರಿವಿರುವುದಿಲ್ಲ. ತಿಳಿಯುವ ಸಾಮರ್ಥ್ಯ ದಿಂದ ಇವರು ವಂಚಿತರಾಗಿರುತ್ತಾರೆ ಅವರಲ್ಲಿ ಕೀಳರಿಮೆ ಇದ್ದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇಂತಹ ಜನರಿಗೆ ಧರ್ಮದ, ಜ್ಞಾನದ ಸ್ಪಷ್ಟ ಅರಿವಿರದೆ ಮೌಢ್ಯಕ್ಕೆ ಬಲಿಯಾಗಿ ಅಂಧಾನುಕರಣೆ ಹಾಗೂ ಕಂದಾಚಾರಗಳಿಗೆ ಬಲಿಯಾಗಿ ಜೀವನದಲ್ಲಿ ಕಷ್ಟಪಡುತ್ತಾರೆ. ಮತಾಂತರಮಾಡುವ ದುಷ್ಟಜನರ ಜಾಲಕ್ಕೆ ಬಲಿಯಾಗುತ್ತಾರೆ. ಇಂತಹವರ ಬಗ್ಗೆ ಹಿಂದೂ ಸಮಾಜ ವಿಶೇಷಗಮನ ಹರಿಸಬೇಕು ಹಾಗೂ ಸಹಾಯಮಾಡಬೇಕು.
ಬಡತನ ಹಾಗೂ ನಿರುದ್ಯೋಗ > ಅನಕ್ಷರತೆಯೇ ಬಡತನದ ಮೂಲ ಆದುದರಿಂದ ದುರ್ಬಲರ ಶೋಷಿತರ ಶಿಕ್ಷಣಕ್ಕೆ ನಾವು ಹೆಚ್ಚಿನ ಸಹಕಾರನೀಡಿ ಅಗತ್ಯವಿದ್ದವರಿಗೆ ಔದ್ಯೋಗಿಕ ತರಬೇತಿಗಳನ್ನು ನೀಡಿ ಅವರಿಗೆ ಉದ್ಯೋಗ ಒದಗಿಸಿ ಹಿಂದೂ ಬಂಧುಗಳು ಆರ್ಥಿಕವಾಗಿ ಬಲಿಷ್ಟವಾಗುವಂತೆ ನೋಡಿಕೊಳ್ಳಬೇಕು. ಸಣ್ಣಪುಟ್ಟ ಉದ್ಯೋಗಮಾಡುವವರಿಗೆ ಪ್ರೋತ್ಸಾಹ ಮಾಹಿತಿ ಮಾರ್ಗದರ್ಶನ ನೀಡಿ ಮೇಲೆತ್ತಬೇಕು. ಆರ್ಥಿಕ ಧನಸಹಾಯಮಾಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಸುಲಭ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು. ನಿರುದ್ಯೋಗ ಬಡತನ ಇರುವವರು ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳಲಾರರು ಅವರಿಗೆ ಮೊದಲ ಯೋಚನೆ ಹೊಟ್ಟೆ, ಬಟ್ಟೆಯದ್ದಾಗಿರುತ್ತದೆ ಇದು ಎಲ್ಲಿ ಸಿಗುತ್ತದೋ ಅತ್ತ ಇವರು ವಾಲುತ್ತಾರೆ. ಧರ್ಮ ಸಂಸ್ಕೃತಿ ಸಂಸ್ಕಾರ ಇವಾವುದೂ ಹಸಿದವನಿಗೆ ಅರ್ಥವಾಗುವುದಿಲ್ಲ. ಈ ಅರಿವು ಧರ್ಮ ಸುಧಾರಕರಿಗೆ ಇರಬೇಕು.
ಮೂಢನಂಬಿಕೆಗಳು> ಮೂಢನಂಬಿಕೆಗಳ ಮೂಲ ಕೂಡಾ ಧಾರ್ಮಿಕ ಶಿಕ್ಷಣದ ಕೊರತೆ ಹಾಗೂ ಬಡತನದಲ್ಲಿದೆ. ಇಂದು ಸುಶಿಕ್ಷಿತರು ಎಂದು ಕರೆದುಕೊಳ್ಳುವ ಜನರೂ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಹಾಗೂ ಇಂತಹವರನ್ನು ಧಾರ್ಮಿಕ ಸ್ಥಳಗಳು ವಂಚಿಸಿ ಹಣ ಸೆಳೆಯುತ್ತಿರಲು ಮುಖ್ಯ ಕಾರಣ ಲೌಕಿಕ ಶಿಕ್ಷಣದಲ್ಲಿ ಉನ್ನತಿಹೊಂದಿದ್ದರೂ ಧಾರ್ಮಿಕ ಶಿಕ್ಷಣದ ಕೊರತೆಯಿಂದ ಇಂದಿನ ವಿದ್ಯಾವಂತರೂ ವಂಚಿಸಲ್ಪಡುತ್ತಿದ್ದಾರೆ. ಹಾಗೂ ಕೆಲವೊಂದು ಮೌಢ್ಯಕ್ಕೆ ಇಂತಹವರು ಬಲಿಯಾಗುತ್ತಿದ್ದಾರೆ. ಚಿಕ್ಕಪುಟ್ಟ ಸಮಸ್ಯೆಗಳಿಗೂ ಜ್ಯೋತಿಷಿಗಳೆಡೆ ಹೋಗುವುದು. ಅವರು ಹೇಳಿದಂತೆಲ್ಲಾ ಕುಣಿಯುವುದು ಹಾಗೂ ಲಕ್ಷಾಂತರ ಹಣ ವ್ಯಯಿಸುವುದು ಮಾಡುತ್ತಾರೆ. ಆದರೆ ಅದರಿಂದ ಸಮಾಜಕ್ಕೂ ವೈಯುಕ್ತಿಕವಾಗಿ ಅವರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ ಏಕೆಂದರೆ ಇಂದಿನ ಜ್ಯೋತಿಷಿಗಳಲ್ಲಿ ಯಾರು ಯೋಗ್ಯರು, ಯಾರು ಆಯೋಗ್ಯರು ಎನ್ನುವುದನ್ನು ಗುರುತಿಸಿವುದೇ ಕಷ್ಟವಾಗಿದೆ. ಇದಕ್ಕೆ ಯಾವುದೇ ಮಾನದಂಡವಿಲ್ಲ ವಾಗಿದೆ. ಎಲ್ಲವೂ ವ್ಯಾಪಾರವಾಗಿದೆ ಇವರೆಲ್ಲಾ ಇಂದು ಜಾನಪದ ಕಲಾವಿದರಾಗಿದ್ದಾರೆ ಕೇವಲ ಅಭಿನಯದಿಂದ ಪ್ರಸಿದ್ಧಿ ಹಾಗೂ ಹಣ ಗಳಿಸುತ್ತಿದ್ದಾರೆ. ಶಾಸ್ತ್ರಾಧ್ಯಯನದಿಂದ ವಿಮುಖ ರಾಗುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಸುಳ್ಳಲ್ಲ ಆದರೆ ಹೇಳುವವರ ಯೋಗ್ಯತೆ ಜ್ಞಾನ ಎಷ್ಟು ಎನ್ನುವುದರಮೇಲೆ ಇದರ ಫಲ ಅಡಗಿದೆ. ಹೀಗೆ ಯಾವುದನ್ನೇ ನಂಬುವ ಮೊದಲು ನಮಗೂ ವಿಷಯದ ಪ್ರಾಥಮಿಕ ಜ್ಞಾನ ಇರಬೇಕು. ಇಲ್ಲವಾದಲ್ಲಿ ನಾವು ವಂಚಿಸಲ್ಪಡುವ ಸಂಭವವೇ ಹೆಚ್ಚು. ಧಾರ್ಮಿಕ ಶ್ರದ್ಧಾಸ್ಥಳ ಪೂಜೆ ಪುನಸ್ಕಾರಗಳಲ್ಲಿಯೂ ನಾವು ಸತ್ಯಾಸತ್ಯತೆ ಅರಿತು ಕಾರ್ಯಮಾಡಬೇಕು. ಕನಿಷ್ಟ ಧಾರ್ಮಿಕಜ್ಞಾನವಾದರೂ ತಾನುಮಾಡುವ ಕಾರ್ಯದಬಗ್ಗೆ ಕತೃವಿಗೆ ಇರಬೇಕು. ಆಗ ಮಾಡಿಸುವವರ ದೋಷವಿದ್ದರೆ ನಮಗೆ ಅರಿವಾಗುತ್ತದೆ.
ಬಹು ಭಾಷೆಗಳಲ್ಲಿನ ಪರಸ್ಪರ ಅಸಹಿಷ್ಣುತೆ : ಭಾರತದೇಶದಲ್ಲಿ ಪ್ರತೀ ಮೂವತ್ತು ಕಿಲೋ ಮೀಟರಿಗೆ ಭಾಷೆಯಲ್ಲಿ ವ್ಯತ್ಯಾಸ ಇದೆ. ಈ ವ್ಯತ್ಯಾಸ ಹೊಡೆದಾಟಕ್ಕೆ ಕಾರಣ ಆಗಬಾರದು. ಭಾಷಾವಾರು ಹೋರಾಟ, ಹೊಡೆದಾಟ ನಿಲ್ಲಬೇಕು. ಹಾಗೂ ನಮ್ಮ ಪ್ರಾಚೀನ ಭಾಷೆ ಸಂಸ್ಕೃತಕ್ಕೆ ಹೆಚ್ಚು ಮನ್ನಣೆಸಿಕ್ಕು ಪ್ರಾಥಮಿಕ ಹಂತದಿಂದ ಶಾಲೆಗಳಲ್ಲಿ ಸಂಸ್ಕೃತ ಕಲಿಸುವಂತಾಗಬೇಕು ಹಾಗೂ ಇಡೀದೇಶದ ಭಾಷೆ ಸಂಸ್ಕೃತವಾಗಬೇಕು. ಹಾಗೂ ಎಲ್ಲಾಗ್ರಾಮೀಣ ಭಾರತೀಯ ಭಾಷೆಗಳನ್ನೂ ದ್ವೇಷಿಸದೆ ಗೌರವಿಸುವ ಮನಸ್ಥಿತಿ ಹೊಂದಬೇಕು. ನಾವು ವಾಸಿಸುತ್ತಿರುವ ಸ್ಥಳದ ಭಾಷೆಯನ್ನು ಕಲಿತು ಸ್ಥಳೀಯರೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸಬೇಕು. ಆಗ ನಮ್ಮ ಬಗ್ಗೆ ಅಲ್ಲಿಯವರಿಗೆ ಗೌರವ ಮೂಡುವುದು.
ಬಹು ಸಂಸ್ಕೃತಿ : ಒಂದೊಂದು ಪ್ರಾಂತ್ಯದ ಜನ ಒಂದೊಂದು ಆಚಾರ ವಿಚಾರ ಹೊಂದಿದ್ದು; ಅದರಂತೆ ಆಚರಣೆಯನ್ನು ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಅವರವರ ಪದ್ದತಿಯನ್ನು ಉಳಿಸಿಕೊಳ್ಳುವುದರೊಂದಿಗೆ; ಕೆಲವು ಹಿಂದೂ ಸಂಸ್ಕೃತಿಯ ಸಾಮಾನ್ಯ ಆಚರಣೆಗಳ ಪ್ರಾಥಮಿಕ ಮಾಹಿತಿ ನೀಡಿ; ಅವರನ್ನು ಒಂದು ಸಾಮಾನ್ಯ ಆಚರಣೆಯಲ್ಲಿ ಬೆಸೆಯಬೇಕು. ಎಲ್ಲಾ ಭಾರತೀಯ ಸಾತ್ವಿಕ ಸಂಸ್ಕೃತಿಗಳನ್ನೂ ಉಳಿಸಿ ಬೆಳೆಸಬೇಕು. ವಿದೇಶೀ ವಿಕೃತಿಯ ಸಂಸ್ಕೃತಿಗಳನ್ನು ತಿರಸ್ಕರಿಸಬೇಕು. ಭಿನ್ನತೆಯಲ್ಲಿ ಏಕತೆಯನ್ನು ಕಾಣಬೇಕು.
ಆಹಾರ ಪದ್ದತಿ : ಆಹಾರವು ಮನುಷ್ಯನ ಬದುಕಿಗೆ ಅತಿ ಅವಶ್ಯವಾದ ವಸ್ತುವಾಗಿದೆ. ಇದರಲ್ಲಿ ಮುಖ್ಯವಾಗಿ ಸಸ್ಯಾಹಾರ, ಮಾಂಸಾಹಾರ ಎರಡು ಪದ್ದತಿಗಳಿವೆ. ಯಾರನ್ನೂ ಕೇವಲ ಮಾಂಸಾಹಾರಿಗಳೆನ್ನುವಂತಿಲ್ಲ ಏಕೆಂದರೆ ಮಾಂಸಾಹಾರಿಗಳು ಎರಡುಪದ್ದತಿಯನ್ನೂ ಅಭ್ಯಾಸ ಮಾಡಿಕೊಂಡವರಾಗಿರುತ್ತಾರೆ ಇವರನ್ನು ಮಿಶ್ರಾಹಾರಿಗಳೆನ್ನಬಹುದು. ಸಮಾಜದಲ್ಲಿ ಇವೆರಡರಲ್ಲಿ ಮಾಂಸಾಹಾರ ಸೇವಿಸುವ ಅಭ್ಯಾಸ ಮಾಡಿಕೊಂಡವರ ಸಂಖ್ಯೆ ಹೆಚ್ಚಿದೆ. ಆರೋಗ್ಯದ ದೃಷ್ಟಿಯಿಂದ ಶಾಖಾಹಾರಕ್ಕೆ ಆಯುರ್ವೇದದಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಮತ್ತು ಮನುಷ್ಯನ ದೇಹದಪ್ರಕೃತಿ ಸಸ್ಯಾಹಾರಕ್ಕೆ ಅನುಗುಣವಾಗಿ ರೂಪಿತವಾಗಿದೆ. ಆದುದರಿಂದ ಜನ ಸ್ವಇಚ್ಚೆಯಿಂದ ಶಾಖಾಹಾರಿಗಳಾಗುವ ಪ್ರಯತ್ನ ಮಾಡಬೇಕು. ತಮ್ಮ ಹೊಸಪೀಳಿಗೆಗೆ ಶಾಖಾಹಾರದ ಮಹತ್ವ ತಿಳಿಸಿಕೊಡಬೇಕು. ಇಂದು ವಿದೇಶದಲ್ಲಿ ಶಾಖಾಹಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಾಚೀನವಾಗಿಯೇ ಶಾಖಾಹಾರದ ಮಹತ್ವ ಬೋಧಿಸಿದ ಭಾರತದ ಹಿಂದುಗಳಲ್ಲಿಯೂ ಈ ಸಂಖ್ಯೆ ಹೆಚ್ಚಬೇಕು. ಶಾಖಾಹಾರ ಅಸಾಧ್ಯವಾದವರು ಮಾಂಸಾಹಾರಕ್ಕೆ ಕೆಲವು ನಿರ್ಭಂಧ ನಿಯಮಗಳನ್ನು ಸ್ವಯಂ ಹಾಕಿಕೊಂಡು ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬರಬೇಕು. ಉದಾ: ಹಬ್ಬದ ದಿನ ಗಳು, ಮಂಗಳ ಕಾರ್ಯಗಳು, ಕೆಲವು ದೇವರ ವಾರಗಳು ಮುಂತಾದ ದಿನ ಸಸ್ಯಾಹಾರವನ್ನು ಮಾತ್ರ ಸ್ವೀಕರಿಸುವ ವ್ರತ ಕೈಗೊಳ್ಳುವುದು. ಅಲ್ಲದೆ ಸಾಮನ್ಯವಾಗಿ ನಿತ್ಯ ಬಳಕೆಯ ಕೋಳಿ, ಆಡು ಹಾಗೂ ಮೀನು ಗಳನ್ನು ಹೊರತುಪಡಿಸಿ ಬೇರೆ ಪ್ರಾಣಿಗಳನ್ನು ಆಹಾರವಾಗಿ ಸ್ವೀಕರಿಸುವುದನ್ನು ವರ್ಜಿಸಿ ಅವುಗಳ ಹತ್ಯೆಯನ್ನು ನಿಲ್ಲಿಸಬೇಕು. ಹಿಂದೂ ಭಾವನೆಯನ್ನು ಗೌರವಿಸದ ರಾಕ್ಷಸಸ್ವಭಾವದ ಜನರಾದ ಗೋಹಂತಕರು ಹಾಗೂ ಗೋಭಕ್ಷಕರನ್ನು ಸಮಾಜ ಬಹಿಷ್ಕರಿಸಬೇಕು. ಅವರೆಂದೂ ಸಮಾಜದಲ್ಲಿ ಪ್ರಚಾರದ ಮಾದರೀ (ರೋಲ್ ಮಾಡಲ್) ವ್ಯಕ್ತಿಗಳಾಗಬಾರದು. ಸಮಾಜದಲ್ಲಿ ಅಂತಹ ಅಸುರರು ಮುಂದೆ ಬರದಂತೆ ನೋಡಿಕೊಳ್ಳಬೇಕು. ಆಹಾರದ ವಿಷಯದಲ್ಲಿ ಮನುಷ್ಯ ಸ್ವಯಂ ನಿಯಂತ್ರಣ ಹೊಂದದಿದ್ದಲ್ಲಿ ಪ್ರಕೃತಿಯ ಜೈವಿಕ ಅಸಮತೋಲನ ಉಂಟಾಗುವುದು ಹಾಗೂ ಇದು ವಿಶ್ವಕ್ಕೆ ಮಾರಕವಾಗಿದೆ. ಇವುಗಳನ್ನು ಕಾನೂನಿನಿಂದ ನಿಲ್ಲಿಸುವುದು ಅಸಾಧ್ಯ. ಒತ್ತಾಯ ಪೂರ್ವಕ ಹೇರುವುದು ದ್ವೇಷಕ್ಕೆ ಕಾರಣವಾಗುತ್ತದೆ. ಆದುದರಿಂದ ಮನುಷ್ಯ ತಿಳುವಳಿಕೆಯಿಂದ ಜ್ಞಾನಿ ಆಗಬೇಕು. ವಿವೇಕದಿಂದ ಸದಾಚಾರವನ್ನು ಅನುಸರಿಸಬೇಕು. ಆಗ ಸಮಾಜ ಶಾಂತಿ ಸಮೃದ್ಧಿ ಹೊಂದುತ್ತದೆ. ಇಂದು ಹಿಂದುಗಳ ಮದುವೆಗಳಲ್ಲಿಯೂ ಮಾಂಸಾಹಾರ ನೀಡುವುದು ಒಂದು ಪ್ರತಿಷ್ಠೆಯಾಗಿದೆ. ಇದೊಂದು ವಿಕೃತಿಯಾಗಿ ಬೆಳೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಇದು ಯಜಮಾನನ ಹಣದ ಮದವನ್ನು ತೋರಿಸುವುದೇ ಹೊರತು ಸಾಂಸ್ಕೃತಿಕ ಜ್ಯೇಷ್ಠತೆಯನ್ನಲ್ಲ. ಇಂತಹ ನಡವಳಿಕೆ ಕಡಿಮೆಯಾಗಬೇಕು.
ದುಶ್ಚಟಗಳು. : ಹಲವುರೀತಿಯ ದುಶ್ಚಟಗಳು ಇಂದು ಹಿಂದೂ ಸಮಾಜದ ಶಾಪವಾಗಿದೆ. ಮೊದಲು ಹಿಂದೂ ರಾಜ-ಮಹಾರಾಜರ ಕಾಲದಲ್ಲಿ ಶಿಸ್ತು ಹಾಗೂ ಧರ್ಮಮಾರ್ಗಕ್ಕೆ ಮನ್ನಣೆ ಇತ್ತು. ನಂತರದಲ್ಲಿ ಕ್ರಿಶ್ಚಿಯನ್ ಮತಾಚರಣೆಯ ಬ್ರಿಟಿಶಷರು ಈ ದೇಶದ ಸಂಸ್ಕೃತಿಯ ನಾಶದಲ್ಲಿ ಕೈಜೋಡಿಸಿದಾಗ ಪಬ್ಬು ಕ್ಲಬ್ಬು ಸಂಸ್ಕೃತಿ ಬೆಳೆಯಿತು. ವೇಶ್ಯಾವಾಟಿಕೆ ಕೇಂದ್ರಗಳೂ ಬಾರುಗಳೂ. ಹೆಚ್ಚಾದುವು ಇಂದು ಗಾಂಜಾ ಅಫೀಮು ಬೀಡಿ ಸಿಗರೇಟು ಜೂಜು ಮಟ್ಕಾ ಲಾಟರಿ ಇಸ್ಪೀಟು ಬೆಟ್ಟಿಂಗ್, ಹೆಂಡ ಸಾರಾಯಿ , ಗುಟ್ಕಾ ಮುಂತಾದ ಅನೇಕ ವಿಧದ ದುಶ್ಚಟಗಳಿಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಇದರಿಂದ ಅಂತಹವರ ವ್ಯಕ್ತಿತ್ವ ಪತನ ವಾಗುತ್ತದೆ. ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಕೌಟುಂಬಿಕ ನೆಮ್ಮದಿ ಹಾಳಾಗಿ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಹಾಗೂ ಹಿಂದೂಸಮಾಜ ದುರ್ಬಲವಾಗುತ್ತಿದೆ. ಇಂದು ನ್ಯಾಯಾಲಯಗಳಲ್ಲಿಯೂ ಸಲಿಂಗ ಕಾಮಿಗಳು ಅಕ್ರಮ ಸಂಬಂಧ ಸರಿ ಎನ್ನುವವರು ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸುವವರು ಕುಳಿತಿದ್ದಾರೆ. ಈ ಎಲ್ಲಾ ಅನಿಷ್ಟಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತಹ ಸರಕಾರ ಬರಬೇಕು. ಇಂದು ಸಮಾಜವಿರೋಧೀ ನೀಚರು ರಾಜಕೀಯದಲ್ಲಿ ಅಧಿಕಾರ ಸ್ಥಾಪಿಸಿದ್ದಾರೆ. ಇವರು ಸರಾಯಿ ಮಾರಾಟಕ್ಕೆ ಗುರಿನಿಗದಿ ಮಾಡಿ ಜನರನ್ನು ಕುಡುಕರನ್ನಾಗಿಸುತ್ತಿದ್ದಾರೆ. ಇಂತಹ ಸರಕಾರಗಳು ಅಳಿಯಬೇಕು. ದೇಶದ ಬಡತನಕ್ಕೆ ದುಶ್ಚಟಗಳೇ ಮೂಲಕಾರಣಗಳಾಗಿವೆ. ಇದರಿಂದ ನಾವು ಸ್ವಯಂ ಅರಿತು ದೂರವಿರಬೇಕು ಮತ್ತು ಜಾಗ್ರತರಾಗಿ ಸಮಾಜದಲ್ಲಿ ತಿಳುವಳಿಕೆ ಮೂಡಿಸಬೇಕು.
ಕ್ಷೀಣಿಸುತ್ತಿರುವ ಹಿಂದು ಜನಸಂಖ್ಯೆ: ಜನಸಂಖ್ಯಾ ನಿಯಂತ್ರಣಕ್ಕೆ ಕಾಂಗ್ರೇಸ್ ಸರಕಾರ ಪ್ರಚಾರ ಕೊಟ್ಟು ಇದರಿಂದ ಹಿಂದುಗಳು ಕುಟುಂಬ ನಿಯಂತ್ರಣ ಪದ್ದತಿಯನ್ನು ಅಳವಡಿಸಿಕೊಂಡಿದ್ದರಿಂದ ಹಿಂದುಗಳ ಜನ ಸಂಖ್ಯೆ ಇಂದು ಕುಸಿಯುತ್ತಿದೆ. ಇದು ಹಿಂದೂ ಧರ್ಮಕ್ಕೆ ಒದಗಿದ ಭೀಕರ ಅಪಾಯವಾಗಿದೆ. ಚಿಕ್ಕಕುಟುಂಬ ಕಲ್ಪನೆಯಿಂದ ಮುಂದೊಂದು ದಿನ ನಿಮ್ಮ ತಲೆಮಾರೆ ವಂಶದ ಕೊನೆಯಕೊಂಡಿಯಾಗಬಹುದು. ಯಾವುದೇ ಅಪಘಾತ, ರೋಗ, ಅಪಹರಣ ಅಥವಾ ಇನ್ನವುದೇ ಕಾರಣದಿಂದ ಇರುವ ಒಂದು ಮಗು ಸಾವನ್ನಪ್ಪಿದರೆ ಇಲ್ಲವೇ ಲೌಜಿಹಾದಿಗೆ ಬಲಿಯಾದರೆ. ನಿಮ್ಮ ಬದುಕು ಮುಗಿದಂತೆ ನಿಮ್ಮ ಆಸ್ತಿಪಾಸ್ತಿ ಅನಾಥವಾಗುತ್ತದೆ. ಸೋದರ ಸಂಬಂಧಿ ಇಲ್ಲದೆ ಬೆಳೆದವರಿಗೆ ಕಷ್ಟಸುಖ ಹಂಚಿಕೊಳ್ಳುವ ಅವಕಾಶವಿಲ್ಲದೆ ಮಾನಸಿಕ ಖಿನ್ನತೆ ಕಾಡಬಹುದು. ಆದುದರಿಂದ ಕುಟುಂಬಕ್ಕಾಗಿ ಎರಡುಮಕ್ಕಳು ಹಾಗೂ ದೇಶ, ಸಮಾಜ, ಧರ್ಮ ಇದಕ್ಕಾಗಿ ಕ್ಕಾಗಿ ಒಂದು ಮಗುವನ್ನು ಸಮಾಜಕ್ಕೆ ನೀಡುವುದು ಪ್ರತಿ ಹಿಂದುದಂಪತಿಯ ಜವಾಬ್ದಾರಿಯಾಗಿದೆ. ಮುಸಲ್ಮಾನರು ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಹೆಚ್ಚಿದಲ್ಲೆಲ್ಲಾ ಹಿಂದೂಗಳಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಕಾಂಗ್ರೇಸ್ ಇವರನ್ನು ಓಟಿಗಾಗಿ ಬೆಂಬಲಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗೇ ಬೆಲೆ. ದುಷ್ಟರನ್ನು ಶಕ್ತಿಯಿಂದಲೇ ಎದುರಿಸಬೇಕಿದೆ. ಇಡೀ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರಿಗೂ ಅನ್ವಯವಾಗುವಂತ ಕಡ್ಡಾಯ ಕುಟುಂಬ ನಿಯಂತ್ರಣ ಕಾನೂನು ಜಾರಿಯಾಗಬೇಕು. ದೇಶದ ಸಮಸ್ತ ಪ್ರಜೆಗಳಿಗೂ ಏಕರೂಪ ನಾಗರಿಕ ಸಂಹಿತೆ, ಒಂದೇ ಕಾನೂನು ಇರುವಂತೆ ಆಗಬೇಕು ಹಾಗೂ ಹಿಂದೂಗಳು ತಮ್ಮ ಸಂಖ್ಯೆ ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಮತಾಂತರ ಗೊಂಡವರನ್ನು ಪುನಃ ಹಿಂದೂ ಧರ್ಮಕ್ಕೆ ಮರಳಿ ಕರೆತರಬೇಕು.
ರಾಜಕೀಯ ಕಾರಣಗಳು: ಎಂಟುನೂರುವರುಷದ ದುಷ್ಟ ಮುಸಲ್ಮಾನ ಭಯೋತ್ಪಾದಕರ ದಾಳಿ ಹಾಗೂ ಅವರ ಕ್ರೂರ ಆಡಳಿತ ಹಾಗೂ ಇನ್ನೂರು ವರುಷ ಬ್ರಿಟಿಷರ ಆಕ್ರಮಣ ಹಾಗೂ ಕ್ರಿಶ್ಚಿಯನ್ನರ ಆಡಳಿತ ಹಾಗೂ ಎಪ್ಪತ್ತು ವರುಷಗಳ ಹಿಂದೂ ವಿರೋಧಿ ಕಾಂಗ್ರೇಸಿನ ಜಾತ್ಯಾತೀತ ಆಡಳಿತದಲ್ಲಿ ಭಾರತೀಯರ ಭವ್ಯ ಸಂಸ್ಕೃತಿ ಹಾಗೂ ಇತಿಹಾಸವನ್ನು ಭಾಗಶಃ ನಾಶಮಾಡಲಾಯಿತು. ಇಲ್ಲವೇ ಅದೋಮುಖವಾಗಿ ಅದುಮಲಾಯಿತು. ಬ್ರಿಟಿಷರು ಭಾರತವನ್ನು ಒಡೆದು ಹಲವು ಸ್ವತಂತ್ರ ದೇಶಗಳನ್ನು ಮಾಡಿದರು. ಅಫಘಾನಿಸ್ಥಾನ ಪಾಕಿಸ್ಥಾನ ಬಾಂಗ್ಲಾ ಮುಂತಾದುವು ಮುಸ್ಲಿಂ ದೇಶಗಳಾಗಿ ಅಲ್ಲಿನ ಹಿಂದೂಗಳಿಗೆ ನರಕವಾಯಿತು. ಸ್ವಾತಂತ್ರ್ಯನಂತರದಲ್ಲಿ ಪಾಶ್ಚಾತ್ಯ ಮನಸ್ಥಿತಿಯ ನೆಹರೂ ಆಡಳಿತದ ಕಾಂಗ್ರೇಸ್ ಪಕ್ಷ. ಅಲ್ಪಸಂಖ್ಯಾತರನ್ನು ಓಲೈಸುವುದರ ಜೊತೆಗೆ ಹಿಂದುಗಳನ್ನು ದ್ವಿತೀಯದರ್ಜೆಯ ಪ್ರಜೆಗಳಂತೆ ನಡೆಸಿಕೊಂಡರು. ಹಿಂದೂಸ್ಥಾನದಲ್ಲಿಯೂ ಹಿಂದೂಗಳಿಗೆ ನೆಮ್ಮದಿ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಹಿಂದೂ ರಾಷ್ಟ್ರವಾಗಬೇಕಿದ್ದ ಭಾರತ ಅವಿವೇಕಿ ಕಾಂಗ್ರೇಸಿಗರಿಂದ ಹಿಂದೂ ವಿರೋಧಿ ಜಾತ್ಯಾತೀತ ರಾಷ್ಟ್ರವಾಯಿತು. ಕಾಂಗ್ರೇಸ್ ಸರಕಾರದ ಪ್ರೋತ್ಸಾಹ ದಿಂದ ಕ್ರಿಶ್ಚಿಯನ್ನರು ರಾಜಾರೋಷವಾಗಿ ಮತಾಂತರ ಮಾಡತೊಡಗಿದರೆ, ಮುಸಲ್ಮಾನರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಅಲ್ಲೆಲ್ಲಾ ದಂಗೆ ಎಬ್ಬಿಸಿ ಹಿಂದೂಗಳಿಗೆ ನೆಲೆ ಇಲ್ಲದಂತೆ ಮಾಡತೊಡಗಿದರು. ಕಾಶ್ಮೀರದಲ್ಲಿ ಲಕ್ಷಾಂತರ ಹಿಂದುಗಳ್ನು ಕೊಲೆಮಾಡಿ ಅಲ್ಲಿಂದ ಓಡಿಸಿದರು. ಹಿಂದುಗಳು ಎಲ್ಲೋ ಏನೋ ಆಯಿತೆಂಬಂತೆ ಉದಾಸೀನರಾದರು. ಕಾಶ್ಮೀರಿ ಪಂಡಿತರ ಕಷ್ಟಗಳಿಗೆ ಕಾಂಗ್ರೇಸ್ ಸರಕಾರ ಕುರುಡಾಗಿತ್ತು. ಜಾತಿ ಆಧಾರದಲ್ಲಿ ದೇಶವನ್ನು ಒಡೆದರು ಹಾಗೂ ಹಿಂದೂಗಳು ಮೇಲ್ಜಾತಿ ಕೆಳಜಾತಿ ಎಂದು ಜಗಳ ವಾಡುವಂತೆ ಮಾಡಿದರು. ಗೋಹತ್ಯೆಯನ್ನು ಜೀವಂತ ವಿರಿಸಿ ಹಿಂದುಗಳು ಮುಸಲ್ಮಾನರು ನಿರಂತರ ದ್ವೇಷಿಸುವಂತೆ ಮಾಡಿದರು. ಈ ಮೂಲಕ ಅಹಿಂದ ಮತಬ್ಯಾಂಕನ್ನು ಸೃಷ್ಟಿಸಿಕೊಂಡು ಪೋಷಿಸಿದರು. ಮತಾಂತರವನ್ನು ಪ್ರೋತ್ಸಾಹಿಸಿದರು ಹಾಗೂ ದೂರದರ್ಶನ ಹಾಗೂ ಪತ್ರಿಕಾ ಮಾಧ್ಯಮಗಳನ್ನು ಹಣ ನೀಡಿ ಸಾಕಿಕೊಂಡು ತಮ್ಮ ಹತೋಟಿಯಲ್ಲಿಟ್ಟುಕೊಂಡು ಕಣ್ಣಿದ್ದೂ ಕುರುಡರಂತೆ ವರ್ತಿಸಿದರು. ಭಾರತೀಯ ಸಂಸ್ಕೃತಿಯ ನೈತಿಕ ಶಿಕ್ಷಣವನ್ನು ಕೇಸರೀಕರಣ ಎಂದು ಕಡೆಗಣಿಸಿ ಪಾಶ್ಚಾತ್ಯಮಿಷನರಿಗಳ ಅನಿಷ್ಟ ಅಸಂಸ್ಕೃತ ಶಿಕ್ಷಣಕ್ಕೆ ಮಹತ್ವಕೊಟ್ಟು ಪಬ್ಬು, ಕ್ಲಬ್ಬು, ಸಂಸ್ಕೃತಿ ಬೆಳೆಸಿದರು. ಭಾರತೀಯ ಯುವಜನಾಂಗ ಹಾದಿತಪ್ಪುವಂತೆ ಮಾಡಿದರು. ಭಾರತೀಯ ಮೌಲ್ಯಗಳನ್ನು ಕೊಂದರು. ಇವುಗಳನ್ನು ಪುನಸ್ಥಾಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜಾತ್ಯಾತೀತ ಪಕ್ಷಗಳು ಹಿಂದೂ ವಿರೋಧಿಗಳಾದರೆ, ಹಿಂದೂಗಳ ಹಿತ ಕಾಯುವ ರಾಜಕೀಯ ಪಕ್ಷ ಇಂದು ಇಲ್ಲವಾಗಿದೆ. ಅನಿವಾರ್ಯವಾಗಿ ಹಿಂದುಗಳು ಈ ದೇಶದ ಸಂಸ್ಕೃತಿಯನ್ನು ರಕ್ಷಿಸುವಂತಹ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸಬೇಕಿದೆ. ಬಿಜೆಪಿ ಹಿಂದುಗಳಿಂದಲೇ ಬೆಳೆದುಬಂದರೂ ಹಿಂದುಗಳ ಸ್ವಾಭಿಮಾನವನ್ನು ಎಲ್ಲೆಡೆ ಗೌರವಿಸುತ್ತಿಲ್ಲ. ಇದು ತಟಸ್ಥ ನಿಲುವನ್ನು ಹೊಂದಿದ್ದು. ಮಧ್ಯಮ ಮನಸ್ಥಿತಿ ಹೊಂದಿದೆ. ಶೋಷಣೆ ಮಾಡುವವರಿಗಿಂತ ತಟಸ್ತರು ವಾಸಿ ಆದರೆ ಹಿಂದುಗಳಿಗಾಗಿ ಹಿಂದುಗಳಿಂದಲೇ ಉಂಟಾದ ಹಿಂದೂ ರಾಜಕೀಯ ಪಕ್ಷ ಒಂದು ಹಿಂದೂಸ್ಥಾನಕ್ಕೆ ಬೇಕಿದೆ. ಇಲ್ಲವೇ ಬಿಜೆಪಿ ಆರೀತಿ ಬದಲಾಗಬೇಕಿದೆ. ಕಟ್ಟರ್ ಹಿಂದೂ ವಾದಿಗಳನ್ನು ಬಿಜೆಪಿ ಎಂದೂ ರಾಜಕೀಯದಿಂದ ದೂರವಿಡಲು ಪ್ರಯತ್ನಿಸುವುದು ಸಾಮಾನ್ಯವಾಗಿದೆ. ಆರಂಭದಲ್ಲಿ ಹಿಂದೂ ವಾದಿಗಳಾಗಿರುವವರೂ ಗೆದ್ದಮೇಲೆ ಬಿಜೆಪಿಯಲ್ಲಿ ಜಾತ್ಯಾತೀತ ಮುಖವಾಡಹಾಕಿಕೊಳ್ಳುತ್ತಾರೆ. ನೈಜ ಹಿಂದುತ್ವ ವಾದಿಗಳು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಮೇಲೆಬರಬೇಕಿದೆ. ಹಣವಂತರು ರಿಯಲ್ ಎಸ್ಟೇಟ್ ಕುಳಗಳು, ಗಣಿದಣಿಗಳು, ರೌಡಿಗಳು, ಉದ್ದಿಮೆಪತಿಗಳು ಇವರನ್ನು ರಾಜಕೀಯದಿಂದ ಹೊರಹಾಕಿ ನಿಸ್ವಾರ್ಥ ದೇಶಪ್ರೇಮೀ ಹಿಂದೂ ರಾಷ್ಟ್ರವಾದಿಗಳನ್ನು ಬೆಂಬಲಿಸಿ ಆರಿಸಬೇಕಿದೆ. ಇದಕ್ಕಾಗಿ ಧರ್ಮಶಿಕ್ಷಣ, ಧರ್ಮಜಾಗ್ರತಿ, ಜನಜಾಗ್ರತಿ ಮಾಡಬೇಕಿದೆ. ರಾಜಕೀಯವನ್ನು ಭ್ರಷ್ಟರಿಂದ ಹಾಗೂ ಹಿಂದೂ ವಿರೋಧಿಗಳಿಂದ ಸ್ವಚ್ಚಮಾಡಬೇಕಿದೆ.
ಸಂಘಟನಾತ್ಮಕ ಕಾರಣಗಳು: ಹಿಂದುಗಳಲ್ಲಿ ಸಂಘಟೆಯ ಕೊರತೆ ಇದೆ ಸಾಕಷ್ಟು ಸಂಘಟನೆಗಳಿದ್ದರೂ ಸಮನ್ವಯತೆ ಇಲ್ಲ. ಒಂದೊಂದು ಸಂಘಟನೆಯ ಗುರಿ ಒಂದೊಂದಿದೆ ಇವರಲ್ಲಿ ಪರಸ್ಪರ ಸಾಮರಸ್ಯ ಇಲ್ಲ. ಸಾಕಷ್ಟು ಮಠಗಳಿದ್ದರೂ ಏಕಮತ ಇಲ್ಲ. ಮತದಿಂದ ಮತಕ್ಕೆ ಭಿನ್ನಾಭಿಪ್ರಾಯವಿದ್ದು ಒಬ್ಬರು ಇನ್ನೊಬ್ಬರೊಂದಿಗೆ ಕೂಡಿ ಹೆಜ್ಜೆ ಹಾಕುವುದಿಲ್ಲ. ಜನರಗೊಂದಲಗಳಿಗೆ ಮತಾಧಾರಿತ ಉತ್ತರ ಕೊಡುತ್ತಾರೆಯೇ ಹೊರತು ಧರ್ಮರಕ್ಷಣೆಗೆ ಅಗತ್ಯವಿರುವ ಸಾರ್ವತ್ರಿಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವುದಿಲ್ಲ. ಹಲವಾರು ದೇವಾಲಯಗಳಿದ್ದು ಸಾಕಷ್ಟು ಹಣ ಸಂಗ್ರಹವಾದರೂ ಹಿಂದೂದ್ರೋಹಿ ಸರಕಾರಗಳು ಇವುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಅನಿಷ್ಟ ವಿದೇಶೀಮತಗಳನ್ನು ಬೆಳೆಸಲು ಹಂಚುತ್ತಿವೆ. ಹಿಂದುಗಳಿಗಾಗುತ್ತಿರುವ ಇಂತಹ ಅನ್ಯಾಯವನ್ನು ಸಂಘಟಿತರಾಗಿ ಕೇಳುವವರಿಲ್ಲವಾಗಿದೆ. ರಾಜಕೀಯಪಕ್ಷಗಳು ಜರನ್ನು ಜಾತಿಗಳಲ್ಲಿ ಒಡೆದಿದೆ. ಜಾತಿ ಸಂಘಗಳು ಅತಿಯಾಗಿವೆ ಜಾತಿಪ್ರದರ್ಶನ ಮಾಮೂಲಿಯಾಗಿದೆ. ಕೆಲವರಿಗೆ ಜಾತಿ ಹೊಟ್ಟೆಪಾಡಿಗೆ ಅನಿವಾರ್ಯವಾದರೆ ಕೆಲವರಿಗೆ ಜಾತಿ ಪ್ರತಿಷ್ಠೆಯಾಗಿದೆ. ಕೆಲವರಿಗೆ ಜಾತಿ ಬಲಪ್ರದರ್ಶನದ ಸೊತ್ತಾಗಿದೆ. ಕೆಲವರಿಗೆ ಸರಕಾರೀ ಭಿಕ್ಷಾಪಾತ್ರೆಯಾಗಿದೆ. ಇದೆಲ್ಲಾ ಸಾಮಾಜಿಕ ಅನಿಷ್ಟಗಳೇ ಆಗಿದೆ. ಜಾತಿ ತಾರತಮ್ಯ ಹೋಗಬೇಕಿದೆ. ಸಂಸ್ಕಾರ ಸಜ್ಜನಿಕೆ ಇದ್ದವರಿಗೆ ಗೌರವಸಿಗಬೇಕಿದೆ. ಅಸ್ಪೃಶ್ಯತೆ ಅಳಿಯಬೇಕಿದೆ. ಎಲ್ಲರಿಗೂ ವಿದ್ಯಾಭ್ಯಾಸ ಸಿಗಬೇಕಿದೆ. ಹಿಂದುಗಳು ಜ್ಞಾನವಂತರೂ, ವಿವೇಕಿಗಳೂ ಆಗಬೇಕಿದೆ. ಇದಕ್ಕಾಗಿ ಎಲ್ಲರೂ ಭಿನ್ನತೆ ಮರೆತು ಒಟ್ಟಿಗೆ ಹೆಜ್ಜೆ ಹಾಕಬೇಕಿದೆ. ಜಾತಿ ಸಂಪ್ರದಾಯ ಮನೆಯಲ್ಲಿ ಆಚಣೆಯಲ್ಲಿದ್ದರೂ ಅದು ಪ್ರದರ್ಶನದ ಅಥವಾ ಪ್ರತಿಷ್ಠೆಯ ಸ್ವತ್ತಾಗಬಾರದು. ಸಾರ್ವಜನಿಕ ಜೀವನದಲ್ಲಿ ಜಾತಿಯನ್ನು ಪ್ರದರ್ಶಿಸಬಾರದು. ಗುಣಕ್ಕೆ ಮನ್ನಣೆ ಕೊಡುವ ಕಾಲ ಬರಬೇಕು. ಹಾಗೂ ಈ ದಿಸೆಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸಬೇಕಿದೆ. ಯಾವುದೇ ಬದಲಾವಣೆ ರಾತ್ರಿಬೆಳಗಾಗುವುದರಲ್ಲಿ ಆಗುವುದಿಲ್ಲ ಆದರೆ ಆದಿಸೆಯಲ್ಲಿ ಪ್ರಯತ್ನ ಮಾಡಿ ಸಮಾಜಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.
- ಸಾಮಾಜಿಕ ಸಮಾನತೆ ಅಥವಾ ಸಮಾಜ ಸುಧಾರಣೆ ಎಂದರೆ ಏನು?
ಸಾಮಾಜಿಕ ಸಮಾನತೆ ಎಂದರೆ ಹಿಂದುಳಿದವರಿಗೆ ವಿದ್ಯೆ ಉದ್ಯೋಗ ಸಂಸ್ಕಾರ ಸಂಸ್ಕೃತಿಯಬಗ್ಗೆ ಅರಿವು ಮೂಡಿಸಿ ಅವರನ್ನು ದುಶ್ಚಟಗಳಿಂದ ದೂರವಿರಿಸಿ ಮೇಲ್ಮಟ್ಟಕ್ಕೆ ತರುವುದಾಗಿದೆ. ಹೀಗೆ ಸಮಾಜದಲ್ಲಿ ಹಿಂದುಳಿದವರಿಗೆ ಮನ್ನಣೆ ಬರುವಂತೆ ಮಾಡುವುದೇ ಸಮಾಜ ಸುಧಾರಣೆಯಾಗಿದೆ. ಆದರೆ ಇಂದಿನ ಅನಿಷ್ಟ ಜಾತ್ಯಾತೀತ ಸರಕಾರಗಳು ಇದನ್ನು ಬಿಟ್ಟು ಮೇಲಿದ್ದವರನ್ನು ತುಳಿದು ಕೆಳಮಟ್ಟಕ್ಕೆ ತಂದು ಸಮಾನತೆ ಸಾಧಿಸುವ ಹಾದಿಯಲ್ಲಿದ್ದಂತಿದೆ. ಹೆಂಡ ಜೂಜು ತಂಬಾಕು ಉತ್ಪನ್ನ ಇವನ್ನೆಲ್ಲಾ ಬೇಕಾಬಿಟ್ಟಿ ಸಿಗುವಂತೆ ಲಭ್ಯವಿಟ್ಟು ನೈತಿಕ ಸಂಸ್ಕಾರಕೊಡುವ ಶಿಕ್ಷಣವನ್ನು ಕೇಸರೀಕರಣ ಎಂದು ದೂರ ಇಟ್ಟು ಹೊಸತಲೆಮಾರನ್ನು ಅಪಾಯಕ್ಕೆ ದೂಡುತ್ತಿದ್ದಾರೆ. ಧರ್ಮಗುರುಗಳು ಭಕ್ತಿಯ ವ್ಯಾಪಾರಕ್ಕೆ ಇಳಿದು ಮೌಢ್ಯವನ್ನು ಮಾರುತ್ತಿದ್ದಾರೆ. ಪರಮತಿಯರು ಅಂಜಿಕೆ ಇಲ್ಲದೆ ಮತಾಂತರ, ಭಯೋತ್ಪಾದನೆ ಮಾಡುತ್ತಿದ್ದಾರೆ. ಇದರಿಂದ ಜನರನ್ನು ಜಾಗ್ರತ ಗೊಳಿಸಬೇಕಿದೆ. ಇದಕ್ಕೆ ಸರಿಯಾದ ಧರ್ಮಶಿಕ್ಷಣದ ಅಗತ್ಯ ಇದೆ. ನಮ್ಮ ಪ್ರಾಚೀನ ಸಂಸ್ಕೃತಿ ದೇಶದ ಹಿರಿಮೆಯನ್ನು ಪ್ರತಿಯೊಂದು ಮನೆಗೂ ಮುಟ್ಟಿಸುವ ಕೆಲಸ ವಾಗಬೇಕಿದೆ.
- ಸಂಕುಚಿತ ಮನೋಭಾವದ ಜಾತಿಪದ್ದತಿ ಹಾಗೂ ಅಸ್ಪೃಶ್ಯತೆ.
ಪ್ರಾಚೀನ ಭಾರತದಲ್ಲಿ ಜಾತಿ ಹಾಗೂ ಅಸ್ಪೃಷ್ಯತೆ ಇರಲಿಲ್ಲ ವರ್ಣ ವಿಂಗಡಣೆ ಇತ್ತು ವರ್ಣ ಎಂದರೆ ಮಾಡುವ ಕರ್ಮಾನುಸಾರ ವರ್ಗವಿಂಗಡನೆ ಇದು ಜಾತಿಯಾಗಿರಲಿಲ್ಲ. ಶ್ರಮಜೀವಿಗಳು ವಿದ್ಯೆಯಿಂದ ದೂರ ಇದ್ದರು. ಬ್ರಾಹ್ಮಣ ಕ್ಷತ್ರಿಯ ವೈಷ್ಯ ಮೂರೂ ವರ್ಗದವರು ಗುರುಕುಲದಲ್ಲಿ ಒಟ್ಟಾಗಿ ವಿದ್ಯಾರ್ಜನೆ ಮಾಡಿ ಅವರವರ ವೃತ್ತಿಯನ್ನು ಮುಂದುವರೆಸುತ್ತಿದ್ದರು. ಬಯಸಿದ್ದಲ್ಲಿ ಶ್ರಮಜೀವಿಗಳಿಗೂ ವಿದ್ಯೆ ಕಲಿಯುವ ಅವಕಾಶ ಇತ್ತು ಆದರೆ ಅಂತಹವರು ಅತಿವಿರಳವಾಗಿದ್ದರು. ಅವರಿಗೆ ತಮ್ಮ ಕೃಷಿಕಾರ್ಯಕ್ಕೆ ಹೆಚ್ಚುಜನರ ಅವಶ್ಯಕತೆ ಇತ್ತು ಹಾಗೂ ಬಿಡುವು ಸಿಗುತ್ತಿರಲಿಲ್ಲ ಅಲ್ಲದೆ ಗುರುಕುಲದ ಕಟ್ಟುನಿಟ್ಟಿನ ನಿಯಮಗಳು ಅವರಿಗೆ ಅಷ್ಟಾಗಿ ಒಗ್ಗಿಬರುತ್ತಿರಲಿಲ್ಲ ಮತ್ತು ರಾಜರು ಧರ್ಮದಿಂದ ನ್ಯಾಯದಿಂದ ರಾಜ್ಯ ಆಳುತ್ತಿದ್ದುದರಿಂದ ಶ್ರಮಿಕರಿಗೆ ತಮ್ಮ ಹೊಲದಲ್ಲಿ ದುಡಿಯುವುದಲ್ಲದೆ ಸಮಾಜದಲ್ಲಿ ಮೋಸದ ಭಯವಿರಲಿಲ್ಲ. ಎಲ್ಲರೂ ಸತ್ಯ ಧರ್ಮದಿಂದ ಮರ್ಯಾದೆಯಿಂದ ಬದುಕುಸಾಗಿಸುತ್ತಿದ್ದರು. ಅಸ್ಪೃಷ್ಯತೆ ಅನ್ಯಾಯ ಇರಲಿಲ್ಲ ಎಲ್ಲರಲ್ಲಿಯೂ ಪರಸ್ಪರ ಗೌರವ ಇತ್ತು. ಗುರುಕುಲದಲ್ಲಿ ಋಷಿಗಳ ಆಶ್ರಮದಲ್ಲಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮೂವರ ಮಕ್ಕಳೂ ಒಟ್ಟಾಗಿ ಒಂದೇ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರಮ ಇತ್ತು ರಾಜ ಶ್ರೀಮಂತ ಬಡವ ಎನ್ನುವ ಬೇಧ ಇರಲಿಲ್ಲ. ರಾಜರು ಗುರುಕುಲಕ್ಕೆಬರುವಾಗ ಶಸ್ತ್ರವನ್ನು ಅವರಣದ ಹೊರಗಿಟ್ಟು ಒಳಬರಬೇಕಿತ್ತು. ರಾಜನೇ ಗುರುಗಳಿಗೆ ವಂದಿಸುತ್ತಿದ್ದನು. ಯೋಗ್ಯ ಪ್ರಜೆಗಳನ್ನು ಸಮಾಜಕ್ಕೆ ನೀಡುವ ಜವಾಬ್ದಾರಿ ಗುರುಗಳದ್ದಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸಮಾನರಾಗಿದ್ದರು ದ್ರೋಣ ದೃಪದರ ಕಥೆಯಲ್ಲಿ ನಾವಿದನ್ನು ನೋಡುತ್ತೇವೆ. ಗುರುಸೇವೆ ಮಾಡಿ ಭಿಕ್ಷಾಟನೆ ಮಾಡಿ ವಿದ್ಯೆಕಲಿಯಬೇಕಿತ್ತು. ವರ್ಣವು ಮಾಡುವ ಕರ್ಮ ದಿಂದ ನಿರ್ಧಾರವಾಗುತ್ತಿತ್ತು ಯಾವ ವರ್ಣವೂ ಕೀಳಾಗಿರಲಿಲ್ಲ ಹಾಗೂ ಅಸ್ಪೃಶ್ಯವಾಗಿರಲಿಲ್ಲ.
ಜೈನ ಹಾಗೂ ಬೌದ್ಧ ಮತಪ್ರಭಾವದಿಂದ ಯಾವಾಗ ಸನಾತನ ವೇದ ಸಂಸ್ಕೃತಿ ತಿರಸ್ಕರಿಸಲ್ಪಟ್ಟಿತೋ ಆಗ ಸಮಾಜ ವಿಭಜನೆ ಆಯಿತು ಅಹಿಂಸೆಯ ವಾದದಿಂದ ಮಾಂಸಾಹಾರ ನಿಶೇಧಿಸಲ್ಪಟ್ಟಿತು. ಆ ಸಮಯದಲ್ಲಿ ವಿದ್ವಜ್ಜನರು ಸ್ವಾಭಾವಿಕವಾಗಿ ಶಾಖಾಹಾರಿಗಳಾಗಿದ್ದರು. ಆದರೆ ಬಹುಸಂಖ್ಯಾತ ಶ್ರಮಿಕರಿಗೆ ಅದು ಸಾಧ್ಯವಾಗಲಿಲ್ಲ ಅವರು ಆಹಾರಪದ್ದತಿಯನ್ನು ಬದಲಿಸಿಕೊಳ್ಳಲಿಲ್ಲ ಹೀಗೆ ಮಾಂಸಾಹಾರವನ್ನು ಮುಂದುವರಿಸಿದವರನ್ನು ವಿದ್ವಜ್ಜನರು ದೂರ ಇಟ್ಟರು ಮುಂದೆ ಇದೇ ಅಸ್ಪೃಷ್ಯತೆಯ ಮಟ್ಟಿಗೆ ಬೆಳೆಯಿತು. ಮೊದಲು ಶ್ರಮಿಕರೆಲ್ಲರೂ ಒಂದೇ ವರ್ಣವನ್ನು ಪ್ರತಿನಿಧಿಸುತ್ತದ್ದರು ನಂತರದಲ್ಲಿ ಒಂದೊಂದು ಕೆಲಸಮಾಡುವವರೂ ಒಂದೊಂದು ಜಾತಿಯಲ್ಲಿ ಗುರುತಿಸಲ್ಪಟ್ಟರು ಹೀಗೆ ಹುಟ್ಟಿಕೊಂಡ ನೂರಾರು ಜಾತಿ ಅವರ ಮಕ್ಕಳಿಗೆ ವಂಶಪಾರಂಪರ್ಯಾವಾಗಿ ಮುಂದುವರಿಯಿತು. ಜಾತಿ ಹುಟ್ಟಿನಿಂದಲೇ ನಿರ್ಧಾರವಾಗುವ ಪ್ರಕ್ರಿಯೆ ವೃತ್ತಿಯಿಂದಲ್ಲ. ಪರಕಿಯರ ಆಕ್ರಮಣ ಹಾಗೂ ಆಡಳಿತದ ಕಾಲದಲ್ಲಿ ಅಸ್ಪೃಶ್ಯತೆ ಹಾಗೂ ಜಾತಿಪದ್ದತಿ ಹೆಚ್ಚಾಗಿ ಬೆಳೆಯಿತು. ಕ್ರಿಶ್ಚಿಯನ್ನರಾದ ಬ್ರಿಟಿಷರು ಇದನ್ನು ಇನ್ನಷ್ಟು ಹಿಗ್ಗಿಸಿ ಪರಸ್ಪರ ದ್ವೇಷಬಿತ್ತಿ ತಾವು ರಾಜಕೀಯ ಲಾಭಮಾಡಿಕೊಂಡರು. ಇದರಿಂದಾಗಿಯೇ ಇಂದು ಮತಾಂತರಗಳು ನಡೆಯುತ್ತಿವೆ. ಜಾತಿಪದ್ದತಿ ಬೆಳೆದಂತೆ ವರ್ಣ ಅರ್ಥ ಕಳೆದುಕೊಂಡಿತು. ಎಲ್ಲಜಾತಿಯಲ್ಲಿಯೂ ಎಲ್ಲಾಕೆಲಸಮಾಡುವವರು ಇದ್ದು ಏನುಕೆಲಸಮಾಡಿದರೂ ಹುಟ್ಟಿದ ಜಾತಿಯೇ ಅವನಿಗೆ ಶಾಶ್ವತವಾಗಿ ಅಂಟಿಕೊಳ್ಳುವುದು ಜಾತಿಯ ವಿಶೇಷತೆ. ಇಂದು ವರ್ಣ ಅರ್ಥಕಳೆದುಕೊಂಡು ಅನರ್ಥವಾಗಿದೆ ಸಮಾಜ ಜಾತಿಯಿಂದ ಕ್ಷೋಭೆಗೊಳಗಾಗಿದೆ. ಸಂಕುಚಿತ ಮನೋಭಾವದ ಜನ ಇಂದು ಜಾತಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ ಹಾಗೂ ಜಾತಿಯ ಹೆಸರಿನಲ್ಲಿ ಲಾಭಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಬಲಿಷ್ಟರಾದವರು ಜಾತಿಸಂಘಗಳನ್ನು ಕಟ್ಟಿಕೊಂಡು ತಮ್ಮ ಬುದ್ದಿಯನ್ನು ಕಾರ್ಯವ್ಯಾಪ್ತಿಯನ್ನು ಜಾತಿಗೆ ಸೀಮಿತಗೊಳಿಸಿಕೊಂಡು ಧರ್ಮವನ್ನು ಶಿಥಿಲವಾಗಿಸುತ್ತಿದ್ದಾರೆ. ದುರ್ಬಲರಾದವರು ಬಲಿಷ್ಟರ ಸಂಕುಚಿತತೆಯಿಂದ ಮತಾಂತರ ವಾಗುತ್ತಿದ್ದಾರೆ. ಜಾತ್ಯಾತೀತ ಎಂದುಕೊಳ್ಳುವ ರಾಜಕೀಯ ಪಕ್ಷಗಳು ಜಾತಿಯನ್ನು ಎತ್ತಿಕಟ್ಟಿ ಓಟಿಗಾಗಿ ಹೊಸ ಹೊಸ ಜಾತಿ ಪಂಗಡ ಇವುಗಳಿಗೆ ವಿಶೇಷ ರಿಯಾಯಿತಿ ನೀಡುತ್ತಾ ಈ ಅನಿಷ್ಟವನ್ನು ಬೆಳೆಸಿ ಪೋಷಿಸುತ್ತಿವೆ. ಕಾಂಗ್ರೇಸ್ ಸಮಾಜವನ್ನು ಒಡೆಯುವುದರಲ್ಲಿ ಮುಂಚೂಣಿಯಲ್ಲಿದೆ ಇತ್ತೀಚಿನ ವೀರಶೈವ ಲಿಂಗಾಯತ ಗಲಾಟೆ ಕಾಂಗ್ರೇಸಿನ ವಿಭಜನ ಸಿದ್ಧಾಂತಕ್ಕೆ ನೂತನ ಉದಾಹರಣೆಯಾಗಿದೆ. ಮೀಸಲಾತಿಯು ಆತ್ಮಾಭಿಮಾನದ ಬದುಕನ್ನು ದುರ್ಬಲರಿಂದ ಕಸಿದುಕೊಳ್ಳುತ್ತಿದೆ. ದಲಿತ ಮೀಸಲಾತಿಯ ಲಾಭವು ನಿಜವಾದ ದಲಿತರಿಗೆ ಸಿಗದೆ ಶ್ರೀಮಂತ ದಲಿತರ ಸ್ವತ್ತಾಗಿದೆ. ಆದುದರಿಂದ ಧರ್ಮರಕ್ಷಣೆಗೆ ಸಮಾಜದಲ್ಲಿ ಜಾತಿಪ್ರದರ್ಶನ ನಿಲ್ಲಬೇಕು. ಬಡವರಿಗೆ ರಿಯಾಯಿತಿ ಸಿಗಬೇಕು. ಆರ್ಥಿಕ ಉನ್ನತಿಹೊಂದಿದವರು ದುರ್ಬಲರಿಗೆ ಸಹಾಯಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಸ್ಕಾರ ಸಂಸ್ಕೃತಿಯನ್ನು ಅಭಿಮಾನದಿಂದ ಮುಂದಿನ ಪೀಳಿಗೆಗೆ ಕಲಿಸಬೇಕು ಹಾಗೂ ಸ್ವಾಭಿಮಾನ ದೇಶಾಭಿಮಾನ ವನ್ನು ಇಂದಿನಮಕ್ಕಳಲ್ಲಿ ಬೆಳಸಿ. ಜಾತಿ ಅಭಿಮಾನವನ್ನು ಪ್ರದರ್ಶಿಸದೆ ದೇಶದ ಉಳಿವಿಗಾಗಿ ಧರ್ಮಾಭಿಮಾನವನ್ನು ತೋರಬೇಕು. ಸಮಸ್ತ ಹಿಂದೂಗಳು ಒಂದೇ ಎನ್ನುವ ಭಾವನೆ ಸರ್ವರಲ್ಲೂ ಮೂಡುವಂತೆ ಆಚಾರ ವಿಚಾರ ಬದುಕು ಮಾದರಿಯಾಗಬೇಕು. ಈಮೂಲಕ ಒಗ್ಗಟ್ಟಾಗಿ ವಿದೇಶೀ ಅನಿಷ್ಟಮತದ ದಬ್ಬಾಳಿಕೆಯನ್ನು ಎದುರಿಸಿ ಹಿಂದೂಸ್ಥಾನವನ್ನು ಹಿಂದೂ ಧರ್ಮವನ್ನು ವಿಶ್ವಜ್ಯೋತಿಯಾಗಿಸಬೇಕು. ಎಲ್ಲದಕ್ಕೂ ಮೇಲ್ವರ್ಗವನ್ನು ದೂರುವುದು ಚಾಳಿಯಾಗಬಾರದು. ಹಾಗೆಯೇ ಕೆಳವರ್ಗದವರನ್ನು ಅಸ್ಪೃಶ್ಯರಂತೆ ನಡಿಸಿಕೊಳ್ಳುವುದೂ ನಿಲ್ಲಬೇಕು. ಇದು ಪರಸ್ಪರ ಸಮನ್ವಯದಿಂದ ಆಗಬೇಕು ಇಂದಿನ ಹಿಂದು ಸಮಾಜವು ಅಪಾಯವನ್ನು ಅರಿತು ಒಂದಾಗುತ್ತಿದೆ ಎನ್ನುವುದು ಸಮಾಧಾನ ಪೇಟೆಯಲ್ಲಿ ಜಾತಿಗೆ ಮಹತ್ವಕಡಿಮೆಯಾಗಿದೆ ಆದರೆ ಗ್ರಾಮೀಣ ಬದುಕಿನಲ್ಲಿ ಈ ತಾರತಮ್ಯ ಇನ್ನೂ ಜೀವಂತವಾಗಿದೆ ಅದನ್ನು ಹೋಗಲಾಡಿಸಬೇಕು.
- ಹಿಂದೂ ಸಮಾಜವನ್ನು ಒಗ್ಗೂಡಿಸಲು ನಾವೇನು ಮಾಡಬಹುದು ?
ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಜನರಲ್ಲಿ ಧಾರ್ಮಿಕ ಜಾಗ್ರತಿ ಮೂಡಿಸುವುದು. ಮಕ್ಕಳಿಗೆ ಧಾರ್ಮಿಕ ಜ್ಞಾನಾಧಾರಿತ ನೈತಿಕ ಶಿಕ್ಷಣ ಕೊಡುವುದು. ವೇದ ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಕಲಿಸುವುದು. ಸಂಸ್ಕೃತ ಭಾಷೆಯನ್ನು ಕಲಿಯಲು ಪ್ರಚೋದಿಸುವುದು ಹಾಗೂ ಅದಕ್ಕೆ ಅವಕಾಶಮಾಡಿಕೊಡುವುದು. ಗ್ರಾಮಮಟ್ಟದಲ್ಲಿ ಧಾರ್ಮಿಕ ಶ್ರದ್ಧಾಸ್ಥಳಗಳಲ್ಲಿ ಧರ್ಮಗ್ರಂಥಗಳ ಗ್ರಂಥಾಲಯ ಮಾಡಿ ಪುಸ್ತಕಗಳ ಮುಕ್ತ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಜ್ಞಾನದಿಂದ ದೇವರನ್ನು ಅರಿಯಬೇಕೇ ಹೊರತು ಮೌಢ್ಯ ಅಥವಾ ಭಯದಿಂದ ಅಲ್ಲ. ಧಾರ್ಮಿಕ ವ್ಯಾಪಾರವನ್ನು ಖಂಡಿಸಬೇಕು. ಡೋಂಗಿ ಜ್ಯೋತಿಷಿಗಳ ಅವಲಂಬನೆಯಿಂದ ಆದಷ್ಟು ಹೊರಬರಬೇಕು. ಪ್ರತಿಯೊಬ್ಬರೂ ಆತ್ಮ ವಿಶ್ವಾಸದಿಂದ ಮುಂದುವರಿಯಬೇಕು ಹಾಗೂ ಉತ್ತಮ ಕಾರ್ಯಗಳಿಗೆ ಎಂದೂ ದೇವರ ಸಹಾಯವಿರುವುದೆಂಬ ವಿಶ್ವಾಸ ಹೊಂದಬೇಕು. ಸರಕಾರೀ ನಿಯಂತ್ರಣದ ದೇವಾಲಯಗಳಿಗೆ ಹಣ ಹಾಕುವುದನ್ನು ಕಡಿಮೆ ಮಾಡಿ ಧರ್ಮಜಾಗ್ರತಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಹಿಂದೂ ಸಂಸ್ಥೆಗಳಿಗೂ ಹಿಂದು ಬಡಜನರ ಕಷ್ಟಗಳಿಗೆ ಸ್ಪಂದಿಸುವ ಸಾಮಾಜಿಕ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಸಹಕಾರ ಸಹಾಯ ಹಾಗೂ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ದೇವಸ್ಥಾನದ ಹಣ ಹಿಂದೂಗಳ ಧರ್ಮಪ್ರಚಾರಕ್ಕೆ ಬಳಕೆಯಾಗುವಂತೆ ಸರಕಾರದಮೇಲೆ ಒತ್ತಡತಂದು ಕೆಲಸ ಮಾಡಿಸಬೇಕು. ದೇವಾಲಯಗಳ ಆಡಳಿತ ಸಂಸ್ಕಾರವಂತರ ಕೈಯ್ಯಲ್ಲಿರಬೇಕು. ಇವೆಲ್ಲವನ್ನೂ ನಾವೆಲ್ಲ ಹಿಂದುಗಳೂ ಒಗ್ಗಟ್ಟಾದರೆ ಮಾಡಬಹುದು. ಹೀಗಾದರೆ ಹಿಂದುಸ್ಥಾನ ಹಿಂದುಗಳದ್ದಾಗಬಹುದು ಇಲ್ಲವಾದಲ್ಲಿ ಅಫಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ, ಬರ್ಮಾ ಮುಂತಾಗಿ ತುಂಡಾದ ಭಾರತ ಮುಂದೆಯೂ ತುಂಡಾಗುತ್ತಾ ಹಿಂದೂಗಳು ನಾಶವಾದರೂ ಆಗಬಹುದು. ಎಚ್ಚರಿಕೆ ವಹಿಸೋಣ ಅಖಂಡ ಭಾರತಕ್ಕಾಗಿ ಒಗ್ಗಟ್ಟಾಗೋಣ. ಜೈ ಹಿಂದ್ ಜೈ ಭಾರತಮಾತಾ ಎನ್ನುತ್ತಾ ಎಚ್ಚರಾಗೋಣ.
- ಶ್ರೀಜಿ